ಆ್ಯಪ್ನಗರ

ನಾಗಪಂಚಮಿಗೆ ಕೇದಗೆ ತರಲು ತೆರಳಿದ್ದ ವ್ಯಕ್ತಿ ನೀರುಪಾಲು

ನಾಗರಪಂಚಮಿ ಹಬ್ಬಕ್ಕೆ ಕೇದಗೆ ಹೂ ಸಂಗ್ರಹಿಸಲು ತರಲೆಂದು ತೆರಳಿದ ಯುವಕನೊಬ್ಬ ಇನೋಳಿ ಎಂಬಲ್ಲಿ ನೇತ್ರಾವತಿ ನದಿ ಪಾಲಾದ ಘಟನೆ ಗುರುವಾರ ಸಂಜೆ ನಡೆದಿದೆ.

Vijaya Karnataka 10 Aug 2018, 4:18 pm
ಕೊಣಾಜ: ನಾಗರಪಂಚಮಿ ಹಬ್ಬಕ್ಕೆ ಕೇದಗೆ ಹೂ ಸಂಗ್ರಹಿಸಲು ತರಲೆಂದು ತೆರಳಿದ ಯುವಕನೊಬ್ಬ ಇನೋಳಿ ಎಂಬಲ್ಲಿ ನೇತ್ರಾವತಿ ನದಿ ಪಾಲಾದ ಘಟನೆ ಗುರುವಾರ ಸಂಜೆ ನಡೆದಿದೆ.
Vijaya Karnataka Web taken the nagara panchami kedage man died
ನಾಗಪಂಚಮಿಗೆ ಕೇದಗೆ ತರಲು ತೆರಳಿದ್ದ ವ್ಯಕ್ತಿ ನೀರುಪಾಲು


ಪಜೀರು ಗ್ರಾಮದ ಪದ್ಮನಾಭ ನಾಯ್ಕ ಎಂಬವರ ಪುತ್ರ ಹರೀಶ್‌ ನಾಯ್ಕ(30) ನೀರುಪಾಲಾದವರು.

ಹರೀಶ್‌ ಅವರು ಇನೋಳಿಯ ಗುಂಡ್ಯ ಬಳಿ ಕೇದಗೆ ಹೂವನ್ನು ಕೊಯ್ಯಲೆಂದು ತೆರಳಿ ಬಳಿಕ ಅಲ್ಲಿಯೇ ನೀರು ನಿಂತ ಹಳ್ಳದಂತಹ ಪ್ರದೇಶದಲ್ಲಿ ಮೀನು ಹಿಡಿಯಲು ನಾಲ್ಕು ಮಂದಿ ಯುವಕರೊಂದಿಗೆ ತೆರಳಿದ್ದರು ಎನ್ನಲಾಗಿದೆ. ಆ ಸಂದರ್ಭ ಆಕಸ್ಮಿಕವಾಗಿ ನೀರಿನ ಸುಳಿಯಲ್ಲಿ ಮುಳುಗಿ ಮೃತಪಟ್ಟಿದ್ದು ಹರೀಶ್‌ ಅವರಿಗೆ ಈಜು ಬರುತ್ತಿರಲಿಲ್ಲ ಎನ್ನಲಾಗಿದೆ. ಮೃತದೇಹವನ್ನು ಕೊಣಾಜೆ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಹುಡುಕಾಡಿ ಸಂಜೆ ಪತ್ತೆ ಹಚ್ಚಿ ಮೇಲಕ್ಕೆತ್ತಿದ್ದಾರೆ. ಕೊಣಾಜೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮದುವೆ ಮನೆಯಲ್ಲಿ ಸೂತಕ: ಹರೀಶ್‌ ಅವರು ಅವಿವಾಹಿತರಾಗಿದ್ದು ತೆಂಗಿನ ಕಾಯಿ ಕೀಳುವುದು, ಅಡಕೆ ಮರಕ್ಕೆ ಮದ್ದು ಸಿಂಪಡಿಸುವುದು, ನಾಗರ ಪಂಚಮಿ ದಿವಸ ಎಳನೀರು ಹಾಗೂ ಕೇದಗೆ ಮಾರಾಟ, ಬೇಸಗೆಯಲ್ಲಿ ಸಂಬಂಧಿ ಜತೆ ಜಾತ್ರೆ ಮೊದಲಾದ ಸಂಭ್ರಮಗಳಲ್ಲಿ ಐಸ್‌ ಕ್ರೀಂ ಮಾರುತ್ತಾ ಜೀವನ ಸಾಗಿಸುತ್ತಿದ್ದರು. ಅದರಂತೆ ಆ. 15ರಂದು ನಡೆಯಲಿರುವ ನಾಗರಪಂಚಮಿಯಂದು ಮಾರಾಟ ಮಾಡಲೆಂದು ಕೇದಗೆ ಹಾಗೂ ಸಿಹಿಯಾಳ ಸಂಗ್ರಹದ ಉದ್ದೇಶದಿಂದ ಕೇದಗೆ ಸಂಗ್ರಹಕ್ಕೆ ತೆರಳಿದ್ದರು. ಹರೀಶ್‌ ಅವರಿಗೆ ಮೂವರು ಸೋದರಿಯರಿದ್ದು ಒಬ್ಬಾಕೆಗೆ ವಿವಾಹವಾಗಿದ್ದು ಒಬ್ಬಾಕೆಗೆ ಇದೇ ಆ. 29ರಂದು ಮದುವೆ ನಡೆಯಲಿತ್ತು. ಹರೀಶ್‌ ಅವರ ಸಾವಿನಿಂದ ಸಂಭ್ರಮದ ಮನೆಯಲ್ಲಿ ಸೂತಕದ ಛಾಯೆ ಆವರಿಸಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ