ಆ್ಯಪ್ನಗರ

ಇಂದು ಗುರುಪೂರ್ಣಿಮೆ ದಿನಾಚರಣೆ

ಸನಾತನ ಸಂಸ್ಥೆ ಮತ್ತು ಹಿಂದೂ ಜನಜಾಗೃತಿ ಸಮಿತಿ ವತಿಯಿಂದ ಜು.16ರಂದು ಸಂಜೆ 4.30ಕ್ಕೆ ನಗರದ ಎಸ್‌ಡಿಎಂ ಕಾಲೇಜು ಸಭಾಂಗಣದಲ್ಲಿ ಗುರುಪೂರ್ಣಿಮಾ ಮಹೋತ್ಸವ ಆಚರಣೆ ನಡೆಯಲಿದೆ.

Vijaya Karnataka 16 Jul 2019, 3:17 pm
ಮಂಗಳೂರು : ಸನಾತನ ಸಂಸ್ಥೆ ಮತ್ತು ಹಿಂದೂ ಜನಜಾಗೃತಿ ಸಮಿತಿ ವತಿಯಿಂದ ಜು.16ರಂದು ಸಂಜೆ 4.30ಕ್ಕೆ ನಗರದ ಎಸ್‌ಡಿಎಂ ಕಾಲೇಜು ಸಭಾಂಗಣದಲ್ಲಿ ಗುರುಪೂರ್ಣಿಮಾ ಮಹೋತ್ಸವ ಆಚರಣೆ ನಡೆಯಲಿದೆ.
Vijaya Karnataka Web today gurupoornima day
ಇಂದು ಗುರುಪೂರ್ಣಿಮೆ ದಿನಾಚರಣೆ


ಗುರುಪೂರ್ಣಿಮೆ ದಿನ ಗುರುಗಳ ಬಗ್ಗೆ ಕೃತಜ್ಞತೆಯನ್ನು ವ್ಯಕ್ತಪಡಿಸುವ ಪರಪರೆಯು ಅನಾದಿ ಕಾಲದಿಂದ ನಡೆಯುತ್ತಾ ಬಂದಿದೆ. ಈ ಉದ್ದೇಶದಿಂದ ಸನಾತನ ಸಂಸ್ಥೆ ಮತ್ತು ಹಿಂದೂ ಜನಜಾಗೃತಿ ಸಮಿತಿ ಇತರ ಸಮವಿಚಾರಿ ಸಂಘಟನೆಗಳೊಂದಿಗೆ ಈ ಸಲ ದೇಶದಾದ್ಯಂತ 112 ಸ್ಥಳಗಳಲ್ಲಿ ಗುರುಪೂರ್ಣಿಮಾ ಮಹೋತ್ಸವದ ಆಯೋಜನೆಯನ್ನು ಮಾಡಲಾಗಿದೆ.

ಈ ಮಹೋತ್ಸವದಲ್ಲಿ ಶ್ರೀ ವ್ಯಾಸಪೂಜೆ ಮತ್ತು ಗುರುಪೂಜೆ, ಹಿಂದೂ ರಾಷ್ಟ್ರ ಸ್ಥಾಪನೆಗಾಗಿ ಹಿಂದೂ ಸಂಘಟನೆಯ ಅದ್ವಿತೀಯ ಕಾರ್ಯ ಮತ್ತು ಪರಾತ್ಪರ ಗುರು ಡಾ.ಜಯಂತ ಆಠವಲೆ ಅವರ ಅಲೌಕಿಕ ಕಾರ್ಯ ಈ ವಿಷಯದ ಬಗ್ಗೆ ಕಿರುಚಿತ್ರ, ಸಮಾಜಸೇವೆಯಲ್ಲಿರುವ ಗಣ್ಯರಿಂದ ರಾಷ್ಟ್ರ ಮತ್ತು ಧರ್ಮದ ಮಾರ್ಗದರ್ಶನ, ಧರ್ಮಾಧಿಷ್ಠಿತ ಹಿಂದೂ ರಾಷ್ಟ್ರ ಸ್ಥಾಪನೆಯ ಆವಶ್ಯಕತೆ ಮತ್ತು ಹಿಂದೂಗಳ ಯೋಗದಾನ ಈ ವಿಷಯದಲ್ಲೂ ಮಾರ್ಗದರ್ಶನ ನಡೆಯಲಿದೆ. ಈ ಮಹೋತ್ಸವದಲ್ಲಿ ಸನಾತನದ ಗ್ರಂಥಗಳ ಪ್ರದರ್ಶನ, ರಾಷ್ಟ್ರ ಮತ್ತು ಧರ್ಮ ಜಾಗೃತಿಪರ ಫಲಕಗಳ ಪ್ರದರ್ಶನ ಇತ್ಯಾದಿ ನಡೆಯಲಿದೆ ಎಂದು ಎಂದು ಸನಾತನ ಸಂಸ್ಥೆಯ ಪ್ರಕಟಣೆ ತಿಳಿಸಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ