ಆ್ಯಪ್ನಗರ

ಅಂಗವಿಕಲ ಹುಡುಗನ ವಿವಾಹವಾಗಲು ಒಪ್ಪಿ ಎಲ್ಲರ ಮನಗೆದ್ದ ಮಂಗಳೂರು ಹುಡುಗಿ!

ಇಂದಿನ ದಿನಮಾನದಲ್ಲಿ ಸುರಸುಂದರಾಂಗರಿಗೂ ಹುಡುಗಿ ಸಿಗುವುದು ಕಷ್ಟಸಾಧ್ಯ. ಪರಿಸ್ಥಿತಿ ಹೀಗಿರುವಾಗ ಮಂಗಳೂರಿನ ಯುವತಿಯೊಬ್ಬರು ಅಂಗವಿಕಲನನ್ನು ವರಿಸಲು ಮುಂದಾಗಿ ಎಲ್ಲರ ಮನಸ್ಸು ಗೆದ್ದಿದ್ದಾರೆ. ಈ ಕುರಿತ ವರದಿ ಇಲ್ಲಿದೆ.

Vijaya Karnataka Web 14 Dec 2019, 10:10 am
ಮಂಗಳೂರು: ಇಂದಿನ ದಿನಮಾನದಲ್ಲಿ ಸುರಸುಂದರಾಂಗರಿಗೂ ಹುಡುಗಿ ಸಿಗುವುದು ಕಷ್ಟಸಾಧ್ಯ. ಪರಿಸ್ಥಿತಿ ಹೀಗಿರುವಾಗ ಮಂಗಳೂರಿನ ಯುವತಿಯೊಬ್ಬರು ಅಂಗವಿಕಲನನ್ನು ವರಿಸಲು ಮುಂದಾಗಿ ಎಲ್ಲರ ಮನಸ್ಸು ಗೆದ್ದಿದ್ದಾರೆ. ಬೆಳ್ತಂಗಡಿ ತಾಲೂಕಿನ ಈ ಯುವತಿಯ ಹೆಸರು 'ಸಂಜೀವಿನಿ'.
Vijaya Karnataka Web mangaluru girl


ಚಂದ್ರಶೇಖರ್‌ ಲಾರಿ ಕ್ಲೀನರ್‌ ಆಗಿ ಕೆಲಸ ಮಾಡುತ್ತಿದ್ದ. ಕಳೆದ ವರ್ಷ ಅನಿರೀಕ್ಷಿತವಾಗಿ ಸಂಭವಿಸಿದ ಅಪಘಾತದಲ್ಲಿ ತನ್ನ ಎಡಗಾಲು ಕಳೆದುಕೊಂಡಿದ್ದ. ಇದಾದ ನಂತರ 4 ತಿಂಗಳ ಕಾಲ ಚಂದ್ರಶೇಖರ್‌ ಆಸ್ಪತ್ರೆಯಲ್ಲೇ ಕಳೆಯಬೇಕಾಯಿತು. ಈ ಬೆನ್ನಲ್ಲೇ ಮತ್ತೊಂದು ಆಘಾತಕಾರಿ ಸಂಗತಿ ನಡೆದಿತ್ತು. ತನ್ನ ಮಗನಿಗೆ ಅಪಘಾತವಾಗಿ ಒಂದು ಕಾಲು ಕಳೆದುಕೊಂಡಿರುವ ಸುದ್ದಿ ಕೇಳಿ ಚಂದ್ರಶೇಖರ್‌ ಅವರ ತಾಯಿಗೆ ಪಾರ್ಶ್ವವಾಯು (ಸ್ಟೋಕ್‌) ಆಗಿ ಹಾಸಿಗೆ ಹಿಡಿದರು. ಇದಷ್ಟೆ ಅಲ್ಲದೆ ಚಂದ್ರಶೇಖರ್‌ ಅವರದು ಒಂದು ಕಡು ಬಡ ಕುಟುಂಬವಾಗಿದೆ.

ಪ್ರತಿ ಉದ್ಯೋಗಿಗೂ 35 ಲಕ್ಷ ರೂ. ಬೋನಸ್‌! ಉದ್ಯೋಗಿಗಳ ಪಾಲಿಗೆ ಅಸಲಿ ಸಾಂತಾ ಕ್ಲಾಸ್‌ ಇವರೇ!

ಒಂದುವರ್ಷದ ಹಿಂದೆಯೇ ಸಂಜೀವಿನಿ ಮತ್ತು ಚಂದ್ರಶೇಖರ್‌ ಕುಟುಂಬದವರು ಮದುವೆ ಕುರಿತು ಮಾತುಕತೆ ನಡೆಸಿದ್ದರು. ಎರಡೂ ಕುಟುಂಬದವರು ಒಪ್ಪಿದ್ದರು. ಇದಾದ ಕೆಲವೇ ದಿನಗಳಲ್ಲಿ ಚಂದ್ರಶೇಖರ್‌ ಕೆಲಸ ಮಾಡುತ್ತಿದ್ದ ಗ್ಯಾಸ್‌ ಟ್ಯಾಂಕರ್‌ ಹಾಗೂ ಸ್ಟೇಷನರ್‌ ಲಾರಿ ನಡುವೆ ಅಫಘಾತ ಸಂಭವಿಸಿತ್ತು. ಅಫಘಾತದಲ್ಲಿ ಚಂದ್ರಶೇಖರ್‌ ತನ್ನ ಒಂದು ಕಾಲು ಕಳೆದುಕೊಂಡಿದ್ದ. ತಾಯಿ ಪಾರ್ಶ್ವವಾಯುವಿನಿಂದ ಹಾಸಿಗೆ ಹಿಡಿದಿದ್ದರು.

ಈ ಎಲ್ಲ ಸಂದಿಗ್ದ ಪರಿಸ್ಥಿತಿಯಲ್ಲೂ ಸಂಜೀವಿನಿಯು ಚಂದ್ರಶೇಖರನನ್ನು ವಿವಾಹವಾಗಲು ಹಿಂದೇಟು ಹಾಕಿಲ್ಲ. ಇದೀಗ ಚಂದ್ರ ಶೇಖರ್‌ ಗುಣಮುಖರಾಗಿದ್ದಾರೆ. ಸಂಜೀವಿನಿಗೆ ಕೆಲ ತಿಂಗಳ ಹಿಂದಷ್ಟೆ ಕಾರ್ಕಳದ ಚಂದ್ರಶೇಖರ್‌ ಜೊತೆ ನಿಶ್ಚಿತಾರ್ಥವಾಗಿದೆ. ಈ ಯುವತಿಯ ದಿಟ್ಟ ನಿರ್ಧಾರ ಹಲವಾರು ಜನರ ಹೃದಯ ಗೆದ್ದಿದೆ. ಸ್ವತಃ ಧರ್ಮಸ್ಥಳ ಕ್ಷೇತ್ರದ ಧರ್ಮಾಧಿಕಾರಿ ಶ್ರೀ ವೀರೇಂದ್ರ ಹೆಗ್ಗಡೆ ಅವರು ಯುವತಿಯ ಗಟ್ಟಿ ನಿರ್ಧಾರಕ್ಕೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಇವರ ವಿವಾಹಕ್ಕೆ ನೆರವಾಗಲು ಹಲವು ಹಿಂದೂಪರ ಸಂಘಟನೆಗಳು ಮುಂದೆ ಬಂದಿವೆ. ವಿಶ್ವ ಹಿಂದು ಪರಿಷತ್‌ನ ಕಾರ್ಯತಡ್ಕ ಘಟಕ ಇವರ ವಿವಾಹ ನಡೆಸಿಕೊಡುವ ಹೊಣೆ ವಹಿಸಿಕೊಂಡಿದೆ. ಡಿ.15ರಂದು ಇವರ ವಿವಾಹ ನಿಶ್ಚಯವಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ