ಆ್ಯಪ್ನಗರ

ತುಳುವಿಗೆ ಸಾಂವಿಧಾನ ಸ್ಥಾನಮಾನ: ಪ್ರಧಾನಿಗೆ ಮತ್ತೆ ಡಾ.ಹೆಗ್ಗಡೆ ಮನವಿ

ತುಳುನಾಡಿನ ಮಾತೃಭಾಷೆಯಾಗಿರುವ ತುಳುವನ್ನು ಸಂವಿಧಾನದ ಎಂಟನೇ ಪರಿಚ್ಛೇದದಲ್ಲಿ‌ ಸೇರಿಸುವಂತೆ ಪ್ರಧಾನಿ ನರೇಂದ್ರ ಮೋದಿ ಅವರಲ್ಲಿ ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮನವಿ ಮಾಡಿದರು.

Vijaya Karnataka 29 Oct 2017, 12:15 pm
ಉಜಿರೆ: ತುಳುನಾಡಿನ ಮಾತೃಭಾಷೆಯಾಗಿರುವ ತುಳುವನ್ನು ಸಂವಿಧಾನದ ಎಂಟನೇ ಪರಿಚ್ಛೇದದಲ್ಲಿ‌ ಸೇರಿಸುವಂತೆ ಪ್ರಧಾನಿ ನರೇಂದ್ರ ಮೋದಿ ಅವರಲ್ಲಿ ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮನವಿ ಮಾಡಿದರು.
Vijaya Karnataka Web veerendra hegde asked to inclued tulu in 8th schedule of constituion
ತುಳುವಿಗೆ ಸಾಂವಿಧಾನ ಸ್ಥಾನಮಾನ: ಪ್ರಧಾನಿಗೆ ಮತ್ತೆ ಡಾ.ಹೆಗ್ಗಡೆ ಮನವಿ


'ಸನ್ಮಾನ್ಯ ಪ್ರಧಾನ ಮಂತ್ರಿಲೆ, ಎಂಕ್ಲೆನ ತುಳುನಾಡ್‌ದ ಬೊಕ್ಕ ಮಾತ ತುಳು ಬಂಧುಲೆನ ಪರವಾದ್‌ ಸೊಲ್ಮೆಲು. ಈರೆಗ್‌ ಸ್ವಾಗತ (ಸನ್ಮಾನ್ಯ ಪ್ರಧಾನಿ ಮಂತ್ರಿಯವರೆ, ತುಳುನಾಡು ಮತ್ತು ತುಳು ಜನತೆಯ ಪರವಾಗಿ ತಮಗೆ ಆತ್ಮೀಯ ಸ್ವಾಗತ ಮತ್ತು ಅಭಿನಂದನೆಗಳು). ನಮ್ಮ ಮಾತೃಭಾಷೆ ತುಳು. ಈ ಭಾಷೆಗೆ ಇನ್ನೂ ದೇಶದ ಇತರ ಭಾಷೆಗಳಂತೆ ನ್ಯಾಯವಾಗಿ ಸಲ್ಲಬೇಕಾದ ಮಾನ್ಯತೆ ದೊರೆತಿಲ್ಲ. ನಾವು ತುಳುವರು ತುಳು ಭಾಷೆಯನ್ನು ಸಂವಿಧಾನದ 8ನೇ ಪರಿಚ್ಛೇದಕ್ಕೆ ಸೇರಿಸಬೇಕೆಂದು ಮನವಿ ಮಾಡುತ್ತಿದ್ದೇವೆ. ಈ ಮೊದಲು ಹೊಸದಿಲ್ಲಿಯಲ್ಲಿ ತಮ್ಮನ್ನು ಭೇಟಿ ಮಾಡಿದಾಗ ಈ ಕುರಿತು ಜ್ಞಾಪನಾಪತ್ರವೊಂದನ್ನು ನೀಡಿದ್ದೆ' ಎಂದು ಡಾ. ಹೆಗ್ಗಡೆಯವರು ಪ್ರಧಾನಿಯವರನ್ನು ಸ್ವಾಗತಿಸುತ್ತ ನುಡಿದರು.

ತಾವು ಸರಕಾರವನ್ನು ಜನರ ಹತ್ತಿರ ತಂದಿದ್ದೀರಿ. ಇಡೀ ದೇಶಕ್ಕೆ ಇಂದು ಒಂದು ಎಂಬ ಭಾವನೆ ಬಂದಿದೆ. ಮೂರು ವರ್ಷಗಳಲ್ಲಿ ನಾನು ಬಹಳಷ್ಟು ಬದಲಾವಣೆಗಳನ್ನು ಗಮನಿಸಿದ್ದೇನೆ. ನೀವೊಂದು 'ಜಾಗೃತ ಭಾರತ'ವನ್ನು ನಿರ್ಮಿಸಿದ್ದೀರಿ.‌ ನಿಮ್ಮಿಂದಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ದೇಶದ ಸಂಬಂಧ ಸುಧಾರಣೆಯಾಗಿದೆ, ದೇಶಕ್ಕೆ ಹೊಸ ಖದರು ಸಿಕ್ಕಿದೆ ಎಂದು ಡಾ.ಹೆಗ್ಗಡೆ ಶ್ಲಾಘಿಸಿದರು.
ಧರ್ಮಸ್ಥಳ ಕ್ಷೇತ್ರ ಧಾರ್ಮಿಕ, ಆಧ್ಯಾತ್ಮಿಕ ಕೇಂದ್ರವಾಗಿ ಸೌಹಾರ್ದ ವಾತಾವರಣ ನಿರ್ಮಿಸಿದೆ. ದೇವಸ್ಥಾನದ ಮೂಲಕ ಜನತೆಗೆ ಅನ್ನದಾನ, ಔಷಧದಾನ, ವಿದ್ಯಾದಾನ ಮತ್ತು ಮುಖ್ಯವಾಗಿ ಅಭಯದಾನ ನೀಡಲಾಗುತ್ತಿದೆ. ಅಭಯದಾನ ಮೂಲಕ ಮೌಲ್ಯಯುತ ಶಿಕ್ಷಣ ಕೊಡಲಾಗುತ್ತಿದೆ. ಎಸ್‌ಕೆಆರ್‌ಡಿಪಿ ಮೂಲಕ ಸ್ವಸಹಾಯ ಗುಂಪುಗಳ ಮಹಿಳೆಯರನ್ನು ಸ್ವಾವಲಂಬಿಗಳನ್ನಾಗಿ ಮಾಡಲಾಗಿದೆ ಎಂದು ಅವರು ವಿವರಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ