ಆ್ಯಪ್ನಗರ

ಮಂಗಳೂರು: ಉಜಿರೆ ಬಾಲಕನ ಕಿಡ್ನಾಪ್ ಪ್ರಕರಣ ಸುಖಾಂತ್ಯ; 6 ಆರೋಪಿಗಳು ಅರೆಸ್ಟ್, ಬಾಲಕ ಸೇಫ್‌!

ಅಪಹರಣಕಾರರು ಕೊರ್ನಹೊಸಳ್ಳಿಯ ಮಂಜುನಾಥ್ ಎಂಬುವರ ಮನೆಯೊಂದರಲ್ಲಿ ಅನುಭವ್​ನನ್ನು ಬಚ್ಚಿಟ್ಟಿದ್ದರು. ಸದ್ಯ ಕೋಲಾರ ಎಸ್‌ಪಿ ಕಾರ್ತಿಕ್ ರೆಡ್ಡಿ ನೆರವಿನಿಂದ ಮಂಗಳೂರಿನ ವಿಶೇಷ ಪೊಲೀಸ್ ತಂಡ ಕಾರ್ಯಚರಣೆ ನಡೆಸಿ ಪ್ರಕರಣವನ್ನು ಬೇಧಿಸಿದ್ದಾರೆ. ಅಲ್ಲದೆ ಕಿಡ್ನ್ಯಾಪ್ ಆಗಿದ್ದ ಉಜಿರೆಯ ಉದ್ಯಮಿಯ ಪುತ್ರ ಅನುಭವ್‌ನನ್ನು ರಕ್ಷಣೆ ಮಾಡಲಾಗಿದೆ.

Vijaya Karnataka 19 Dec 2020, 8:08 am
ಮಂಗಳೂರು: ಉಜಿರೆ ನಿವಾಸಿಯಾಗಿರುವ ಬಾಲಕ ಅನುಭವ್ ಅಪಹರಣ ಪ್ರಕರಣ ಕೊನೆಗೂ ಸುಖಾಂತ್ಯ ಕಂಡಿದೆ. ಬಾಲಕ ಅನುಭವ್‌ನನ್ನು ಕಿಡ್ನ್ಯಾಪ್ ಮಾಡಿದ್ದ ಆರು ಆರೋಪಿಗಳನ್ನು ಹಿಡಿಯುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಕೂರ್ನಹೊಸಳ್ಳಿಯಲ್ಲಿ ಅಪಹರಣಕಾರರು ಸೇರಿ ಒಟ್ಟು 6 ಮಂದಿ ಈ ಪ್ರಕರಣದಲ್ಲಿ ಬಂಧಿಸಲಾಗಿದೆ.
Vijaya Karnataka Web Ujire Kidnap


ಅಪಹರಣಕಾರರು ಕೊರ್ನಹೊಸಳ್ಳಿಯ ಮಂಜುನಾಥ್ ಎಂಬುವರ ಮನೆಯೊಂದರಲ್ಲಿ ಅನುಭವ್ನನ್ನು ಬಚ್ಚಿಟ್ಟಿದ್ದರು. ಸದ್ಯ ಕೋಲಾರ ಎಸ್‌ಪಿ ಕಾರ್ತಿಕ್ ರೆಡ್ಡಿ ನೆರವಿನಿಂದ ಮಂಗಳೂರಿನ ವಿಶೇಷ ಪೊಲೀಸ್ ತಂಡ ಕಾರ್ಯಚರಣೆ ನಡೆಸಿ ಪ್ರಕರಣವನ್ನು ಬೇಧಿಸಿದ್ದಾರೆ. ಅಲ್ಲದೆ ಕಿಡ್ನ್ಯಾಪ್ ಆಗಿದ್ದ ಉಜಿರೆಯ ಉದ್ಯಮಿಯ ಪುತ್ರ ಅನುಭವ್‌ನನ್ನು ರಕ್ಷಣೆ ಮಾಡಲಾಗಿದೆ. ಇನ್ನು ಎಲೆಕ್ಟ್ರಾನಿಕ್ ಸಿಟಿಯ ಕೋಮಲ್, ಮಂಡ್ಯದ ಗಂಗಾಧರ್, ಕೂರ್ನಹೊಸಳ್ಳಿ ಗ್ರಾಮದ ಮಂಜುನಾಥ್, ಮಹೇಶ್, ಮಂಡ್ಯದ ಮತ್ತಿಬ್ಬರು ಸೇರಿ ಒಟ್ಟು 6 ಆರೋಪಿಗಳು ಅರೆಸ್ಟ್ ಆಗಿದ್ದಾರೆ.

ಈ ಪೈಕಿ ಓರ್ವ ಬಾಲಕನ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಎಂದು ತಿಳಿದುಬಂದಿದೆ. ಇನ್ನು ಡಿ.19ರಂದು(ಇಂದು) ವೈದ್ಯಕೀಯ ತಪಾಸಣೆ ಬಳಿಕ ಬಾಲಕ ಅನುಭವ್ನನ್ನು ಮಾಲೂರು ಕೋರ್ಟ್‌ಗೆ ಹಾಜರುಪಡಿಸಲಾಗುತ್ತೆ. ಅದಾದ ಬಳಿಕ ದಕ್ಷಿಣ ಕನ್ನಡ ಜಿಲ್ಲೆಗೆ ಕರೆದುಕೊಂಡು ಬಂದು ಪೋಷಕರಿಗೆ ಮಗುವನ್ನು ಹಸ್ತಾಂತರಿಸಲಾಗುತ್ತೆ ಎಂದು ಮಂಗಳೂರಿನ ವಿಶೇಷ ಪೊಲೀಸ್‌ ತಂಡ ಮಾಹಿತಿ ನೀಡಿದೆ.

ಉಜಿರೆಯಲ್ಲಿ ಬಾಲಕನ ಅಪಹರಣ: ಬೇಡಿಕೆಯ ಹಣದ ಮೊತ್ತ ಇಳಿಸಿದ ಅಪಹರಣಕಾರರು!

ಘಟನೆ ಹಿನ್ನೆಲೆ!
ಬೆಳ್ತಂಗಡಿ ತಾಲೂಕಿನ ಉಜಿರೆಯ ಉದ್ಯಮಿಯೊಬ್ಬರ ಪುತ್ರ ಅನುಭವ್ ಎಂಬಾತ ಸಂಜೆ ವೇಳೆ ಮನೆಯ ಹತ್ತಿರದಲ್ಲಿ ಆಟವಾಡುತ್ತಿದ್ದ. ಈ ವೇಳೆ ಕಾರಿನಲ್ಲಿ ಬಂದ ಅಪಹರಣಕಾರರು ಸಿನಿಮೀಯ ರೀತಿಯಲ್ಲಿ ಬಾಲಕನನ್ನು ಕಿಡ್ನಾಪ್‌ ಮಾಡಿದ್ದರು. ನಂತರ ದುಷ್ಕರ್ಮಿಗಳು 17 ಕೋಟಿ ರೂಪಾಯಿ ನೀಡುವಂತೆ ಬಾಲಕನ ತಂದೆ ಬಿಜೋಯ್‌ಗೆ ಕರೆಮಾಡಿ ಬೇಡಿಕೆ ಇಟ್ಟಿದ್ದರು.

ಅಲ್ಲದೇ ಪೊಲೀಸರಿಗೆ ಮಾಹಿತಿ ನೀಡದಂತೆ ವಾರ್ನಿಂಗ್ ಕೂಡ ಕೊಟ್ಟಿದ್ದರು. ಆದರೆ ದೂರು ದಾಖಲಿಸಿಕೊಂಡ ಪೊಲೀಸರು ವಿಶೇಷ ತಂಡವನ್ನು ರಚಿಸಿ ಪ್ರಕರಣ ಬೇಧಿಸಲು ಮುಂದಾದರು. ನಂತರ ಆರೋಪಿಗಳ ಕಾರು, ಫೋನ್‌ ನಂಬರ್‌ ಮೂಲಕ ಟ್ರ್ಯಾಕ್‌ ಮಾಡಿ ಖದೀಮರನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಸದ್ಯ ಬಾಲಕ ಪೊಲೀಸರ ವಶದಲ್ಲಿದ್ದಾನೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ