ಆ್ಯಪ್ನಗರ

‘ಶಾಂತಿ ಕಾಪಾಡಲು ಕಠಿಣ ಕ್ರಮ’: ಮಂಗಳೂರು ಗೋಲಿಬಾರ್‌ಗೆ ಉಸ್ತುವಾರಿ ಸಚಿವರ ಸಮರ್ಥನೆ

"ಶಾಂತಿಯುತ ಚಳವಳಿ ನಡೆಸಲು ಅವಕಾಶವಿದೆ. ಶಸ್ತ್ರಾಸ್ತ್ರ ಎತ್ತಿಕೊಂಡು ಬರುವ, ಟೆಂಪೊದಲ್ಲಿ ಕಲ್ಲು ತಂದು ಎಸೆಯುವ ಜನರನ್ನು ಸಮರ್ಥಿಸುವ ಕಾಂಗ್ರೆಸಿಗರು ತಮ್ಮ ಆತ್ಮದ ಜತೆ ಮಾತನಾಡಿಕೊಳ್ಳಲಿ," ಎಂದು ಕೋಟ ಶ್ರೀನಿವಾಸ ಪೂಜಾರಿ ಕಿಡಿಕಾರಿದ್ದಾರೆ.

Vijaya Karnataka 26 Dec 2019, 7:00 pm

ಮಂಗಳೂರು: “ಶಾಂತಿ ಸುವ್ಯವಸ್ಥೆ ಕಾಪಾಡುವುದು ಸರಕಾರದ ಕರ್ತವ್ಯ. ಮಂಗಳೂರಿನಲ್ಲಿ ಹಿಂಸಾಚಾರ ನಡೆದಾಗ ಜಿಲ್ಲಾಡಳಿತ ಮತ್ತು ಪೊಲೀಸ್‌ ಇಲಾಖೆ ಜತೆ ನಿಕಟ ಸಂಪರ್ಕದಲ್ಲಿದ್ದೆ. ಶಾಂತಿ ಕಾಪಾಡುವ ದೃಷ್ಟಿಯಿಂದ ಪೊಲೀಸರು ಕಠಿಣ ಕ್ರಮ ಕೈಗೊಂಡಿದ್ದಾರೆ,” ಎಂದು ಜಿಲ್ಲಾಉಸ್ತುವಾರಿ ಸಚಿವ ಕೋಟಿ ಶ್ರೀನಿವಾಸ ಪೂಜಾರಿ ಹೇಳಿದರು.
Vijaya Karnataka Web Kota Srinavasa Poojary


ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ, ಎಚ್‌ಡಿ ಕುಮಾರಸ್ವಾಮಿ, ಶಾಸಕ ಯುಟಿ ಖಾದರ್‌ ಸೇರಿದಂತೆ ಪ್ರತಿಪಕ್ಷದ ನಾಯಕರು ಜವಾಬ್ದಾರಿಯಿಂದ ಮಾತನಾಡಬೇಕು. ಮುಖಕ್ಕೆ ಬಟ್ಟೆ ಕಟ್ಟಿಕೊಂಡು ಗಲಾಟೆ ಮಾಡುವವರನ್ನು ಅಮಾಯಕರು ಎಂದು ಹೇಳುವುದು ಎಷ್ಟು ಸರಿ? ನಮ್ಮ ಸಹನೆಗೂ ಮಿತಿ ಇರುತ್ತದೆ ಎಂದು ಸುದ್ದಿಗೋಷ್ಠಿಯಲ್ಲಿ ಗುರುವಾರ ತಿಳಿಸಿದರು.

ಶಾಂತಿಯುತ ಚಳವಳಿ ನಡೆಸಲು ಅವಕಾಶವಿದೆ. ಶಸ್ತ್ರಾಸ್ತ್ರ ಎತ್ತಿಕೊಂಡು ಬರುವ, ಟೆಂಪೊದಲ್ಲಿ ಕಲ್ಲು ತಂದು ಎಸೆಯುವ ಜನರನ್ನು ಸಮರ್ಥಿಸುವ ಕಾಂಗ್ರೆಸಿಗರು ತಮ್ಮ ಆತ್ಮದ ಜತೆ ಮಾತನಾಡಿಕೊಳ್ಳಲಿ. ಪ್ರತಿಭಟನಾಕಾರರು ಶಸ್ತ್ರಾಸ್ತ್ರ ಅಂಗಡಿ ಲೂಟಿ ಮಾಡಲು ಬಯಸಿದ್ದರು ಎಂದು ಪೊಲೀಸರು ಹೇಳಿದ್ದನ್ನು ಮತ್ತು ಮಾಧ್ಯಮಗಳು ತೋರಿಸಿದ್ದನ್ನು ಹೇಳುತ್ತಿದ್ದೇನೆ ಎಂದು ಪ್ರಶ್ನೆಯೊಂದಕ್ಕೆ ಸಚಿವರು ಉತ್ತರಿಸಿದರು.

ಮಂಗಳೂರು ಗೋಲಿಬಾರ್ ಸಂತ್ರಸ್ತರ ಪರಿಹಾರದಲ್ಲೂ ರಾಜಕೀಯ ಏಕೆ? ಬಿಜೆಪಿ ವಿರುದ್ಧ ಖಾದರ್ ಕಿಡಿ

ಗೋಲಿಬಾರ್‌ ಸಾವಿನ ಬಳಿಕ ಸಿಎಂ ಪರಿಹಾರ ಘೋಷಿಸಿದ್ದೂ ಹೌದು. ಬಳಿಕ ತಡೆಹಿಡಿದದ್ದೂ ಸತ್ಯ. ಪೊಲೀಸರು ಮೃತರನ್ನು ಆರೋಪಿಗಳು ಎಂದು ಕೇಸು ದಾಖಲಿಸಿದ ಮತ್ತು ವಿಡಿಯೋ ತುಣುಕುಗಳ ಆಧಾರದಲ್ಲಿ ಪರಿಹಾರ ಕೊಡುತ್ತಿಲ್ಲ. ತನಿಖೆಯಲ್ಲಿ ನಿರಪರಾಧಿಗಳು ಎಂದು ಸಾಬೀತಾದಲ್ಲಿ ಪರಿಹಾರ ಕೊಡಬಹುದು ಎಂದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ