ಮಂಗಳೂರು : ಕಡಲಾಳದಲ್ಲಿ ನಡೆಯುವ ಚಟುವಟಿಕೆಗಳ ಮೇಲೆ ಕಣ್ಗಾವಲನ್ನು ಮತ್ತಷ್ಟು ಬಿಗಿಗೊಳಿಸುವ ಉದ್ದೇಶದಿಂದ ಕುಂದಾಪುರ ಹಾಗೂ ಬೇಲೆಕೇರಿಯಲ್ಲಿ ಎರಡು ಹೊಸ ರಾಡಾರ್ ಕೇಂದ್ರಗಳನ್ನು ಸ್ಥಾಪಿಸಲು ಉದ್ದೇಶಿಸಲಾಗಿದೆ ಎಂದು ಕರಾವಳಿ ರಕ್ಷಣಾ ಪಡೆ(ಕೋಸ್ಟ್ ಗಾರ್ಡ್)ಯ ಡಿಐಜಿ ಹಾಗೂ ಕಮಾಂಡರ್ ಎಸ್.ಎಸ್. ದಾಸಿಲ ತಿಳಿಸಿದ್ದಾರೆ.
ಕರ್ನಾಟಕ ಕರಾವಳಿ ಕಾವಲು ಪಡೆಯು ಫೆ.1ರಂದು 43ನೇ ಸಂಸ್ಥಾಪನಾ ದಿನ ಆಚರಿಸಲಿದ್ದು, ಇದರ ಅಂಗವಾಗಿ ಗುರುವಾರ ಪಣಂಬೂರಿನ ಕರಾವಳಿ ರಕ್ಷಣಾ ಪಡೆಯ ಮುಖ್ಯ ಕಚೇರಿಯಲ್ಲಿ ಮಾತನಾಡಿದರು.
ಬೇಲೆಕೇರಿಯಲ್ಲಿ ಈಗಾಗಲೇ ರಾಡಾರ್ ಕೇಂದ್ರ ನಿರ್ಮಾಣಕ್ಕೆ ಭೂಸ್ವಾಧೀನ ಪ್ರಕ್ರಿಯೆ ನಡೆದಿದೆ. ಕುಂದಾಪುರದ ಲೈಟ್ಹೌಸ್ನಲ್ಲಿ ರಾಡಾರ್ ಕೇಂದ್ರ ನಿರ್ಮಾಣವಾಗಲಿದ್ದು ಈ ಪ್ರಕ್ರಿಯೆಯೂ ಪ್ರಗತಿಯಲ್ಲಿದೆ ಎಂದರು. ಇದು ಮಾತ್ರವಲ್ಲದೆ ಕರಾವಳಿ ತೀರದ ಭಟ್ಕಳ ಹಾಗೂ ಸುರತ್ಕಲ್ಗಳಲ್ಲಿ ಈಗಾಗಲೇ ರಾಡಾರ್ ಕೇಂದ್ರಗಳು ಕಾರ್ಯ ನಿರ್ವಹಿಸುತ್ತಿವೆ ಎಂದರು.
ಹೊಸದಾಗಿ ನಿರ್ಮಾಣವಾಗಿರುವ ರಾಡರ್ ಕೇಂದ್ರಗಳು ರಾಡಾರ್ಗಳು ಗುಣಮಟ್ಟದ ಕ್ಯಾಮೆರಾಗಳನ್ನು ಹೊಂದಿದ್ದು, 60ರಿಂದ 80 ನಾಟಿಕಲ್ ಮೈಲ್ಸ್ವರೆಗಿನ ಚಟುವಟಿಕೆಗಳ ಮೇಲೆ ನಿಗಾಯಿರಿಸಬಲ್ಲವು. ಈ ಮೂಲಕ ಕರಾವಳಿ ರಕ್ಷಣಾ ಪಡೆಯ ನೌಕೆಗಳು ಮತ್ತು ವಿಮಾನಗಳು ಕರ್ನಾಟಕದ ಕರಾವಳಿ ತೀರವನ್ನು ಸುರಕ್ಷಿತವಾಗಿಸಲಿವೆ. ಸಮುದ್ರದಲ್ಲಿ ಅಕ್ರಮ ಚಟುವಟಿಕೆಗಳ ಮೇಲೆ ನಿಗಾ ಇರಿಸುವ ಜತೆಗೆ ಸಂಕಷ್ಟ, ಅಪಾಯದಲ್ಲಿರುವ ಮೀನುಗಾರರಿಗೆ ತಕ್ಷಣದ ಮಾನವೀಯ ನೆರವನ್ನು ಕೂಡಾ ಕಾವಲು ಪಡೆಯ ನೌಕೆಗಳ ಮೂಲಕ ಮಾಡಲಾಗುತ್ತಿದೆ ಎಂದರು.
ಕಿರುಚಿತ್ರ ಪ್ರದರ್ಶನ: ಕರಾವಳಿ ರಕ್ಷಣಾ ಪಡೆಯ ಕಾರ್ಯ ವ್ಯಾಪ್ತಿ, ರಕ್ಷಣಾ ಕಾರ್ಯಾಚರಣೆ ಸೇರಿದಂತೆ ಚಟುವಟಿಕೆಯ ಬಗ್ಗೆ ಕಿರುಚಿತ್ರ ಪ್ರದರ್ಶನ ಮಾಡಲಾಯಿತು.
ರಕ್ಷಣಾ ಕಾರ್ಯಗಳು: ಕರ್ನಾಟಕ ಕರಾವಳಿ ರಕ್ಷಣಾ ಪಡೆಯು ಓಖಿ ಚಂಡಮಾರುತ ಸೇರಿದಂತೆ 2017ರಲ್ಲಿ 202 ಪ್ರಾಣ ರಕ್ಷಣೆ ಮಾಡಿದ್ದರೆ. 2018ರಲ್ಲಿ 209 ಹಾಗೂ 2019ರಲ್ಲಿ ಈವರೆಗೆ 19 ಅಮೂಲ್ಯ ಪ್ರಾಣಗಳನ್ನು ರಕ್ಷಿಸಿದೆ. ಮಾತ್ರವಲ್ಲದೆ, 2018ರಲ್ಲಿ ಸಂಭವಿಸಿದ ಅತಿವೃಷ್ಟಿಯ ಸಂದರ್ಭದಲ್ಲಿಯೂ ಕರ್ನಾಟಕದ ಕರಾವಳಿ ಜಿಲ್ಲೆಗಳಲ್ಲಿ ರಕ್ಷಣಾ ಕಾರ್ಯದಲ್ಲಿ ಕರಾವಳಿ ರಕ್ಷಣಾ ಪಡೆ ತನ್ನನ್ನು ತೊಡಗಿಸಿಕೊಂಡಿತ್ತಲ್ಲದೆ, 39 ಮಂದಿಯ ಪ್ರಾಣವನ್ನು ರಕ್ಷಿಸಿದೆ ಎಂದರು.
ಮಂಗಳೂರಿನಲ್ಲಿರುವ ಕೋಸ್ಟ್ಗಾರ್ಡ್ನಲ್ಲಿ ಆಫ್ಸೋರ್ ಪ್ಯಾಟ್ರೋಲ್ 1, ಫಾಸ್ಟ್ ಪ್ಯಾಟ್ರೋಲ್ 4, ಇಂಟರ್ಸೆಪ್ಟರ್ ಬೋಟ್ 2, ಇಂಟರ್ಸೆಪ್ಟರ್ ಕ್ರಾಫ್ಟ್ 2, ಏರ್ ಕುಷನ್ ವೆಹಿಕಲ್ 2 ಕಾರ್ಯಾಚರಿಸುತ್ತಿದೆ.
ನಾನಾ ಕಾರ್ಯಕ್ರಮ: ಕರಾವಳಿ ರಕ್ಷಣಾ ಪಡೆಯ ಸಂಸ್ಥಾಪನಾ ಕಾರ್ಯಕ್ರಮದ ಅಂಗವಾಗಿ ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದು ವಿಶೇಷ ಸ್ವಚ್ಛತಾ ಅಭಿಯಾನಗಳು, ಸಮುದಾಯ ಸಂವಾದ ಕಾರ್ಯಕ್ರಮ, ವೈದ್ಯಕೀಯ ಶಿಬಿರದ ಮೂಲ ಜನಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಸಾರ್ವಜನಿಕ ಸಂಪರ್ಕ ಅಧಿಕಾರಿ ಎಲ್.ಎಂ. ಗಜ್ಬಿಯೆ, ಸಿಬ್ಬಂದಿ ದೀಪಿಕಾ ಮೆಮನ್ ಉಪಸ್ಥಿತರಿದ್ದರು.
ಕರಾವಳಿ ತೀರ ಸುರಕ್ಷಿತ: ಕರ್ನಾಟಕ ಕರಾವಳಿ ಸಮುದ್ರ ತೀರ ಸುರಕ್ಷಿತವಾಗಿದ್ದು, ಸಮುದ್ರದ ರಕ್ಷಣೆ ಹಾಗೂ ಮೀನುಗಾರರ ಸುರಕ್ಷತೆಗೆ ಕರಾವಳಿ ರಕ್ಷಣಾ ಪಡೆ ಬದ್ಧ ಎಂದು ಡಿಐಜಿ ದಾಸಿಲ ಸ್ಪಷ್ಟಪಡಿಸಿದ್ದಾರೆ.
ಕರ್ನಾಟಕ ಕರಾವಳಿ ಕಾವಲು ಪಡೆಯು ಫೆ.1ರಂದು 43ನೇ ಸಂಸ್ಥಾಪನಾ ದಿನ ಆಚರಿಸಲಿದ್ದು, ಇದರ ಅಂಗವಾಗಿ ಗುರುವಾರ ಪಣಂಬೂರಿನ ಕರಾವಳಿ ರಕ್ಷಣಾ ಪಡೆಯ ಮುಖ್ಯ ಕಚೇರಿಯಲ್ಲಿ ಮಾತನಾಡಿದರು.
ಬೇಲೆಕೇರಿಯಲ್ಲಿ ಈಗಾಗಲೇ ರಾಡಾರ್ ಕೇಂದ್ರ ನಿರ್ಮಾಣಕ್ಕೆ ಭೂಸ್ವಾಧೀನ ಪ್ರಕ್ರಿಯೆ ನಡೆದಿದೆ. ಕುಂದಾಪುರದ ಲೈಟ್ಹೌಸ್ನಲ್ಲಿ ರಾಡಾರ್ ಕೇಂದ್ರ ನಿರ್ಮಾಣವಾಗಲಿದ್ದು ಈ ಪ್ರಕ್ರಿಯೆಯೂ ಪ್ರಗತಿಯಲ್ಲಿದೆ ಎಂದರು. ಇದು ಮಾತ್ರವಲ್ಲದೆ ಕರಾವಳಿ ತೀರದ ಭಟ್ಕಳ ಹಾಗೂ ಸುರತ್ಕಲ್ಗಳಲ್ಲಿ ಈಗಾಗಲೇ ರಾಡಾರ್ ಕೇಂದ್ರಗಳು ಕಾರ್ಯ ನಿರ್ವಹಿಸುತ್ತಿವೆ ಎಂದರು.
ಹೊಸದಾಗಿ ನಿರ್ಮಾಣವಾಗಿರುವ ರಾಡರ್ ಕೇಂದ್ರಗಳು ರಾಡಾರ್ಗಳು ಗುಣಮಟ್ಟದ ಕ್ಯಾಮೆರಾಗಳನ್ನು ಹೊಂದಿದ್ದು, 60ರಿಂದ 80 ನಾಟಿಕಲ್ ಮೈಲ್ಸ್ವರೆಗಿನ ಚಟುವಟಿಕೆಗಳ ಮೇಲೆ ನಿಗಾಯಿರಿಸಬಲ್ಲವು. ಈ ಮೂಲಕ ಕರಾವಳಿ ರಕ್ಷಣಾ ಪಡೆಯ ನೌಕೆಗಳು ಮತ್ತು ವಿಮಾನಗಳು ಕರ್ನಾಟಕದ ಕರಾವಳಿ ತೀರವನ್ನು ಸುರಕ್ಷಿತವಾಗಿಸಲಿವೆ. ಸಮುದ್ರದಲ್ಲಿ ಅಕ್ರಮ ಚಟುವಟಿಕೆಗಳ ಮೇಲೆ ನಿಗಾ ಇರಿಸುವ ಜತೆಗೆ ಸಂಕಷ್ಟ, ಅಪಾಯದಲ್ಲಿರುವ ಮೀನುಗಾರರಿಗೆ ತಕ್ಷಣದ ಮಾನವೀಯ ನೆರವನ್ನು ಕೂಡಾ ಕಾವಲು ಪಡೆಯ ನೌಕೆಗಳ ಮೂಲಕ ಮಾಡಲಾಗುತ್ತಿದೆ ಎಂದರು.
ಕಿರುಚಿತ್ರ ಪ್ರದರ್ಶನ: ಕರಾವಳಿ ರಕ್ಷಣಾ ಪಡೆಯ ಕಾರ್ಯ ವ್ಯಾಪ್ತಿ, ರಕ್ಷಣಾ ಕಾರ್ಯಾಚರಣೆ ಸೇರಿದಂತೆ ಚಟುವಟಿಕೆಯ ಬಗ್ಗೆ ಕಿರುಚಿತ್ರ ಪ್ರದರ್ಶನ ಮಾಡಲಾಯಿತು.
ರಕ್ಷಣಾ ಕಾರ್ಯಗಳು: ಕರ್ನಾಟಕ ಕರಾವಳಿ ರಕ್ಷಣಾ ಪಡೆಯು ಓಖಿ ಚಂಡಮಾರುತ ಸೇರಿದಂತೆ 2017ರಲ್ಲಿ 202 ಪ್ರಾಣ ರಕ್ಷಣೆ ಮಾಡಿದ್ದರೆ. 2018ರಲ್ಲಿ 209 ಹಾಗೂ 2019ರಲ್ಲಿ ಈವರೆಗೆ 19 ಅಮೂಲ್ಯ ಪ್ರಾಣಗಳನ್ನು ರಕ್ಷಿಸಿದೆ. ಮಾತ್ರವಲ್ಲದೆ, 2018ರಲ್ಲಿ ಸಂಭವಿಸಿದ ಅತಿವೃಷ್ಟಿಯ ಸಂದರ್ಭದಲ್ಲಿಯೂ ಕರ್ನಾಟಕದ ಕರಾವಳಿ ಜಿಲ್ಲೆಗಳಲ್ಲಿ ರಕ್ಷಣಾ ಕಾರ್ಯದಲ್ಲಿ ಕರಾವಳಿ ರಕ್ಷಣಾ ಪಡೆ ತನ್ನನ್ನು ತೊಡಗಿಸಿಕೊಂಡಿತ್ತಲ್ಲದೆ, 39 ಮಂದಿಯ ಪ್ರಾಣವನ್ನು ರಕ್ಷಿಸಿದೆ ಎಂದರು.
ಮಂಗಳೂರಿನಲ್ಲಿರುವ ಕೋಸ್ಟ್ಗಾರ್ಡ್ನಲ್ಲಿ ಆಫ್ಸೋರ್ ಪ್ಯಾಟ್ರೋಲ್ 1, ಫಾಸ್ಟ್ ಪ್ಯಾಟ್ರೋಲ್ 4, ಇಂಟರ್ಸೆಪ್ಟರ್ ಬೋಟ್ 2, ಇಂಟರ್ಸೆಪ್ಟರ್ ಕ್ರಾಫ್ಟ್ 2, ಏರ್ ಕುಷನ್ ವೆಹಿಕಲ್ 2 ಕಾರ್ಯಾಚರಿಸುತ್ತಿದೆ.
ನಾನಾ ಕಾರ್ಯಕ್ರಮ: ಕರಾವಳಿ ರಕ್ಷಣಾ ಪಡೆಯ ಸಂಸ್ಥಾಪನಾ ಕಾರ್ಯಕ್ರಮದ ಅಂಗವಾಗಿ ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದು ವಿಶೇಷ ಸ್ವಚ್ಛತಾ ಅಭಿಯಾನಗಳು, ಸಮುದಾಯ ಸಂವಾದ ಕಾರ್ಯಕ್ರಮ, ವೈದ್ಯಕೀಯ ಶಿಬಿರದ ಮೂಲ ಜನಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಸಾರ್ವಜನಿಕ ಸಂಪರ್ಕ ಅಧಿಕಾರಿ ಎಲ್.ಎಂ. ಗಜ್ಬಿಯೆ, ಸಿಬ್ಬಂದಿ ದೀಪಿಕಾ ಮೆಮನ್ ಉಪಸ್ಥಿತರಿದ್ದರು.
ಕರಾವಳಿ ತೀರ ಸುರಕ್ಷಿತ: ಕರ್ನಾಟಕ ಕರಾವಳಿ ಸಮುದ್ರ ತೀರ ಸುರಕ್ಷಿತವಾಗಿದ್ದು, ಸಮುದ್ರದ ರಕ್ಷಣೆ ಹಾಗೂ ಮೀನುಗಾರರ ಸುರಕ್ಷತೆಗೆ ಕರಾವಳಿ ರಕ್ಷಣಾ ಪಡೆ ಬದ್ಧ ಎಂದು ಡಿಐಜಿ ದಾಸಿಲ ಸ್ಪಷ್ಟಪಡಿಸಿದ್ದಾರೆ.