ಆ್ಯಪ್ನಗರ

ನೀರಿನ ಟ್ಯಾಂಕ್‌ಗೆ ಬಿದ್ದು ಮೂವರು ಮಕ್ಕಳ ಸಾವು

ಇವರು ಅಣ್ಣ ತಮ್ಮಂದಿರ ಮಕ್ಕಳು. ಮನೆಯಿಂದ ದೂರದಲ್ಲಿ ಬೆಟ್ಟದ ಮೇಲಿರುವ ಹೊಸ ಟ್ಯಾಂಕ್‌ ನೋಡಲು ಹೋಗಿದ್ದರು.

Vijaya Karnataka Web 3 Apr 2019, 8:38 pm
ಪುತ್ತೂರು: ತಾಲೂಕು ಬೆಟ್ಟಂಪಾಡಿ ಗ್ರಾಮದ ಉಡ್ಡಂಗಳದಲ್ಲಿ ಗ್ರಾಮ ಪಂಚಾಯತಿಯ ಟ್ಯಾಂಕಿಗೆ ಬಿದ್ದು ಮೂವರು ಮಕ್ಕಳು ಮೃತಪಟ್ಟಿದ್ದಾರೆ.
Vijaya Karnataka Web ನೀರಿನ ಟ್ಯಾಂಕ್‌
ನೀರಿನ ಟ್ಯಾಂಕ್‌


ರವಿ ಕುಲಾಲ್ ಮಗ ಜಿತೇಶ್ (12), ಹರೀಶ್ ಕುಲಾಲ್ ಮಕ್ಕಳಾದ ವಿಶ್ಮಿತಾ (13), ಚೈತ್ರಾ (10) ಮೃತರು.

ಇವರು ಅಣ್ಣ ತಮ್ಮಂದಿರ ಮಕ್ಕಳು. ಮನೆಯಿಂದ ದೂರದಲ್ಲಿ ಬೆಟ್ಟದ ಮೇಲಿರುವ ಹೊಸ ಟ್ಯಾಂಕ್‌ ನೋಡಲು ಹೋಗಿದ್ದರು.

ಹತ್ತಲು ಮತ್ತು ಒಳಗೆ ಇಳಿಯಲು ಏಣಿ ಇದ್ದು, ಇದರಲ್ಲಿ ಆಟವಾಡಲು ತೆರಳಿದ್ದರು ಎಂಬ ಶಂಕೆ ವ್ಯಕ್ತವಾಗಿದೆ.

ಮಕ್ಕಳು ಏಣಿ ಹತ್ತಿ ಇಳಿಯುವಾಗ ಆಕಸ್ಮಿಕವಾಗಿ ಬಿದ್ದು ಮೃತಪಟ್ಟಿರಬಹುದು ಎಂದು ಶಂಕಿಸಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ