ಆ್ಯಪ್ನಗರ

ಸುರತ್ಕಲ್‌ ಎನ್‌ಐಟಿಕೆಯಲ್ಲಿ 22ರಿಂದ ಕಾರ್ಯಾಗಾರ

ಮಳೆ ನೀರು ಸಮುದ್ರಕ್ಕೆ ಸೇರುವ ಮುನ್ನ ಜಲಾಶಯದಲ್ಲಿ ಸಂಗ್ರಹಿಸಿ ಕುಡಿಯಲು ಬಳಸುವ ಕುರಿತು ಅಧ್ಯಯನ ಹಾಗೂ ಸಂಶೋಧನೆ ನಡೆಸಲಾಗುತ್ತಿದ್ದು, ಸುರತ್ಕಲ್‌ ಎನ್‌ಐಟಿಕೆಯಲ್ಲಿ ಈ ಕುರಿತು ಮೂರು ದಿನಗಳ ಕಾರ್ಯಾಗಾರ ಜು. 22ರಿಂದ ನಡೆಯಲಿದೆ.

Vijaya Karnataka 21 Jul 2019, 3:50 pm
ಮಂಗಳೂರು: ಮಳೆ ನೀರು ಸಮುದ್ರಕ್ಕೆ ಸೇರುವ ಮುನ್ನ ಜಲಾಶಯದಲ್ಲಿ ಸಂಗ್ರಹಿಸಿ ಕುಡಿಯಲು ಬಳಸುವ ಕುರಿತು ಅಧ್ಯಯನ ಹಾಗೂ ಸಂಶೋಧನೆ ನಡೆಸಲಾಗುತ್ತಿದ್ದು, ಸುರತ್ಕಲ್‌ ಎನ್‌ಐಟಿಕೆಯಲ್ಲಿ ಈ ಕುರಿತು ಮೂರು ದಿನಗಳ ಕಾರ್ಯಾಗಾರ ಜು. 22ರಿಂದ ನಡೆಯಲಿದೆ.
Vijaya Karnataka Web three day conference in suratkal nitk
ಸುರತ್ಕಲ್‌ ಎನ್‌ಐಟಿಕೆಯಲ್ಲಿ 22ರಿಂದ ಕಾರ್ಯಾಗಾರ


ನಗರದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಆಸ್ಪ್ರೇಲಿಯಾದ ವೆಲ್ಲಾಂಗಾಂಗ್‌ ವಿಶ್ವವಿದ್ಯಾಲಯದ ಪ್ರೊಫೆಸರ್‌ಗಳಾದ ಶಿವಕುಮಾರ್‌ ಮುತ್ತು ಕುಮಾರ್‌ ಹಾಗೂ ಶು-ಕ್ವಿಂಗ್‌ ಯಾಂಗ್‌ ಈ ವಿಷಯ ಪ್ರಕಟಿಸಿದರು.

ಶುದ್ಧ ಮಳೆ ನೀರು ಸಮುದ್ರ ಸೇರುವ ಮುನ್ನ ಅದನ್ನು ಶೇಖರಿಸಲು ಜಲಾಶಯ ನಿರ್ಮಿಸಲಾಗುವುದು. ಜತೆಗೆ ಮಳೆ ನೀರನ್ನು ಸಮುದ್ರಕ್ಕೂ ಹರಿಯ ಬಿಡಲಾಗುವುದು. ಸಮುದ್ರದ ಉಪ್ಪು ನೀರನ್ನು ಸಂಸ್ಕರಿಸಿ ಕುಡಿಯಲು ಬಳಸಲು ತಗಲುವ ವೆಚ್ಚಕ್ಕಿಂತ ಮಳೆ ನೀರು ಜಲಾಶಯ ನಿರ್ಮಾಣದ ವೆಚ್ಚ ಕಡಿಮೆಯಾಗಲಿದೆ. ಇದರ ಧಾರಣಾ ಸಾಮರ್ಥ್ಯ‌ವೂ ಅಧಿಕವಾಗಿದೆ ಎಂದರು.

ಆಸ್ಪ್ರೇಲಿಯಾದ ವೆಲ್ಲಾಂಗಾಂಗ್‌ ವಿಶ್ವವಿದ್ಯಾಲಯದ ಪ್ರೊಫೆಸರ್‌ ಶು-ಕ್ವಿಂಗ್‌ ಯಾಂಗ್‌ ಮಾತನಾಡಿ, ಚೀನಾದ ಶಾಂಘೈ ನಗರದಲ್ಲಿ ಮಳೆ ನೀರಿನ ನಾಲ್ಕು ಜಲಾಶಯಗಳಿವೆ. ಶಾಂಘೈನ ಶೇ. 40ರಷ್ಟು ಜನರು ಇದನ್ನೇ ಬಳಸುತ್ತಾರೆ. ನಾಲ್ಕು ಜಲಾಶಯಗಳ ಪೈಕಿ ಒಂದರಿಂದಲೇ ಸುಮಾರು 10 ಮಿಲಿಯ ಜನರಿಗೆ ಕುಡಿಯುವ ನೀರು ಒದಗಿಸಲಾಗುತ್ತಿದೆ. ಸಿಂಗಾಪುರ, ಹಾಂಕಾಂಗ್‌, ಜಪಾನ್‌ ಮುಂತಾದ ದೇಶಗಳಲ್ಲಿ ಮಳೆ ನೀರಿನ ಜಲಾಶಯಗಳಿವೆ. ಇದರಿಂದ ನೀರಿನ ಸುರಕ್ಷತೆ ಹೆಚ್ಚಾಗಲಿದೆ. ಮಳೆ ನೀರು ಜಲಾಶಯದಿಂದ ಕಡಲ ಪರಿಸರ, ಸಮುದ್ರದ ಜೀವ ವೈವಿಧ್ಯತೆಗೆ ಯಾವುದೇ ಬಾಧಕವಾಗಲಾರದು. ಇದರಿಂದ ಪ್ರತ್ಯೇಕ ಇಕೋ ಸ್ಟಿಸಂ ಸೃಷ್ಟಿಯಾಗಲಿದೆ ಎಂದು ಹೇಳಿದರು.

ಸುರತ್ಕಲ್‌ನ ಎನ್‌ಐಟಿಕೆಯಲ್ಲಿ ನಡೆಯಲಿರುವ ಮೂರು ದಿನಗಳ ಕಾರ್ಯಾಗಾರದಲ್ಲಿ ಮರೈನ್‌ ಇಕಾಲಜಿ, ಅಂತರ್ಜಲ ಗುಣಮಟ್ಟ , ಭೂ ಕುಸಿತದಲ್ಲಾಗುವ ಬದಲಾವಣೆ ಮುಂತಾದ ವಿಷಯಗಳ ಕುರಿತು ಅಧ್ಯಯನ ಹಾಗೂ ಸಂಶೋಧನೆ ನಡೆಸಲಾಗುವುದು ಎಂದು ಕಾರ್ಯಾಗಾರದ ಸಂಯೋಜಕ ಡಾ. ರಮೇಶ್‌ ನುಡಿದರು.

ಕಾರ್ಯಾಗಾರ ಅಧ್ಯಕ್ಷತೆಯನ್ನು ಎನ್‌ಐಟಿಕೆ ನಿರ್ದೇಶಕ ಪ್ರೊ. ಕೆ. ಉಮಾಮಹೇಶ್ವರ್‌ ರಾವ್‌ ವಹಿಸಲಿದ್ದಾರೆ.ಗುವಾಹಟಿ ಐಐಟಿ ನಿರ್ದೇಶಕ ಪ್ರೊ. ಟಿ.ಜಿ. ಸೀತಾರಾಮ್‌ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿರಲಿದ್ದಾರೆ ಎಂದು ಅವರು ತಿಳಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ