ಆ್ಯಪ್ನಗರ

ಪಾಣೆಮಂಗಳೂರು: ನೇತ್ರಾವತಿ ಸೇತುವೆಯಿಂದ ಹಾರಿದ ಮಹಿಳೆ ಸಹಿತ ಮೂವರು ಸಾವು

ನೇತ್ರಾವತಿ ಸೇತುವೆಯಿಂದ ಮೂವರು ನದಿಗೆ ಹಾರಿದ್ದು, ಅವರ ಪೈಕಿ ಓರ್ವ ಮಹಿಳೆಯನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

Vijaya Karnataka 29 Sep 2019, 7:13 am
ಬಂಟ್ವಾಳ: ಬಂಟ್ವಾಳ ಬಿ.ಸಿ.ರೋಡಿನ ರಾಷ್ಟ್ರೀಯ ಹೆದ್ದಾರಿ 75ರ ನೇತ್ರಾವತಿ ಸೇತುವೆಯಿಂದ ಮೂವರು ನದಿಗೆ ಹಾರಿದ್ದು, ಅವರ ಪೈಕಿ ಓರ್ವ ಮಹಿಳೆಯನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
Vijaya Karnataka Web panemangalore


ಮೈಸೂರು ನೋಂದಣಿ ಇರುವ ವಾಹನದಲ್ಲಿಆಗಮಿಸಿದ ತಂಡ ಈ ಕೃತ್ಯ ಎಸಗಿದ್ದು, ಕಾರಿನಲ್ಲಿದ್ದವರು ಕೊಡಗು ಮೂಲದವರು ಎಂದು ಹೇಳಲಾಗುತ್ತಿದೆ.

ಮಾರುತಿ ಇಕೋ ಕಾರಿನಲ್ಲಿಕುಟುಂಬವೆಂದು ಹೇಳಲಾಗುತ್ತಿರುವ ಮಹಿಳೆ, ಪುರುಷ ಮತ್ತು ಚಿಕ್ಕ ವಯಸ್ಸಿನ ಹುಡುಗನಿದ್ದ ತಂಡ ಸೇತುವೆಯ ಬಳಿ ವಾಹನ ನಿಲ್ಲಿಸಿ, ನಾಯಿಯೊಂದಿಗೆ ಸೇತುವೆ ಬಳಿ ಬಂದಿತ್ತು.. ಮೊದಲು ನಾಯಿಯನ್ನು ನದಿಗೆ ತಳ್ಳಿ ಬಳಿಕ ಒಬ್ಬೊಬ್ಬರಾಗಿ ನದಿಗೆ ಹಾರಿದ್ದಾರೆ. ಕೂಡಲೇ ಸ್ಥಳೀಯರು ಕಾರ್ಯಪ್ರವೃತ್ತರಾಗಿದ್ದು, ಮೊದಲು ಗೂಡಿನಬಳಿ ಹಳೇ ಸೇತುವೆ ಬಳಿ ಮಹಿಳೆಯನ್ನು ರಕ್ಷಿಸಿದ್ದರು. ಜೊತೆಗೆ ನಾಯಿಯನ್ನೂ ಸ್ಥಳೀಯರು ರಕ್ಷಿಸಿದ್ದಾರೆ.

ಕಾರಿನಲ್ಲಿಬಂದು ನೀರಿಗೆ ಹಾರಿದವರ ವಿವರ ಇನ್ನಷ್ಟೇ ತಿಳಿಯಬೇಕಿದೆ. ಬಂಟ್ವಾಳ ನಗರ ಎಸ್ಸೆತ್ರೖ ಚಂದ್ರಶೇಖರ್‌ ಸ್ಥಳದಲ್ಲಿದ್ದು ತನಿಖೆ ನಡೆಸುತ್ತಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ