ಮಂಗಳೂರು: ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಭಾನುವಾರ ರಾತ್ರಿ 8.45 ಕ್ಕೆ ದುಬೈಗೆ ತೆರಳಬೇಕಾಗಿದ್ದ ಏರ್ ಇಂಡಿಯಾ ಎಕ್ಸ್ಪ್ರೆಸ್ ವಿಮಾನ ತಾಂತ್ರಿಕ ಕಾರಣಗಳಿಂದ ಟೇಕಾಫ್ ಆಗದೆ ವಿಮಾನ ನಿಲ್ದಾಣದಲ್ಲಿ ಬಾಕಿಯಾಗಿದೆ.
ವಿಮಾನದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ವಿಮಾನ ಟೇಕಾಫ್ ಸಮಯವನ್ನು ಮುಂದೂಡಲಾಗಿತ್ತು . ವಿಮಾನದ ತಾಂತ್ರಿಕ ದೋಷವನ್ನು ಸರಿಪಡಿಸಲು ತಜ್ಞರ ತಂಡ ಪ್ರಯತ್ನ ಪಡುತ್ತಿದ್ದು ತಡರಾತ್ರಿವರೆಗೂ ದುರಸ್ತಿ ಕಾರ್ಯ ಮುಂದುವರೆದಿದೆ.
ವಿಮಾನದಲ್ಲಿ ಸುಮಾರು 150ಕ್ಕೂ ಹೆಚ್ಚು ಮಂದಿ ಪ್ರಯಾಣಿಕರು ದುಬೈಗೆ ಪ್ರಯಾಣಿಸುವವರಿದ್ದು ಅವರ ಪ್ರಯಾಣ ಅತಂತ್ರವಾಗಿದೆ.
ವಿಮಾನದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ವಿಮಾನ ಟೇಕಾಫ್ ಸಮಯವನ್ನು ಮುಂದೂಡಲಾಗಿತ್ತು . ವಿಮಾನದ ತಾಂತ್ರಿಕ ದೋಷವನ್ನು ಸರಿಪಡಿಸಲು ತಜ್ಞರ ತಂಡ ಪ್ರಯತ್ನ ಪಡುತ್ತಿದ್ದು ತಡರಾತ್ರಿವರೆಗೂ ದುರಸ್ತಿ ಕಾರ್ಯ ಮುಂದುವರೆದಿದೆ.
ವಿಮಾನದಲ್ಲಿ ಸುಮಾರು 150ಕ್ಕೂ ಹೆಚ್ಚು ಮಂದಿ ಪ್ರಯಾಣಿಕರು ದುಬೈಗೆ ಪ್ರಯಾಣಿಸುವವರಿದ್ದು ಅವರ ಪ್ರಯಾಣ ಅತಂತ್ರವಾಗಿದೆ.