ಆ್ಯಪ್ನಗರ

ನೇತ್ರಾವತಿ-ಕುಮಾರಧಾರಾದಲ್ಲಿ ಅಟಲ್‌ ಚಿತಾಭಸ್ಮ ವಿಸರ್ಜನೆ

ವಾಜಪೇಯಿ ಅವರ ಚಿತಾಭಸ್ಮವನ್ನು ವೇದಮಂತ್ರ ಘೋಷದೊಂದಿಗೆ ಶನಿವಾರ ಸಂಧ್ಯಾಕಾಲದಲ್ಲಿ ದಕ್ಷಿಣ ಕಾಶಿ ಎಂದೇ ಪ್ರಸಿದ್ಧವಾಗಿರುವ ಉಪ್ಪಿನಂಗಡಿಯ ನೇತ್ರಾವತಿ-ಕುಮಾರಧಾರಾ ನದಿಗಳ ಸಂಗಮ ಸ್ಥಳದಲ್ಲಿ ವಿಸರ್ಜಿಸಲಾಯಿತು.

Vijaya Karnataka Web 26 Aug 2018, 8:17 am
ಉಪ್ಪಿನಂಗಡಿ:ಮಾಜಿ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಅವರ ಚಿತಾಭಸ್ಮವನ್ನು ವೇದಮಂತ್ರ ಘೋಷದೊಂದಿಗೆ ಶನಿವಾರ ಸಂಧ್ಯಾಕಾಲದಲ್ಲಿ ದಕ್ಷಿಣ ಕಾಶಿ ಎಂದೇ ಪ್ರಸಿದ್ಧವಾಗಿರುವ ಉಪ್ಪಿನಂಗಡಿಯ ನೇತ್ರಾವತಿ-ಕುಮಾರಧಾರಾ ನದಿಗಳ ಸಂಗಮ ಸ್ಥಳದಲ್ಲಿ ವಿಸರ್ಜಿಸಲಾಯಿತು.
Vijaya Karnataka Web atal


ಶನಿವಾರ ಬೆಳಗ್ಗೆ ಕುಂದಾಪುರದಿಂದ ಹೊರಟ ಚಿತಾಭಸ್ಮದ ಮೆರವಣಿಗೆ ಬಳಿಕ ದ.ಕ. ಜಿಲ್ಲೆಯಾದ್ಯಂತ ಸಂಚರಿಸಿ ಸಂಜೆ ಉಪ್ಪಿನಂಗಡಿ ಪ್ರವೇಶಿಸುತ್ತಿದಂತೆಯೇ ಗಣ್ಯಾತಿಗಣ್ಯರು ಚಿತಾಭಸ್ಮವನ್ನು ಸ್ವಾಗತಿಸಿ ಭಜನೆ ಸಹಿತ ಮೆರವಣಿಗೆಯಲ್ಲಿ ನದಿ ಸಂಗಮ ತಟಕ್ಕೆ ಕೊಂಡೊಯ್ದರು.

ದೇವಳದ ಅರ್ಚಕ ಪದ್ಮನಾಭ ಕೆ. ಹಾಗೂ ನರಸಿಂಹ ಭಟ್‌ ಅವರ ವೇದಮಂತ್ರ ಘೋಷಗಳೊಂದಿಗೆ ವೈದಿಕ ವಿಧಿ ವಿಧಾನಗಳನ್ನು ನೆರವೇರಿಸಿ, ಅಟಲ್‌ ಜೀಯವರ ಆತ್ಮಕ್ಕೆ ಚಿರಶಾಂತಿ ಕೋರಿ ಭಾರತ್‌ ಮಾತಾಕೀ ಜೈ, ಅಟಲ್‌ ಜೀ ಅಮರ್‌ ರಹೇ ಎಂಬ ಘೋಷಣೆಯೊಂದಿಗೆ ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿಗಳಾದ ಶೋಭಾ ಕರಂದ್ಲಾಜೆ, ಸಿ.ಟಿ. ರವಿ ಹಾಗೂ ಸಂಸದ ನಳಿನ್‌ ಕುಮಾರ್‌ ಕಟೀಲ್‌ ಅವರು ಚಿತಾಭಸ್ಮವನ್ನು ನೇತ್ರಾವತಿ-ಕುಮಾರಧಾರಾ ನದಿಗಳ ಸಂಗಮ ಸ್ಥಳದಲ್ಲಿ ವಿಸರ್ಜಿಸಿದರು.

ಚಿತಾಭಸ್ಮ ವಿಸರ್ಜನಾ ಕಾರ್ಯಕ್ರಮದಲ್ಲಿ ದ.ಕ. ಜಿಲ್ಲಾ ಬಿಜೆಪಿ ಅಧ್ಯಕ್ಷ , ಶಾಸಕ ಸಂಜೀವ ಮಠಂದೂರು, ಬಿಜೆಪಿ ಶಾಸಕರಾದ ಎಸ್‌. ಅಂಗಾರ, ಹರೀಶ್‌ ಪೂಂಜಾ, ಭರತ್‌ ಶೆಟ್ಟಿ, ರಾಜೇಶ್‌ ನಾೖಕ್‌, ವೇದವ್ಯಾಸ್‌ ಕಾಮತ್‌, ಪ್ರಮುಖರಾದ ಮೀನಾಕ್ಷಿ ಶಾಂತಿಗೋಡು, ಆಶಾ ತಿಮ್ಮಪ್ಪ ಗೌಡ, ಪ್ರತಾಪ್‌ ಸಿಂಹ ನಾಯಕ್‌, ಮಲ್ಲಿಕಾ ಪ್ರಸಾದ್‌, ವಿಶ್ವೇಶ್ವರ ಭಟ್‌, ಅಬ್ರಹಾಂ ವರ್ಗೀಸ್‌, ಕೇಶವ ಗೌಡ ಬಜತ್ತೂರು, ಚನಿಲ ತಿಮ್ಮಪ್ಪ ಶೆಟ್ಟಿ, ಅರುಣ್‌ ಕುಮಾರ್‌ ಪುತ್ತಿಲ, ಸುನಿಲ್‌ ಕುಮಾರ್‌ ದಡ್ಡು, ಸುರೇಶ್‌ ಅತ್ರಮಜಲು ಮತ್ತಿತರ ಪ್ರಮುಖರು ಭಾಗವಹಿಸಿದ್ದರು.

ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ-ಮಹಾಕಾಳಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯು ಅಸ್ಥಿ ವಿಸರ್ಜನಾ ಕಾರ್ಯಕ್ರಮಕ್ಕೆ ಅಗತ್ಯ ಅನುಕೂಲತೆ ಒದಗಿಸಿತ್ತು.

ಫೊಟೋ: 25ಯುಪಿಪಿ ಚಿತಾಭಸ್ಮ 1, 2, 3

ಮಾಜಿ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಅವರ ಚಿತಾಭಸ್ಮವನ್ನು ವೇದಮಂತ್ರ ಘೋಷದೊಂದಿಗೆ ಶನಿವಾರ ಸಂಧ್ಯಾಕಾಲದಲ್ಲಿ ದಕ್ಷಿಣ ಕಾಶಿ ಎಂದೇ ಪ್ರಸಿದ್ಧವಾಗಿರುವ ಉಪ್ಪಿನಂಗಡಿಯ ನೇತ್ರಾವತಿ-ಕುಮಾರಧಾರಾ ನದಿಗಳ ಸಂಗಮ ಸ್ಥಳದಲ್ಲಿ ವಿಸರ್ಜಿಸಲಾಯಿತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ