ಆ್ಯಪ್ನಗರ

ಮಂಗಳೂರು: ಬಿಲ್‌ ಕೊಡಲಾಗದೆ ವ್ಯಕ್ತಿ ಆಸ್ಪತ್ರೆಯಿಂದ ಪರಾರಿ

ಚಿಕಿತ್ಸೆಗೆಂದು ಆಸ್ಪತ್ರೆಗೆ ದಾಖಲಾಗಿದ್ದ ವ್ಯಕ್ತಿಯೊಬ್ಬ ಬಿಲ್‌ ಪಾವತಿಸಲು ಸಾಧ್ಯವಾಗದೆ, ಆಸ್ಪತ್ರೆಯಿಂದಲೇ ಪರಾರಿಯಾಗಿರುವ ಕುರಿತು ಉಳ್ಳಾಲ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ.

Vijaya Karnataka Web 31 Aug 2020, 9:08 am
ಉಳ್ಳಾಲ(ದ.ಕ.): ಚಿಕಿತ್ಸೆಗೆಂದು ಆಸ್ಪತ್ರೆಗೆ ದಾಖಲಾಗಿದ್ದ ವ್ಯಕ್ತಿಯೊಬ್ಬ ಬಿಲ್‌ ಪಾವತಿಸಲು ಸಾಧ್ಯವಾಗದೆ, ಆಸ್ಪತ್ರೆಯಿಂದಲೇ ಪರಾರಿಯಾಗಿರುವ ಕುರಿತು ಉಳ್ಳಾಲ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ.
Vijaya Karnataka Web hospital


ಚಿತ್ರದುರ್ಗ ಮೂಲದ ವ್ಯಕ್ತಿ ನಾಪತ್ತೆಯಾದವರು. ತಿಂಗಳ ಹಿಂದೆ ದೇರಳಕಟ್ಟೆ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗೆಂದು ವ್ಯಕ್ತಿ ದಾಖಲಾಗಿದ್ದರು. ಚಿಕಿತ್ಸೆ ಪಡೆದು ಗುಣಮುಖರಾಗಿದ್ದ ಅವರು ಆಸ್ಪತ್ರೆಯ ಬಿಲ್ ನೋಡಿ ಹೌಹಾರಿದ್ದರು. ತನ್ನ ಕೈಯಿಂದ ಬಿಲ್ ಪಾವತಿಸಲು ಅಸಾಧ್ಯವೆಂದು ತಿಳಿದಾಗ, ಅವರು ಅಲ್ಲಿಂದ ಪರಾರಿಯಾಗುವ ಯೋಚನೆ ಮಾಡಿದ್ದರು. ಅದರಂತೆ ಆ.30ರಂದು ಆಸ್ಪತ್ರೆಯಿಂದ ನಾಪತ್ತೆಯಾಗಿದ್ದಾರೆ.

ಆಸ್ಪತ್ರೆ ಮೂಲಗಳ ಪ್ರಕಾರ ಆತ ಕೋವಿಡ್‌ ಪಾಸಿಟಿವ್‌ ರೋಗಿಯಾಗಿದ್ದು ಬಿಲ್‌ ಕೇವಲ ಎರಡು ಸಾವಿರ ರೂ. ಆಗಿತ್ತು ಎನ್ನಲಾಗಿದೆ. ಈ ಕುರಿತು ಉಳ್ಳಾಲ ಠಾಣೆಯಲ್ಲಿಆಸ್ಪತ್ರೆ ಆಡಳಿತ ದೂರು ದಾಖಲಿಸಿದೆ.

ನಿಧನ ಗೋಪಾಲ್‌ ಕುಲಾಲ್‌
ಮಂಗಳೂರು: ನಗರದ ಉರ್ವ ನಿವಾಸಿ, ಪ್ರಸ್ತುತ ಗುರುಪುರದಲ್ಲಿರುವ ಗೋಪಾಲ್‌ ಕುಲಾಲ್‌(72) ಅಲ್ಪಕಾಲದ ಅಸೌಖ್ಯದಿಂದ ಆ.30ರಂದು ನಿಧನರಾದರು.

ಜಿಲ್ಲಾ ನ್ಯಾಯಾಲಯದಲ್ಲಿಗುಮಾಸ್ತರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು. ಸರಳ ಸಜ್ಜನರಾಗಿದ್ದ ಅವರು ಸಮಾಜ ಸೇವೆ, ಧಾರ್ಮಿಕ ಸೇವೆಯಲ್ಲಿ ತೊಡಗಿದ್ದರು. ಅವರಿಗೆ ಪತ್ನಿ, ಇಬ್ಬರು ಪುತ್ರಿಯರು ಇದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ