ಮಂಗಳೂರು: ಲೇಡಿಹಿಲ್ ಸರ್ಕಲ್ಗೆ ಬ್ರಹ್ಮಶ್ರೀ ನಾರಾಯಣ ಗುರು ಹೆಸರು; ಕೇಸು ದಾಖಲು, ಸಂಘಟನೆ ಆಕ್ಷೇಪ!
ನಗರದ ಲೇಡಿಹಿಲ್ ಸರ್ಕಲ್ಗೆ ಬ್ರಹ್ಮಶ್ರೀ ನಾರಾಯಣ ಗುರು ಅವರ ಹೆಸರನ್ನಿಡಬೇಕೆಂದು ಬಿರುವೆರ್ ಕುಡ್ಲ ಸಂಘಟನೆ ಸೇರಿದಂತೆ ನಾನಾ ಸಂಘಟನೆಗಳು ಒತ್ತಾಯಿಸಿದ್ದು, ಈ ಮಧ್ಯೆ ನಾರಾಯಣ ಗುರು ಪರ-ವಿರೋಧ ಚರ್ಚೆ ನಡೆದಿದ್ದು, ಕೆಲವು ಬಸ್ಗಳಲ್ಲಿ ಸ್ಟಿಕ್ಕರ್ ಕೂಡ ಅಂಟಿಸಲಾಗಿತ್ತು. ಆರ್ಟಿಒ ಅಧಿಕಾರಿಗಳು ಮಂಗಳವಾರ ಸಂಜೆ ಲೇಡಿಹಿಲ್ ಸಮೀಪ ತಪಾಸಣೆ ನಡೆಸಿ ದಂಡ ಕಟ್ಟುವಂತೆ ಬಸ್ ಮಾಲೀಕರಿಗೆ ನೋಟಿಸು ನೀಡಿದ್ದಾರೆ.
Vijaya Karnataka Web 30 Sep 2020, 1:01 pm
ಮಂಗಳೂರು: ನಗರದ ಲೇಡಿಹಿಲ್ ಸರ್ಕಲ್ಗೆ 'ಬ್ರಹ್ಮಶ್ರೀ ನಾರಾಯಣ ಗುರು' ಹೆಸರನ್ನಿಡಬೇಕೆಂದು ಬಿರುವೆರ್ ಕುಡ್ಲ ಸಂಘಟನೆ ಸೇರಿದಂತೆ ನಾನಾ ಸಂಘಟನೆಗಳು ಒತ್ತಾಯಿಸಿದ್ದು, ಈ ಮಧ್ಯೆ ಈ ಹೆಸರನ್ನು ಕೆಲವು ಬಸ್ಗಳಲ್ಲಿ ನಮೂದಿಸಲಾಗಿದ್ದು, ಆ ಬಸ್ಗಳ ವಿರುದ್ಧ ಆರ್ಟಿಓ ಅಧಿಕಾರಿಗಳು ಪ್ರಕರಣ ದಾಖಲಿಸಿದ್ದಾರೆ. ಇದನ್ನು ಖಂಡಿಸಿ ಲೇಡಿಹಿಲ್ನಲ್ಲಿ ಸಂಘಟನೆಗಳು ಆಕ್ಷೇಪ ವ್ಯಕ್ತಪಡಿಸಿದ ಘಟನೆ ಮಂಗಳವಾರ ನಡೆದಿದೆ.
ನಗರದ ಲೇಡಿಹಿಲ್ ಸರ್ಕಲ್ಗೆ ನಾರಾಯಣಗುರು ಸರ್ಕಲ್ ಹೆಸರನ್ನಿಡುವಂತೆ ಬಿರುವೆರ್ ಕುಡ್ಲಸಂಘಟನೆ ಶಾಸಕ ವೇದವ್ಯಾಸ ಕಾಮತ್, ಮಂಗಳೂರು ಮೇಯರ್ ದಿವಾಕರ್ಗೆ ಮನವಿ ಸಲ್ಲಿಸಿ ಆಗ್ರಹ ವ್ಯಕ್ತಪಡಿಸಿತ್ತು. ಇದಕ್ಕೆ ಸ್ಥಳೀಯ ಶಾಲಾ ಆಡಳಿತ ಮಂಡಳಿ ಆಕ್ಷೇಪ ವ್ಯಕ್ತಪಡಿಸಿ, ಶಾಸಕ ವೇದವ್ಯಾಸ ಕಾಮತ್ ಅವರಿಗೆ ಆಗ್ರಹ ವ್ಯಕ್ತಪಡಿಸಿತ್ತು. ಈ ಮಧ್ಯೆ ನಾರಾಯಣ ಗುರು ಪರ-ವಿರೋಧ ಚರ್ಚೆ ನಡೆದಿದ್ದು, ಕೆಲವು ಬಸ್ಗಳಲ್ಲಿ ಸ್ಟಿಕ್ಕರ್ ಕೂಡ ಅಂಟಿಸಲಾಗಿತ್ತು.
ಅಧಿಕಾರಿಗಳಿಂದ ತಪಾಸಣೆ
ಬಸ್ಗಳಲ್ಲಿ ಸ್ಟಿಕ್ಕರ್ ಅಂಟಿಸಿರುವ ಬಗ್ಗೆ ಸಿಲ್ವಾ ಜೋಯ್ ಎಂಬವರು ಆರ್ಟಿಓ ಕಚೇರಿಗೆ ದೂರು ನೀಡಿ ಕ್ರಮಕೈಗೊಳ್ಳುವಂತೆ ಆಗ್ರಹಿಸಿದ್ದರು. ಅದರಂತೆ ಆರ್ಟಿಒ ಅಧಿಕಾರಿಗಳು ಮಂಗಳವಾರ ಸಂಜೆ ಲೇಡಿಹಿಲ್ ಸಮೀಪ ತಪಾಸಣೆ ನಡೆಸಿ ದಂಡ ಕಟ್ಟುವಂತೆ ಬಸ್ ಮಾಲೀಕರಿಗೆ ನೋಟಿಸು ನೀಡಿದ್ದಾರೆ.
ಸಂಘಟನೆಗಳ ಅಸಮಾಧಾನಬಸ್ ಮಾಲೀಕರಿಗೆ ನೋಟಿಸು ನೀಡಿದ ಕ್ರಮವನ್ನು ಬಿರುವೆರ್ ಕುಡ್ಲಸಂಘಟನೆಗಳು ಆಕ್ಷೇಪಿಸಿ ಲೇಡಿಹಿಲ್ ಸಮೀಪ ಪ್ರತಿಭಟನೆ ನಡೆಸಿತು. ಈ ಸಂದರ್ಭ ಶಾಸಕ ವೇದವ್ಯಾಸ ಕಾಮತ್ ಮೊಬೈಲ್ ಮೂಲಕ ಅಧಿಕಾರಿಗಳ ಜತೆ ಮಾತನಾಡಿ ಪರಿಸ್ಥಿತಿ ತಿಳಿಗೊಳಿಸಿದರು.
ನಗರದ ಲೇಡಿಹಿಲ್ ಸರ್ಕಲ್ಗೆ ನಾರಾಯಣಗುರು ಸರ್ಕಲ್ ಹೆಸರನ್ನಿಡುವಂತೆ ಬಿರುವೆರ್ ಕುಡ್ಲಸಂಘಟನೆ ಶಾಸಕ ವೇದವ್ಯಾಸ ಕಾಮತ್, ಮಂಗಳೂರು ಮೇಯರ್ ದಿವಾಕರ್ಗೆ ಮನವಿ ಸಲ್ಲಿಸಿ ಆಗ್ರಹ ವ್ಯಕ್ತಪಡಿಸಿತ್ತು. ಇದಕ್ಕೆ ಸ್ಥಳೀಯ ಶಾಲಾ ಆಡಳಿತ ಮಂಡಳಿ ಆಕ್ಷೇಪ ವ್ಯಕ್ತಪಡಿಸಿ, ಶಾಸಕ ವೇದವ್ಯಾಸ ಕಾಮತ್ ಅವರಿಗೆ ಆಗ್ರಹ ವ್ಯಕ್ತಪಡಿಸಿತ್ತು. ಈ ಮಧ್ಯೆ ನಾರಾಯಣ ಗುರು ಪರ-ವಿರೋಧ ಚರ್ಚೆ ನಡೆದಿದ್ದು, ಕೆಲವು ಬಸ್ಗಳಲ್ಲಿ ಸ್ಟಿಕ್ಕರ್ ಕೂಡ ಅಂಟಿಸಲಾಗಿತ್ತು.
ಅಧಿಕಾರಿಗಳಿಂದ ತಪಾಸಣೆ
ಬಸ್ಗಳಲ್ಲಿ ಸ್ಟಿಕ್ಕರ್ ಅಂಟಿಸಿರುವ ಬಗ್ಗೆ ಸಿಲ್ವಾ ಜೋಯ್ ಎಂಬವರು ಆರ್ಟಿಓ ಕಚೇರಿಗೆ ದೂರು ನೀಡಿ ಕ್ರಮಕೈಗೊಳ್ಳುವಂತೆ ಆಗ್ರಹಿಸಿದ್ದರು. ಅದರಂತೆ ಆರ್ಟಿಒ ಅಧಿಕಾರಿಗಳು ಮಂಗಳವಾರ ಸಂಜೆ ಲೇಡಿಹಿಲ್ ಸಮೀಪ ತಪಾಸಣೆ ನಡೆಸಿ ದಂಡ ಕಟ್ಟುವಂತೆ ಬಸ್ ಮಾಲೀಕರಿಗೆ ನೋಟಿಸು ನೀಡಿದ್ದಾರೆ.
ಸಂಘಟನೆಗಳ ಅಸಮಾಧಾನಬಸ್ ಮಾಲೀಕರಿಗೆ ನೋಟಿಸು ನೀಡಿದ ಕ್ರಮವನ್ನು ಬಿರುವೆರ್ ಕುಡ್ಲಸಂಘಟನೆಗಳು ಆಕ್ಷೇಪಿಸಿ ಲೇಡಿಹಿಲ್ ಸಮೀಪ ಪ್ರತಿಭಟನೆ ನಡೆಸಿತು. ಈ ಸಂದರ್ಭ ಶಾಸಕ ವೇದವ್ಯಾಸ ಕಾಮತ್ ಮೊಬೈಲ್ ಮೂಲಕ ಅಧಿಕಾರಿಗಳ ಜತೆ ಮಾತನಾಡಿ ಪರಿಸ್ಥಿತಿ ತಿಳಿಗೊಳಿಸಿದರು.