ಆ್ಯಪ್ನಗರ

ಔಷಧಕ್ಕಾಗಿ 16 ಕಿ.ಮೀ. ದೂರ ನಡೆದ ಮಹಿಳೆ: ತುರ್ತು ಕಾರ್ಯಪಡೆಯಿಂದ ನೆರವು

ದ.ಕ. ಜಿಲ್ಲೆಯ ಸುಳ್ಯ ತಾಲೂಕಿನ ಕಲ್ಮಕಾರಿನ ಪನ್ನೆ ಬಳಿಯ ಸುಮಾರು 70 ವರ್ಷದ ಮಹಿಳೆಯೊಬ್ಬರು ತನ್ನೂರಿನಲ್ಲಿ ತನಗೆ ಬೇಕಾದ ಔಷಧ ಸಿಗದೆ ಇದ್ದ ಹಿನ್ನೆಲೆಯಲ್ಲಿ ಸುಮಾರು 16 ಕಿ.ಮೀ. ದೂರದ ಗುತ್ತಿಗಾರಿಗೆ ಕಾಲ್ನಡಿಗೆಯಲ್ಲೇ ಬಂದ ಘಟನೆ ಶುಕ್ರವಾರ ನಡೆದಿದೆ.

Vijaya Karnataka Web 10 Apr 2020, 11:36 pm
ಸುಬ್ರಹ್ಮಣ್ಯ: ದ.ಕ. ಜಿಲ್ಲೆಯ ಸುಳ್ಯ ತಾಲೂಕಿನ ಕಲ್ಮಕಾರಿನ ಪನ್ನೆ ಬಳಿಯ ಸುಮಾರು 70 ವರ್ಷದ ಮಹಿಳೆಯೊಬ್ಬರು ತನ್ನೂರಿನಲ್ಲಿ ತನಗೆ ಬೇಕಾದ ಔಷಧ ಸಿಗದೆ ಇದ್ದ ಹಿನ್ನೆಲೆಯಲ್ಲಿ ಸುಮಾರು 16 ಕಿ.ಮೀ. ದೂರದ ಗುತ್ತಿಗಾರಿಗೆ ಕಾಲ್ನಡಿಗೆಯಲ್ಲೇ ಬಂದ ಘಟನೆ ಶುಕ್ರವಾರ ನಡೆದಿದೆ.
Vijaya Karnataka Web Coronavirus 6


ಗ್ರಾಮೀಣ ಪ್ರದೇಶ ಕಲ್ಮಕಾರಿನ ಪನ್ನೆಯ ಈ ಮಹಿಳೆ ಕಲ್ಮಕಾರಿನ ಮೆಡಿಕಲ್‌ನಲ್ಲಿ ಔಷಧ ಸಿಗದೇ ಇದ್ದುದರಿಂದ ಗುತ್ತಿಗಾರಿಗೆ ಹೋಗಬೇಕಾಯಿತು. ಆದರೆ ಲಾಕ್‌ಡೌನ್‌ ಕಾರಣ ಯಾವುದೇ ವಾಹನ ಸಿಗದಿದ್ದುದರಿಂದ ಸುಮಾರು 16 ಕಿ.ಮೀ. ದೂರವನ್ನು ನಡೆದುಕೊಂಡೇ ತೆರಳಿ ತನಗೆ ಬೇಕಾದ ಔಷಧ ಪಡೆದುಕೊಂಡರು.

ಬಳಿಕ ತನ್ನೂರಿಗೆ ಹೊರಟಾಗ ಗುತ್ತಿಗಾರು ಗ್ರಾಪಂ ಅಧ್ಯಕ್ಷ ಅಚ್ಚುತ ಗುತ್ತಿಗಾರು, ಪಿಡಿಒ ಶ್ಯಾಮಪ್ರಸಾದ್‌ ಹಾಗೂ ತುರ್ತು ಕಾರ್ಯಪಡೆ ಸದಸ್ಯರ ಕಣ್ಣಿಗೆ ಬಿದ್ದರು.

ಮುಖ್ಯಮಂತ್ರಿಗಳ ಜತೆ ಮೋದಿ ಸಮಾಲೋಚನೆ: ಲಾಕ್‌ಡೌನ್‌ ಗೊಂದಲಕ್ಕೆ ತೆರೆ ಸಾಧ್ಯತೆ!

ವಿಷಯ ತಿಳಿದ ಗುತ್ತಿಗಾರಿನ ಕೊರೊನಾ ತುರ್ತು ಕಾರ್ಯಪಡೆಯು ಆಟೋರಿಕ್ಷಾ ಗೊತ್ತುಪಡಿಸಿ ಅವರನ್ನು ಊರಿಗೆ ಕಳುಹಿಸಿದರು. ಈ ಮೂಲಕ ಗುತ್ತಿಗಾರು ಗ್ರಾಪಂ ಅಧ್ಯಕ್ಷರು ಮತ್ತು ತುರ್ತು ಕಾರ್ಯಪಡೆ ಮಾನವೀಯತೆ ಮೆರೆಯಿತು.

ಲಾಕ್‌ಡೌನ್‌: ಏ.14ರ ನಂತರ ಮತ್ತೆ ಚೇತರಿಸಲಿದಯೇ ದೇಶ? ಆರ್ಥಿಕತೆಯ ಅನ್‌ಲಾಕ್‌ ಹೇಗೆ?

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ