ಆ್ಯಪ್ನಗರ

ಭೂಸ್ವಾಧೀನ ತಾರತಮ್ಯ ವಿರುದ್ಧ ಟ್ವೀಟ್‌

ರಾಷ್ಟ್ರೀಯ ಹೆದ್ದಾರಿ 169ರ ಮಂಗಳೂರು- ಮೂಡುಬಿದಿರೆ ರಾಷ್ಟ್ರೀಯ ಹೆದ್ದಾರಿ-169 ಚತುಷ್ಪಥ ಯೋಜನೆ ಭೂಸ್ವಾಧೀನ ಸಂದರ್ಭದಲ್ಲಿಫ್ಲ್ಯಾಟ್‌, ರೆಸಾರ್ಟ್‌ ಉಳಿಸಲು ರಸ್ತೆ ಜೋಡಣೆ(ಅಲೈನ್‌ಮೆಂಟ್‌) ಬದಲಾಯಿಸಿ ತಾರತಮ್ಯ ಎಸಗಿರುವ ವಿರುದ್ಧ ಪ್ರಧಾನ ಮಂತ್ರಿಗೆ ಟ್ವೀಟ್‌ ಅಭಿಯಾನ ನಡೆಸಲು ನಿರ್ಧರಿಸಲಾಗಿದೆ.

Vijaya Karnataka 25 Nov 2019, 5:00 am
ಮಂಗಳೂರು: ರಾಷ್ಟ್ರೀಯ ಹೆದ್ದಾರಿ 169ರ ಮಂಗಳೂರು- ಮೂಡುಬಿದಿರೆ ರಾಷ್ಟ್ರೀಯ ಹೆದ್ದಾರಿ-169 ಚತುಷ್ಪಥ ಯೋಜನೆ ಭೂಸ್ವಾಧೀನ ಸಂದರ್ಭದಲ್ಲಿಫ್ಲ್ಯಾಟ್‌, ರೆಸಾರ್ಟ್‌ ಉಳಿಸಲು ರಸ್ತೆ ಜೋಡಣೆ(ಅಲೈನ್‌ಮೆಂಟ್‌) ಬದಲಾಯಿಸಿ ತಾರತಮ್ಯ ಎಸಗಿರುವ ವಿರುದ್ಧ ಪ್ರಧಾನ ಮಂತ್ರಿಗೆ ಟ್ವೀಟ್‌ ಅಭಿಯಾನ ನಡೆಸಲು ನಿರ್ಧರಿಸಲಾಗಿದೆ.
Vijaya Karnataka Web tweet against land acquisition discrimination
ಭೂಸ್ವಾಧೀನ ತಾರತಮ್ಯ ವಿರುದ್ಧ ಟ್ವೀಟ್‌


ಕುಲಶೇಖರ ಸೇಕ್ರೆಟ್‌ ಹಾರ್ಟ್‌ ಶಾಲೆಯಲ್ಲಿಭಾನುವಾರ ಹೆದ್ದಾರಿ ಚತುಷ್ಪಥ ಯೋಜನೆ ಭೂಮಾಲೀಕರ ಹೋರಾಟ ಸಮಿತಿ ಸಭೆ ನಡೆದು, ಈ ನಿರ್ಧಾರ ಕೈಗೊಳ್ಳಲಾಯಿತು.

ಯೋಜನೆಯ ಭೂಸ್ವಾಧೀನ ಪ್ರಕ್ರಿಯೆಯ ಅಂತಿಮ ಅಧಿಸೂಚನೆ ಹೊರಡಿಸುವಲ್ಲಿಅಧಿಕಾರಿಗಳು ವಿಫಲರಾದ ಹಿನ್ನೆಲೆಯಲ್ಲಿಮತ್ತೆ ಪ್ರಾರಂಭಿಕ ಅಧಿಸೂಚನೆ ಹೊರಡಿಸಬೇಕು. ಈ ಸಂದರ್ಭದಲ್ಲಿಹೊಸ ಭೂ ದರ ನಿಗದಿ ಮಾಡಬೇಕು. ನೋಟಿಸ್‌ ನೀಡಿದ ಬಳಿಕವೇ ಭೂಮಿಯ ಸರ್ವೆಗೆ ಬರಬೇಕು. ಬರುವಾಗ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಿದ್ದು, ಸಮರ್ಪಕ ದರ ದಾಖಲಿಸಬೇಕು ಎಂದು ಆಗ್ರಹಿಸಲಾಯಿತು.

ಚತುಷ್ಪಥಕ್ಕೆ ಬದಲು, ಈಗಿರುವ ರಸ್ತೆಯನ್ನು ಬೆಳುವಾಯಿ- ಕಾರ್ಕಳ ಮಾದರಿಯಲ್ಲಿ30 ಮೀ. ಅಗಲದ ಉತ್ತಮ ರಸ್ತೆ ನಿರ್ಮಿಸಿದರೆ ಸಾಕು. ಈ ಸಂಬಂಧ ಜಿಲ್ಲಾಧಿಕಾರಿ ಮತ್ತು ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕರಿಗೆ ಮನವಿ ಸಲ್ಲಿಸಲು ತೀರ್ಮಾನಿಸಲಾಯಿತು.

ಭೂಮಾಲೀಕರ ಹೋರಾಟ ಸಮಿತಿ ಅಧ್ಯಕ್ಷೆ ಮರಿಯಮ್ಮ ಥೋಮಸ್‌, ಕಾರ್ಯಾಧ್ಯಕ್ಷ ಪ್ರಕಾಶ್ಚಂದ್ರ, ಸೇಕ್ರೆಡ್‌ ಹಾರ್ಟ್‌ ಶಾಲೆಯ ಮುಖ್ಯ ಶಿಕ್ಷಕಿ ಸಿಸ್ಟರ್‌ ಲವಿಟಾ, ಉದ್ಯಮಿ ಕಿರಣ್‌ ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ