ಆ್ಯಪ್ನಗರ

ಡೆಂಗೆ ಜ್ವರಕ್ಕೆ ಖಾಸಗಿ ಸುದ್ದಿ ವಾಹಿನಿಯ ಕ್ಯಾಮೆರಾಮನ್ ಬಲಿ

ಡೆಂಗೆ ಜ್ವರಕ್ಕೆ ಖಾಸಗಿ ವಾಹಿನಿಯೊಂದರ ಕ್ಯಾಮೆರಾಮೆನ್ ಬಲಿಯಾಗಿದ್ದಾರೆ.

Vijaya Karnataka Web 22 Jul 2019, 8:35 am
ಮಂಗಳೂರು: ಮಹಾಮಾರಿ ಡೆಂಗೆ ಜ್ವರಕ್ಕೆ ಖಾಸಗಿ ವಾಹಿನಿಯೊಂದರ ಕ್ಯಾಮೆರಾಮೆನ್ ನಾಗೇಶ್ ಪಡು (34) ಬಲಿಯಾಗಿದ್ದಾರೆ. ಈ ಮೂಲಕ ಮಂಗಳೂರು ಮಹಾನಗರದಲ್ಲಿ ಡೆಂಗೆಗೆ ಬಲಿಯಾದವವರ ಮೂರಕ್ಕೆ ಏರಿದೆ.
Vijaya Karnataka Web cameramen


ಇವರು ಸುಮಾರು 10 ವರ್ಷದಿಂದ ಮಂಗಳೂರಿನಲ್ಲಿ ಟಿವಿ ಕ್ಯಾಮೆರಾಮ್ ಆಗಿ ದುಡಿಯುತ್ತಿದ್ದು, ಸ್ಥಳೀಯ ಹಾಗೂ ರಾಜ್ಯಮಟ್ಟದ ವಾಹಿನಿಗಳಲ್ಲಿ ಕರ್ತವ್ಯ ನಿರ್ವಹಿಸಿದ್ದಾರೆ.

ವರದಿಗಾರಿಕೆಗೆ ತೆರಳಿದ್ದಾಗ ಸೋಂಕು

ನಾಗೇಶ್ ಪಡು ಸೇರಿದಂತೆ 4ಮಂದಿಯ ತಂಡ ಡೆಂಗೆ ಜ್ವರ ಪೀಡಿತ ನಗರದ ಜಪ್ಪು ಪ್ರದೇಶಕ್ಕೆ ಸುಮಾರು ಎಂಟು ದಿನಗಳ ಹಿಂದೆ ವರದಿಗಾರಿಕೆಗೆ ತೆರಳಿದ್ದರು. ವರದಿಗಾರಿಕೆ ಮಾಡಿ ಬಂದ ಬಳಿಕ ಎಲ್ಲರಿಗೂ ಜ್ವರದ ಸೋಂಕು ತಗುಲಿತ್ತು. ಉಳಿದ ಮೂರು ಮಂದಿ ಔಷಧಿಯಿಂದ ಗುಣಮುಖವಾದರೆ ನಾಗೇಶ್ ಪಡು ಅವರಿಗೆ ದಿನದಿಂದ ದಿನಕ್ಕೆ ಜ್ವರ ಉಲ್ಬಣಗೊಂಡಿತ್ತು.

ಡೆಂಗೆ ಎಂದು ತಿಳಿದ ಕೂಡಲೇ ಅವರನ್ನು ನಗರದ ಖಾಸಗಿ ಆಸ್ಪತ್ರೆಗೆ ಸೇರಿಸಲಾಗಿದ್ದು ಸುಮಾರು ಒಂದು ವಾರದಿಂದ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಜೀವ ರಕ್ಷಣೆಗಾಗಿ ನುರಿತ ವೈದ್ಯರ ತಂಡ ಪ್ರಯತ್ನ ಮಾಡಿದ್ದರೂ ಭಾನುವಾರ ರಾತ್ರಿ 12 ಗಂಟೆ ವೇಳೆಗೆ ನಾಗೇಶ್ ಸಾವನ್ನಪ್ಪಿದ್ದರು. ಆರೋಗ್ಯ ಇಲಾಖೆ ಇನ್ನಷ್ಟೇ ಸಾವಿನ ನಿಖರ ಕಾರಣ ದೃಢಪಡಿಸಬೇಕಿದೆ.

ಮಹಾಮಾರಿಗೆ 5 ದಿನದಲ್ಲಿ ಮೂವರು ಬಲಿ: ಡೆಂಗೆ ಮಹಾಮಾರಿ ಮಂಗಳೂರು ಮಹಾನಗರವನ್ನು ಈ ಬಾರಿ ಹೈರಾಣಾಗಿಸಿದ್ದು ಎಲ್ಲರನ್ನು ಆತಂಕಕ್ಕೆ ತಳ್ಳಿದೆ. ಡೆಂಗೆಗೆ ಈಗಾಗಲೇ 5 ದಿನದಲ್ಲಿ ಮೂರು ಬಲಿಯಾದಂತಾಗಿದೆ. ಹಲವರು ಡೆಂಗೆ ಚಿಕಿತ್ಸೆ ಪಡೆಯುತ್ತಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ