ಆ್ಯಪ್ನಗರ

ಶಾಲಾ ಆವರಣದಲ್ಲಿ ಸಂಚಾರಿ ಸ್ವಯಂಸೇವಕರು

ಮಕ್ಕಳಿಗೆ ರಸ್ತೆ ದಾಟಲು, ಬಸ್‌ ಮತ್ತು ಇತರ ವಾಹನ ಹತ್ತಲು ಅನುಕೂಲವಾಗುವಂತೆ ಸಂಚಾರ ಸ್ವಯಂಸೇವಕರು(ಟ್ರಾಫಿಕ್‌ ವಾಲಂಟಿಯರ್‌)ಗಳನ್ನು ನೇಮಕ ಮಾಡಲು ಉದ್ದೇಶಿಸಿದ್ದು, ಈ ಬಗ್ಗೆ ಶೀಘ್ರ ಸಂಬಂಧ ಪಟ್ಟವರ ಸಭೆ ನಡೆಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಮಂಗಳೂರು ಪೊಲೀಸ್‌ ಆಯುಕ್ತ ಡಾ. ಹರ್ಷ ಪಿ.ಎಸ್‌. ತಿಳಿಸಿದ್ದಾರೆ.

Vijaya Karnataka 17 Aug 2019, 5:06 pm
ಮಂಗಳೂರು: ಮಕ್ಕಳಿಗೆ ರಸ್ತೆ ದಾಟಲು, ಬಸ್‌ ಮತ್ತು ಇತರ ವಾಹನ ಹತ್ತಲು ಅನುಕೂಲವಾಗುವಂತೆ ಸಂಚಾರ ಸ್ವಯಂಸೇವಕರು(ಟ್ರಾಫಿಕ್‌ ವಾಲಂಟಿಯರ್‌)ಗಳನ್ನು ನೇಮಕ ಮಾಡಲು ಉದ್ದೇಶಿಸಿದ್ದು, ಈ ಬಗ್ಗೆ ಶೀಘ್ರ ಸಂಬಂಧ ಪಟ್ಟವರ ಸಭೆ ನಡೆಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಮಂಗಳೂರು ಪೊಲೀಸ್‌ ಆಯುಕ್ತ ಡಾ. ಹರ್ಷ ಪಿ.ಎಸ್‌. ತಿಳಿಸಿದ್ದಾರೆ.
Vijaya Karnataka Web 16m-phone in


ಶುಕ್ರವಾರ ಕಮಿಷನರ್‌ ಕಚೇರಿಯಲ್ಲಿ ನಡೆದ ಫೋನ್‌-ಇನ್‌ ಕಾರ್ಯಕ್ರಮದಲ್ಲಿ ನಾಗರಿಕರ ಪ್ರಶ್ನೆಗಳಿಗೆ ಉತ್ತರಿಸಿ ಮಾತನಾಡಿದರು.

ಶಾಲಾ ಸಮಿತಿ ಮತ್ತು ನಾಗರಿಕರ ಸಹಕಾರದೊಂದಿಗೆ ಟ್ರಾಫಿಕ್‌ ವಾರ್ಡನ್‌ ಮಾದರಿಯಲ್ಲಿಯೇ ಟ್ರಾಫಿಕ್‌ ವಾಲಂಟಿಯರ್‌ ವ್ಯವಸ್ಥೆ ಜಾರಿಗೊಳಿಸಲಾಗುವುದು ಎಂದರು.

ಉಳ್ಳಾಲ- ಸ್ಟೇಟ್‌ಬ್ಯಾಂಕ್‌ ನಡುವಿನ ಸಿಟಿಬಸ್‌ಗಳು ಪೈಪೋಟಿಗಿಳಿದು, ಸಮಯಪಾಲನೆ ಮಾಡುತ್ತಿಲ್ಲ ಎಂದು ದೂರಿಗೆ ಬಸ್‌ ಮಾಲೀಕರ ಸಂಘದ ಗಮನಕ್ಕೆ ತರಲಾಗುವುದು ಎಂದು ಆಯುಕ್ತರು ತಿಳಿಸಿದರು. ಶೀಘ್ರ ಟೈಮ್‌ ಕೀಪರ್‌ಗಳನ್ನು ನೇಮಕ ಮಾಡುಬುದಾಗಿ ದಕ್ಷಿಣ ಕನ್ನಡ ಬಸ್‌ ಮಾಲೀಕರ ಸಂಘದ ಅಧ್ಯಕ್ಷ ದಿಲ್‌ರಾಜ್‌ ಆಳ್ವ ತಿಳಿಸಿದರು.

ನಗರದಲ್ಲಿ ಭಿಕ್ಷುಕರ ಹಾವಳಿ ಹಾಗೂ ಫುಟ್‌ಪಾತ್‌ನಲ್ಲಿ ಗಲೀಜು ಮಾಡುತ್ತಿರುವ ಬಗ್ಗೆ ಹಲವು ಜನರಿಂದ ದೂರುಗಳು ಬಂದಿದ್ದು, ಭಿಕ್ಷುಕರನ್ನು ಪುನರ್ವಸತಿ ಕೇಂದ್ರಕ್ಕೆ ಕಳುಹಿಸಲು ಸೂಚಿಸಲಾಯಿತು.

ಕ್ಯಾಬ್‌ ಚಾಲಕ, ಮಾಲೀಕರು ಕಿರುಕುಳ ನೀಡುತ್ತಿದ್ದಾರೆ ಎಂಬ ಓಲಾ ವಾಹನದ ಚಾಲಕರೊಬ್ಬರ ಅಹವಾಲಿಗೆ ಓಲಾ ಮತ್ತು ಕ್ಯಾಬ್‌ ಚಾಲಕ, ಮಾಲೀಕರ ಸಭೆ ನಡೆಸಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲಾಗುವುದು ಎಂದು ಆಯುಕ್ತರು ತಿಳಿಸಿದರು.

ಹೋಟೆಲ್‌ಗಳಲ್ಲಿ ದುಡಿಯುತ್ತಿರುವ ಸಿಬ್ಬಂದಿಗೆ ನೀಡಲಾದ ವಾಸ್ತವ್ಯ ಕೊಠಡಿಗಳಲ್ಲಿ ಸ್ವಚ್ಛತೆಯೇ ಇಲ್ಲ. ಸಾಂಕ್ರಾಮಿಕ ರೋಗದ ಭೀತಿಯಿದೆ ಎಂದು ಕಾರ್ಮಿಕರೊಬ್ಬರು ದೂರು ನೀಡಿದರು. ಈ ಬಗ್ಗೆ ಮಹಾನಗರ ಪಾಲಿಕೆಯ ಆರೋಗ್ಯ ಇಲಾಖೆಯ ಸ್ಥಾಯೀ ಸಮಿತಿಯ ಗಮನಕ್ಕೆ ತರಲಾಗುವುದು ಎಂದರು.

ನೋ ಪಾರ್ಕಿಂಗ್‌ ಜಾಗದಲ್ಲಿ ಮಾಧ್ಯಮದವರು ವಾಹನ ನಿಲುಗಡೆ ಮಾಡುತ್ತಿರುವುದು ಸರಿಯೇ ಎಂದು ನಾಗರಿಕರೊಬ್ಬರು ಪ್ರಶ್ನಿಸಿದರು. ಕಾನೂನಿಗೆ ಎಲ್ಲರೂ ಸಮಾನರು. ಮಾಧ್ಯಮದವರಾಗಲಿ, ಪೊಲೀಸರಾಗಲಿ, ಮೋಟಾರು ವಾಹನ ಕಾಯಿದೆ ಉಲ್ಲಂಘಿಸಿದರೆ ಎಲ್ಲರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಡಾ. ಹರ್ಷ ತಿಳಿಸಿದರು.

ಫೋನ್‌-ಇನ್‌ ಕಾರ‍್ಯಕ್ರಮದಲ್ಲಿ ಕೆನರಾ ಬಸ್‌ ಮಾಲೀಕರ ಸಂಘದ ಧ್ಯಕ್ಷ ರಾಜವರ್ಮ ಬಲ್ಲಾಳ್‌, ದಕ್ಷಿಣ ಕನ್ನಡ ಬಸ್‌ ಮಾಲೀಕರ ಸಂಘದ ಅಧ್ಯಕ್ಷ ದಿಲ್‌ರಾಜ್‌ ಆಳ್ವ, ಡಿಸಿಪಿಗಳಾದ ಅರುಣಾಂಷುಗಿರಿ ಮತ್ತು ಲಕ್ಷ್ಮೀ ಗಣೇಶ್‌, ಎಸಿಪಿಗಳಾದ ಮಂಜುನಾಥ ಶೆಟ್ಟಿ ಮತ್ತು ವಿನಯ್‌ ಎ. ಗಾಂವ್‌ಕರ್‌, ಟ್ರಾಫಿಕ್‌ ಇನ್ಸ್‌ಸ್ಪೆಕ್ಟರ್‌ಗಳಾದ ಮೋಹನ್‌ ಕೊಟ್ಟಾರಿ, ಗುರುದತ್ತ ಕಾಮತ್‌, ಎಎಸ್‌ಐ ಯುವರಾಜ್‌, ಹೆಡ್‌ಕಾನ್ಸ್‌ಟೆಬಲ್‌ ಪುರುಷೋತ್ತಮ ಉಪಸ್ಥಿತರಿದ್ದರು.

ಕೆಲವು ಪ್ರಮುಖ ದೂರುಗಳು

* ಕೊಟ್ಟಾರ ಚೌಕಿಯ ಸುಬ್ರಹ್ಮಣ್ಯಪುರದಲ್ಲಿ ನೋ ಪಾರ್ಕಿಂಗ್‌ ಫಲಕ ಹಾಗೂ ಬಸ್‌ ತಂಗುದಾಣಕ್ಕೆ ಶೆಲ್ಟರ್‌ ನಿರ್ಮಿಸಬೇಕು.

* ಪಿ.ವಿ.ಎಸ್‌. ಜಂಕ್ಷನ್‌ ಸಹಿತ ಕೆಲವು ವೃತ್ತಗಳಲ್ಲಿ ವಾಹನಗಳನ್ನು ಅಡ್ಡಾ ದಿಡ್ಡಿ ನಿಲ್ಲಿಸಿ ಟ್ರಾಫಿಕ್‌ ಜಾಂ ಸಮಸ್ಯೆ ಸೃಷ್ಟಿಯಾಗುತ್ತಿದೆ.

* ಮೂಡುಬಿದಿರೆ ಮಸೀದಿ ಎದುರು ಅನಧಿಕೃತವಾಗಿ ವಾಹನ ನಿಲುಗಡೆ ಮಾಡಿ ಸಂಚಾರಕ್ಕೆ ಅಡ್ಡಿ ಪಡಿಸಲಾಗುತ್ತಿದೆ

* ನಗರದ 33ಸಿ ಮತ್ತು 60 ನಂಬರ್‌Ü ಸಿಟಿ ಬಸ್‌ಗಳಲ್ಲಿ ಟಿಕೆಟ್‌ ನೀಡುತ್ತಿಲ್ಲ.

* ಕಾವೂರು ಮತ್ತು ಇತರ ಕೆಲವು ಕಡೆ ಶಾಲೆಗಳ ಬಳಿ ಮಕ್ಕಳಿಗೆ ರಸ್ತೆ ದಾಟಲು ಅನುಕೂಲವಾಗಲೆಂದು ಹಾಕಿದ್ದ ಬ್ಯಾರಿಕೇಡ್‌ಗಳನ್ನು ಕೆಲವು ಮಂದಿ ಬೈಕ್‌ ಸವಾರರು ಬದಿಗೆ ಸರಿಸುತ್ತಿದ್ದು, ಈ ಬಗ್ಗೆ ಕ್ರಮ ಆಗಬೇಕು.

* ಕುಳಾಯಿ ಹೊನ್ನಕಟ್ಟೆ ಜಂಕ್ಷನ್‌, ಬೈಕಂಪಾಡಿಯ ಜೋಕಟ್ಟೆ ಕ್ರಾಸ್‌ ಬಳಿ, ಮಂಗಳೂರಿನ ಗಣಪತಿ ಹೈಸ್ಕೂಲ್‌ ರೋಡ್‌ (ವಿಮಲೇಶ್‌ ಹೋಟೆಲ್‌ ಎದುರು) ಮತ್ತಿತರ ಕಡೆ ರಸ್ತೆಯಲ್ಲಿ ಗುಂಡಿ ನಿರ್ಮಾಣವಾಗಿ ವಾಹನ ಸಂಚಾರ ಕಷ್ಟವಾಗಿದೆ.

*ಮಹಾಕಾಳಿಪಡ್ಪು ರೈಲ್ವೆ ಕ್ರಾಸಿಂಗ್‌ ಬಳಿ ಟ್ರಾಫಿಕ್‌ ಪೊಲೀಸ್‌ ಸಿಬ್ಬಂದಿ ನೇಮಿಸಬೇಕು.

* ವಾಮಂಜೂರು ಎಸ್‌ಸಿಡಿಸಿಸಿ ಬ್ಯಾಂಕ್‌ ಎದುರು ಅಪರಿಚಿತರು ಕಸ ತಂದು ರಾಶಿ ಹಾಕುತ್ತಿದ್ದು, ಈ ಬಗ್ಗೆ ಕ್ರಮ ಕೈಗೊಳ್ಳಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ