ಆ್ಯಪ್ನಗರ

ಸುಳ್ಯದ ವ್ಯಕ್ತಿಗೆ 4 ಕೋಟಿ ರೂ. ಕೇರಳ ಲಾಟರಿ ಬಹುಮಾನ

ದಕ್ಷಿಣ ಕನ್ನಡದ ಸುಳ್ಯದಲ್ಲಿ ನಿತೀಶ್ ಹೋಟೆಲ್ ನಡೆಸುತ್ತಿರುವ ಸುಧಾಮ ಮಣಿಯಾಣಿ ಎಂಬವರು ಸಮ್ಮರ್ ಬಂಪರ್ ಡ್ರಾ ವಿಜೇತರಾಗಿದ್ದು, ಮುಳ್ಳೇರಿಯಾದ ಏಜೆಂಟ್ ಮೂಲಕ ಟಿಕೆಟ್ ಖರೀದಿಸಿದ್ದರು.

Vijaya Karnataka Web 22 Mar 2019, 12:36 pm
ಮಂಗಳೂರು: ಕೇರಳ ರಾಜ್ಯ ಸರಕಾರ ಪ್ರಾಯೋಜಿತ ಲಾಟರಿಯಲ್ಲಿ ಸುಳ್ಯದ ವ್ಯಕ್ತಿಯೋರ್ವರಿಗೆ ಮೊದಲ ಬಹುಮಾನ ಬಂಪರ್ 4 ಕೋಟಿ ರೂ. ಲಭಿಸಿದೆ.
Vijaya Karnataka Web Sudhama


ದಕ್ಷಿಣ ಕನ್ನಡದ ಸುಳ್ಯದಲ್ಲಿ ನಿತೀಶ್ ಹೋಟೆಲ್ ನಡೆಸುತ್ತಿರುವ ಸುಧಾಮ ಮಣಿಯಾಣಿ ಎಂಬವರು ಸಮ್ಮರ್ ಬಂಪರ್ ಡ್ರಾ ವಿಜೇತರಾಗಿದ್ದು, ಮುಳ್ಳೇರಿಯಾದ ಏಜೆಂಟ್ ಮೂಲಕ ಟಿಕೆಟ್ ಖರೀದಿಸಿದ್ದರು.

ಸುಧಾಮ ಅವರು ಖರೀದಿಸಿದ್ದ ಎಸ್‌ಬಿ 131399 ನಂಬರ್‌ನ ಲಾಟರಿ ಟಿಕೆಟ್‌ಗೆ ಮೊದಲ ಬಹುಮಾನ ಲಭಿಸಿದೆ. ಲಾಟರಿ ಟಿಕೆಟ್‌ಗೆ ಬಹುಮಾನ ಲಭಿಸಿರುವ ಬಗ್ಗೆ ಗುರುವಾರ ಸಂಜೆ ಸುಧಾಮ ಅವರಿಗೆ ಮಾಹಿತಿ ಲಭಿಸಿದ್ದು, ಸುದ್ದಿ ಕೇಳಿ ಅವರು ಕ್ಷಣ ಅಚ್ಚರಿಗೊಳಗಾಗಿದ್ದಾರೆ.

ಮಾಹಿತಿ ದೊರೆತ ಬಳಿಕ ಅವರು ಕೇರಳ ಲಾಟರಿಯ ವೆಬ್‌ಸೈಟ್‌ನಲ್ಲಿ ಟಿಕೆಟ್ ನಂಬರ್ ಪರಿಶೀಲಿಸಿ, ಬಂಪರ್ ಬಹುಮಾನ ಬಂದಿರುವುದನ್ನು ಖಚಿತಪಡಿಸಿಕೊಂಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ