ಭೂಗತ ಪಾತಕಿ ರಶೀದ್ ಬಂಧನ ವದಂತಿ
ಜೈಲಿನಿಂದ ಜಾಮೀನಿನಲ್ಲಿ ಬಿಡುಗಡೆಗೊಂಡ ನಾಪತ್ತೆಯಾದ ಕುಖ್ಯಾತ ಶಾರ್ಪ್ಶೂಟರ್ ರಶೀದ್ ಮಲಬಾರಿ ಅಬುದಾಬಿಯಲ್ಲಿ ಮೇ ತಿಂಗಳಿನಲ್ಲಿ ಬಂಧನವಾಗಿರುವ ಬಗ್ಗೆ ವದಂತಿಯೊಂದು ಹರಿದಾಡುತ್ತಿದೆ.
Vijaya Karnataka 30 Jun 2018, 7:43 am
ಮಂಗಳೂರು: ಜೈಲಿನಿಂದ ಜಾಮೀನಿನಲ್ಲಿ ಬಿಡುಗಡೆಗೊಂಡ ನಾಪತ್ತೆಯಾದ ಕುಖ್ಯಾತ ಶಾರ್ಪ್ಶೂಟರ್ ರಶೀದ್ ಮಲಬಾರಿ ಅಬುದಾಬಿಯಲ್ಲಿ ಮೇ ತಿಂಗಳಿನಲ್ಲಿ ಬಂಧನವಾಗಿರುವ ಬಗ್ಗೆ ವದಂತಿಯೊಂದು ಹರಿದಾಡುತ್ತಿದೆ.
ಭೂಗತ ಪಾತಕಿ ಕೃತ್ಯದಲ್ಲಿ ತೊಡಗಿಸಿಕೊಂಡ ಮಲಬಾರಿಯನ್ನು 2014ರ ಜುಲೈ 21ರಂದು ರಾಜ್ಯ ಹೈಕೋರ್ಟ್ ಆದೇಶದಂತೆ ಬೆಂಗಳೂರು ಜೈಲಿನಿಂದ ಜಾಮೀನು ಮೇಲೆ ಬಿಡುಗಡೆಗೊಳಿಸಲಾಗಿತ್ತು. ಬಿಡುಗಡೆಗೊಂಡ ಆತ ನ್ಯಾಯಾಲಯಕ್ಕೆ ಹಾಜರಾಗದೆ ಕಣ್ಮರೆಯಾಗಿದ್ದ. ಈತನಿಗೆ ನಾನಾ ಕಡೆ ಗುಪ್ತಚಾರ ವಿಭಾಗ, ಪೊಲೀಸರು ಶೋಧ ನಡೆಸುತ್ತಿದ್ದಾರೆ.
ಲುಕ್ ಔಟ್ ನೋಟಿಸ್: 2014 ಜು. 26 ರಂದು ಪ್ರಕರಣವೊಂದಕ್ಕೆ ಸಂಬಂಧಿಸಿ ಮಲಬಾರಿ ಮಂಗಳೂರಿನ ನ್ಯಾಯಾಲಯಕ್ಕೆ ಹಾಜರಾಗ ಬೇಕಿತ್ತು. ಆದರೆ ಆತ ತಪ್ಪಿಸಿಕೊಂಡಿದ್ದ. ಈತನ ಪತ್ತೆಗೆ ಮಂಗಳೂರು ಪೊಲೀಸರು ಲುಕ್ ಔಟ್ ನೋಟೀಸು ಹಾಗೂ ರೆಡ್ಕಾರ್ನರ್ ನೋಟಿಸು ಜಾರಿ ಮಾಡಿದ್ದರು.
ರಶೀದ್ ಮಲಬಾರಿ ವದಂತಿ ಬಗ್ಗೆ ಮಾಧ್ಯಮದೊಂದಿಗೆ ಮಂಗಳೂರು ನಗರ ಪೊಲೀಸ್ ಕಮಿಷನರ್ ಟಿ.ಆರ್. ಸುರೇಶ್ ಮಾತನಾಡಿ, ರಶೀದ್ ಮಲ್ಬಾರಿ ಬಂಧಿತನಾಗಿರುವ ವದಂತಿಯ ಬಗ್ಗೆ ನಮಗೂ ಮಾಹಿತಿ ಇದೆ. ಆದರೆ ಅದು ಯಾರು ದೃಢಪಡಿಸಿಲ್ಲ. ಈ ಬಗ್ಗೆ ಅಧಿಕೃತ ಮಾಹಿತಿ ಸಿಕ್ಕ ಬಳಿಕ ದೃಢಪಡಿಸಲಾಗುವುದು ಎಂದು ಹೇಳಿದ್ದಾರೆ.
ಭೂಗತ ಪಾತಕಿ ಕೃತ್ಯದಲ್ಲಿ ತೊಡಗಿಸಿಕೊಂಡ ಮಲಬಾರಿಯನ್ನು 2014ರ ಜುಲೈ 21ರಂದು ರಾಜ್ಯ ಹೈಕೋರ್ಟ್ ಆದೇಶದಂತೆ ಬೆಂಗಳೂರು ಜೈಲಿನಿಂದ ಜಾಮೀನು ಮೇಲೆ ಬಿಡುಗಡೆಗೊಳಿಸಲಾಗಿತ್ತು. ಬಿಡುಗಡೆಗೊಂಡ ಆತ ನ್ಯಾಯಾಲಯಕ್ಕೆ ಹಾಜರಾಗದೆ ಕಣ್ಮರೆಯಾಗಿದ್ದ. ಈತನಿಗೆ ನಾನಾ ಕಡೆ ಗುಪ್ತಚಾರ ವಿಭಾಗ, ಪೊಲೀಸರು ಶೋಧ ನಡೆಸುತ್ತಿದ್ದಾರೆ.
ಲುಕ್ ಔಟ್ ನೋಟಿಸ್: 2014 ಜು. 26 ರಂದು ಪ್ರಕರಣವೊಂದಕ್ಕೆ ಸಂಬಂಧಿಸಿ ಮಲಬಾರಿ ಮಂಗಳೂರಿನ ನ್ಯಾಯಾಲಯಕ್ಕೆ ಹಾಜರಾಗ ಬೇಕಿತ್ತು. ಆದರೆ ಆತ ತಪ್ಪಿಸಿಕೊಂಡಿದ್ದ. ಈತನ ಪತ್ತೆಗೆ ಮಂಗಳೂರು ಪೊಲೀಸರು ಲುಕ್ ಔಟ್ ನೋಟೀಸು ಹಾಗೂ ರೆಡ್ಕಾರ್ನರ್ ನೋಟಿಸು ಜಾರಿ ಮಾಡಿದ್ದರು.
ರಶೀದ್ ಮಲಬಾರಿ ವದಂತಿ ಬಗ್ಗೆ ಮಾಧ್ಯಮದೊಂದಿಗೆ ಮಂಗಳೂರು ನಗರ ಪೊಲೀಸ್ ಕಮಿಷನರ್ ಟಿ.ಆರ್. ಸುರೇಶ್ ಮಾತನಾಡಿ, ರಶೀದ್ ಮಲ್ಬಾರಿ ಬಂಧಿತನಾಗಿರುವ ವದಂತಿಯ ಬಗ್ಗೆ ನಮಗೂ ಮಾಹಿತಿ ಇದೆ. ಆದರೆ ಅದು ಯಾರು ದೃಢಪಡಿಸಿಲ್ಲ. ಈ ಬಗ್ಗೆ ಅಧಿಕೃತ ಮಾಹಿತಿ ಸಿಕ್ಕ ಬಳಿಕ ದೃಢಪಡಿಸಲಾಗುವುದು ಎಂದು ಹೇಳಿದ್ದಾರೆ.