ಆ್ಯಪ್ನಗರ

ತುಳು ಸಾಹಿತ್ಯ ಅಕಾಡೆಮಿ ಸದಸ್ಯತ್ವಕ್ಕೆಇಬ್ಬರು ರಾಜೀನಾಮೆ

ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರ ಹಾಗೂ ಸದಸ್ಯರ ಪಟ್ಟಿ ಬಿಡುಗಡೆಯಾದ ಎರಡೇ ದಿನಗಳಲ್ಲಿಇಬ್ಬರು ಸದಸ್ಯರು ತಮಗೆ ಅಕಾಡೆಮಿಯ ಸದಸ್ಯತ್ವ ಬೇಡ ಎನ್ನುವ ಮೂಲಕ ರಾಜೀನಾಮೆ ಪತ್ರವನ್ನು ಸಲ್ಲಿಸಿದ್ದಾರೆ.

Vijaya Karnataka 19 Oct 2019, 4:07 pm
ಮಂಗಳೂರು: ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರ ಹಾಗೂ ಸದಸ್ಯರ ಪಟ್ಟಿ ಬಿಡುಗಡೆಯಾದ ಎರಡೇ ದಿನಗಳಲ್ಲಿಇಬ್ಬರು ಸದಸ್ಯರು ತಮಗೆ ಅಕಾಡೆಮಿಯ ಸದಸ್ಯತ್ವ ಬೇಡ ಎನ್ನುವ ಮೂಲಕ ರಾಜೀನಾಮೆ ಪತ್ರವನ್ನು ಸಲ್ಲಿಸಿದ್ದಾರೆ.
Vijaya Karnataka Web two resigned for tulu academy
ತುಳು ಸಾಹಿತ್ಯ ಅಕಾಡೆಮಿ ಸದಸ್ಯತ್ವಕ್ಕೆಇಬ್ಬರು ರಾಜೀನಾಮೆ

ಹೊಸ ಸರಕಾರ ಅಸ್ತಿತ್ವಕ್ಕೆ ಬಂದು ಎರಡು ತಿಂಗಳ ಬಳಿಕ ರಾಜ್ಯದ ಎಲ್ಲಅಕಾಡೆಮಿಗಳಿಗೆ ಅಧ್ಯಕ್ಷರು ಹಾಗೂ ಸಮಿತಿ ಸದಸ್ಯರ ಪಟ್ಟಿ ಬಿಡುಗಡೆ ಮಾಡಲಾಗಿತ್ತು. ಇದರಲ್ಲಿತುಳು ಸಾಹಿತ್ಯ ಅಕಾಡೆಮಿಯ ಸದಸ್ಯರ ಪಟ್ಟಿಯಲ್ಲಿದ್ದ ಡಾ.ಸಾಯಿ ಗೀತಾ ಹೆಗ್ಡೆ ಹಾಗೂ ಡಾ.ವೈ.ಎನ್‌. ಶೆಟ್ಟಿ ಅವರು ತಮ್ಮ ಸದಸ್ಯತ್ವಕ್ಕೆ ಶುಕ್ರವಾರ ರಾಜೀನಾಮೆ ಸಲ್ಲಿಸಿದ್ದಾರೆ. ಡಾ. ಸಾಯಿಗೀತಾ ಅವರು ಭಾಷಾ ಸಂಶೋಧನಾ ವಿಚಾರದಲ್ಲಿಹೆಚ್ಚಿನ ಕೆಲಸ ಮಾಡಲು ಇರುವುದರಿಂದ ಪೂರ್ಣ ಪ್ರಮಾಣದಲ್ಲಿತುಳು ಸಾಹಿತ್ಯ ಅಕಾಡೆಮಿಯಲ್ಲಿಸದಸ್ಯರಾಗಿ ಉಳಿಯಲು ಸಾಧ್ಯವಿಲ್ಲಎನ್ನುವ ಮಾಹಿತಿ ನೀಡಿದರೆ ಡಾ.ವೈ.ಎನ್‌. ಶೆಟ್ಟಿ ಅವರು ಕಳೆದ ಅವಧಿಯಲ್ಲಿಸದಸ್ಯನಾಗಿ ಕಾರ‍್ಯ ನಿರ್ವಹಣೆ ಮಾಡಿದ್ದೇನೆ ಈ ಬಾರಿ ಕೂಡ ಸದಸ್ಯನಾಗಿ ಉಳಿಯಲು ಬಯಸುವುದಿಲ್ಲಎನ್ನುವ ಕಾರಣವನ್ನು ರಾಜೀನಾಮೆ ಪತ್ರದಲ್ಲಿ ತಿಳಿಸಿದ್ದಾರೆ. ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ದಯಾನಂದ್‌ ಕತ್ತಲ್‌ಸಾರ್‌ ಅವರು ವಿಕದ ಜತೆ ಮಾತನಾಡಿ, ಈ ಬಾರಿ ಅಧ್ಯಕ್ಷರ ಹಾಗೂ ಸದಸ್ಯರ ಆಯ್ಕೆ ಪ್ರಕ್ರಿಯೆಯನ್ನು ಅವರ ಸಾಧನೆಯ ಆಧಾರದಲ್ಲಿಮಾಹಿತಿ ಕಲೆ ಹಾಕಿಕೊಂಡು ಮಾಡಲಾಗಿತ್ತು. ಇದರಿಂದ ನಮ್ಮಲ್ಲಿಇಬ್ಬರು ತಮ್ಮ ಸಂಶೋಧನೆ ಕೆಲಸ ಹಾಗೂ ಹಿಂದಿನ ಬಾರಿ ಸದಸ್ಯರಾಗಿದ್ದ ಕಾರಣಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ತೆರೆವಾದ ಸದಸ್ಯರ ಸ್ಥಾನ ಭರ್ತಿ ಮಾಡುವ ಕಾರ್ಯ ಇಲಾಖೆ ಶೀಘ್ರದಲ್ಲಿಮಾಡಲಿದೆ ಎಂದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ