ಆ್ಯಪ್ನಗರ

‘ಕುಡ್ಲದ ಮೋಕೆದ ಬಂಧುಲೇ’ ; ಮಂಗಳೂರು ಜನತೆಗೆ ಡಾ.ಪಿ.ಎಸ್.ಹರ್ಷಾ ಧನ್ಯವಾದ

ಮಂಗಳೂರು ಪೊಲೀಸ್‌ ಆಯುಕ್ತರಾಗಿದ್ದ ಡಾ.ಪಿ.ಎಸ್ ಹರ್ಷಾ ಅವರು ವರ್ಗಾವಣೆಯಾಗಿದ್ದು, ಇದೀಗ ಮಂಗಳೂರಿನ ಜನತೆಗೆ ಅವರು ಧನ್ಯವಾದ ಸಲ್ಲಿಸಿದ್ದಾರೆ. ಈ ಬಗ್ಗೆ ಟ್ವಿಟರ್ ಖಾತೆಯಲ್ಲಿ ತುಳು ಭಾಷೆಯಲ್ಲಿಯೇ ಟ್ವೀಟ್ ಮಾಡಿರುವ ಅವರು ನಿಮ್ಮ ಸಹಕಾರಕ್ಕೆ ಧನ್ಯವಾದಗಳು ಎಂದಿದ್ದಾರೆ.

Vijaya Karnataka Web 28 Jun 2020, 4:26 pm
ಮಂಗಳೂರು: ಮಂಗಳೂರು ನಗರ ಪೊಲೀಸ್ ಆಯುಕ್ತರಾಗಿದ್ದ ಡಾ.ಪಿ.ಎಸ್. ಹರ್ಷ ಅವರು ಎರಡು ದಿನಗಳ ಹಿಂದೆ ವರ್ಗಾವಣೆ ಆಗಿದ್ದಾರೆ. ಅವರ ಜಾಗಕ್ಕೆ ವಿಕಾಸ್ ಕುಮಾರ್ ಬಂದಿದ್ದಾರೆ.
Vijaya Karnataka Web Harsha


ಹನ್ನೊಂದು ತಿಂಗಳುಗಳ ಕಾಲ ಮಂಗಳೂರು ಕಮಿಷನರ್ ಆಗಿದ್ದ ಡಾ.ಹರ್ಷ ಅವರು ಸ್ಥಳೀಯ ಜನರ ಜೊತೆ ಬೆರೆತುಕೊಳ್ಳಬೇಕಾದರೆ ಅಲ್ಲಿನ ಸಂಸ್ಕೃತಿ ಮತ್ತು ಭಾಷೆಯನ್ನು ಅರ್ಥ ಮಾಡಿಕೊಳ್ಳಬೇಕು ಅನ್ನೋದರ ಮೇಲೆ ನಂಬಿಕೆ ಇಟ್ಟವರು. ಅದನ್ನು ಅವರು ಈ ಹಿಂದೆ ವೇದಿಕೆಯಲ್ಲಿಯೂ ಹೇಳಿದ್ದರು. ಇದಕ್ಕೆ ಪೂರಕವಾಗಿ ಡಾ.ಹರ್ಷ ಮಂಗಳೂರು ಕಮಿಷನರ್ ಆದ ಬಳಿಕ ಮಂಗಳೂರಿನಲ್ಲಿ ವ್ಯಾಪಕವಾಗಿ ಬಳಕೆಯಲ್ಲಿರುವ ತುಳು ಭಾಷೆಯನ್ನು ಕಲಿಯುವ ಪ್ರಯತ್ನ ಮಾಡಿದ್ದರು. ಅಷ್ಟು ಮಾತ್ರವಲ್ಲದೇ ಸಾಮಾಜಿಕ ಜಾಲತಾಣಗಳಲ್ಲಿ ತುಳು ಭಾಷೆಯಲ್ಲಿ ಮಾಹಿತಿಯನ್ನು ಪ್ರಕಟಿಸಿ ಜನರ ಪ್ರೀತಿಗೆ ಪಾತ್ರರಾಗಿದ್ದರು.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೊನಾ ಸೋಂಕಿಗೆ ಮತ್ತೆ ಇಬ್ಬರು ಬಲಿ: ಮೃತರ ಸಂಖ್ಯೆ 12ಕ್ಕೆ ಏರಿಕೆ

ಇದೀಗ ತಾನು ಮಂಗಳೂರಿನಿಂದ ವರ್ಗಾವಣೆಯಾದ ಬಳಿಕವೂ ಜಿಲ್ಲೆಯ ಜನರಿಗೆ ತುಳು ಭಾಷೆಯಲ್ಲಿಯೇ ಧನ್ಯವಾದ ಸಲ್ಲಿಸಿದ್ದಾರೆ. ಈ ಬಗ್ಗೆ ತಮ್ಮ ಟ್ವಿಟರ್ ಖಾತೆಯಲ್ಲಿ ಪೋಸ್ಟ್ ಮಾಡಿರುವ ಡಾ.ಪಿ.ಎಸ್.ಹರ್ಷಾ, ‘ಕುಡ್ಲ(ಮಂಗಳೂರು)ದ ಎಲ್ಲಾ ಪ್ರೀತಿಯ ಬಂಧುಗಳೇ, ಕಳೆದ ಹನ್ನೊಂದು ತಿಂಗಳುಗಳಿಂದ ಮಂಗಳೂರು ಪೊಲೀಸ್ ಆಯುಕ್ತನಾಗಿ ಸೇವೆಗೈದ ನನಗೆ ಈಗ ವರ್ಗಾವಣೆಯಾಗುತ್ತಿದೆ. ಇಲಾಖೆಯ ಸಂಪೂರ್ಣ ಸಹಕಾರದೊಂದಿಗೆ ತುಂಬಾ ಪ್ರಾಮಾಣಿಕ ಮತ್ತು ಜನಪರವಾಗಿ ನನ್ನ ಕರ್ತವ್ಯವನ್ನು ಮಾಡಿಕೊಂಡು ಬಂದಿದ್ದೇನೆ. ನನಗೆ ಸಹಕಾರ, ಬೆಂಬಲ ಕೊಟ್ಟ ಎಲ್ಲರಿಗೂ ಹೃದಯಪೂರ್ವಕ ನಮಸ್ಕಾರಗಳು’ ಎಂದು ಟ್ವೀಟ್‌ ಮಾಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ