ಆ್ಯಪ್ನಗರ

ಸಂಸತ್ತಿನ ಸ್ವರೂಪವೇ ಅನುಭವ ಮಂಟಪ

ಬಸವಣ್ಣನವರು ಅನುಭವ ಮಂಟಪ ವನ್ನು ಸ್ಥಾಪಿಸುವ ಮೂಲಕ 12ನೇ ಶತಮಾನದಲ್ಲಿಯೇ ಪ್ರಜಾಪ್ರಭುತ್ವದ ಮಾದರಿಯನ್ನು ಹುಟ್ಟು ಹಾಕಿದರು. ಅಂದಿನ ಅನುಭವ ಮಂಟಪವು ಇಂದಿನ ಪ್ರಜಾಪ್ರಭುತ್ವದ ಅತ್ಯುನ್ನತ ಸಂಸ್ಥೆಯಾದ ಸಂಸತ್ತಿನ ಮಾದರಿಯ ಸ್ವರೂಪದಲ್ಲಿತ್ತು ಎಂದು ಸಮ್ಮೇಳನಾಧ್ಯಕ್ಷ ಎಸ್‌. ಎಸ್‌. ನಾಯಕ್‌ ಹೇಳಿದರು.

Vijaya Karnataka 4 Nov 2019, 5:00 am
ಮಂಗಳೂರು: ಬಸವಣ್ಣನವರು ಅನುಭವ ಮಂಟಪ ವನ್ನು ಸ್ಥಾಪಿಸುವ ಮೂಲಕ 12ನೇ ಶತಮಾನದಲ್ಲಿಯೇ ಪ್ರಜಾಪ್ರಭುತ್ವದ ಮಾದರಿಯನ್ನು ಹುಟ್ಟು ಹಾಕಿದರು. ಅಂದಿನ ಅನುಭವ ಮಂಟಪವು ಇಂದಿನ ಪ್ರಜಾಪ್ರಭುತ್ವದ ಅತ್ಯುನ್ನತ ಸಂಸ್ಥೆಯಾದ ಸಂಸತ್ತಿನ ಮಾದರಿಯ ಸ್ವರೂಪದಲ್ಲಿತ್ತು ಎಂದು ಸಮ್ಮೇಳನಾಧ್ಯಕ್ಷ ಎಸ್‌. ಎಸ್‌. ನಾಯಕ್‌ ಹೇಳಿದರು.
Vijaya Karnataka Web world vachana sahitya and cultural sammelan
ಸಂಸತ್ತಿನ ಸ್ವರೂಪವೇ ಅನುಭವ ಮಂಟಪ

ಜ್ಞಾನ ಮಂದಾರ ಶೈಕ್ಷಣಿಕ, ಸಾಂಸ್ಕೃತಿಕ ಟ್ರಸ್ಟ್‌ ಆಶ್ರಯದಲ್ಲಿನಗರದ ವಿಶ್ವ ವಿದ್ಯಾಲಯ ಕಾಲೇಜಿನ ರವೀಂದ್ರ ಕಲಾ ಭವನದಲ್ಲಿಭಾನುವಾರ ಹಮ್ಮಿಕೊಳ್ಳ ಲಾದ 5ನೇ ವಿಶ್ವ ಕನ್ನಡ ವಚನ ಸಾಹಿತ್ಯ ಮತ್ತು ಸಾಂಸ್ಕೃತಿಕ ಸಮ್ಮೇಳನ ಹಾಗೂ ಕನ್ನಡ ರಾಜ್ಯೋತ್ಸವ ಸಂಭ್ರಮದ ಸಮ್ಮೇಳನಾಧ್ಯಕ್ಷತೆ ವಹಿಸಿ ಮಾತನಾಡಿದರು.
ಕನ್ನಡ ವಚನ ಸಾಹಿತ್ಯ ಮತ್ತು ದಾಸ ಸಾಹಿತ್ಯ ಸರಸ್ವತಿಯ ಎರಡು ನಯನ ಗಳು. ಮಾನವೀಯ ಮೌಲ್ಯವನ್ನು ಸಾರಿದ ಬಸವಣ್ಣನವರ ವಚನಗಳು ಜನರಿಗೆ ಬಹಳ ಹತ್ತಿರವಾಯಿತು. ಸಮಾಜ ಸುಧಾರಣೆ ಗಳಿಗೆ ಪ್ರೇರಣೆಯಾಯಿತು. ಮೂರು ಸಾಲುಗಳ ತ್ರಿಪದಿಗಳ ಮೂಲಕ ಸರ್ವಜ್ಞ ರವರು ನೀಡಿದ ವಚನಗಳು ಬದುಕಿಗೆ ಧೈರ್ಯ ಮತ್ತು ಅರ್ಥವನ್ನು ನೀಡಿತು ಎಂದರು. ಸಮ್ಮೇಳನ ಉದ್ಘಾಟಿಸಿದ ಎನ್‌ಎಂಪಿಟಿ ಅಧ್ಯಕ್ಷ ವೆಂಕಟರಮಣ ಅಕ್ಕ ರಾಜು ಮಾತನಾಡಿ, ಮೌಲ್ಯಗಳ ಅನು ಸರಣೆಯಿಂದ ಬದುಕಿಗೆ ಅರ್ಥ ಬರುತ್ತದೆ ಎಂದರು. ವಿವಿಧ ಕ್ಷೇತ್ರಗಳಲ್ಲಿಸಾಧನೆ ಮಾಡಿದ ರವೀಂದ್ರ ಶೆಟ್ಟಿ ನುಳಿಯಾಲು, ಡಾ. ಸಂಜಯ ಪಂ. ಹೊಸಮಠ, ಚಂದ್ರ ಕೋಲ್ಚಾರು, ಬಿ.ಎಸ್‌. ತಾಂಡವ ಮೂರ್ತಿ, ಜಯಂತ ನಡುಬæೖಲು, ನಿತ್ಯಾನಂದ ಮುಂಡೋಡಿ, ರಾಕೇಶ್‌ ಕುಮಾರ್‌, ಭಾಸ್ಕರ ಬಲ್ಯಾಯ, ಸುಂದರ ಗೌಡ ಮಂಡೆಕರ, ಎ.ಚಂದ್ರ ನಲಿಕೆ, ಕೋಟಿಯಪ್ಪ ಪೂಜಾರಿ ಸೇರ, ವಿದ್ಯಾ ರಾಕೇಶ್‌, ಯಶ್ಚಿತ್‌ ಕಾಳಂಮನೆ ಅವರಿಗೆ ಸಮಾಜ ರತ್ನ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಶಾರದಾ ವಿದ್ಯಾಲಯದ ಅಧ್ಯಕ್ಷ ಎಂ.ಬಿ. ಪುರಾ ಣಿಕ್‌, ಎಕ್ಸ್‌ಪರ್ಟ್‌ ಶಿಕ್ಷಣ ಸಮೂಹ ಸಂಸ್ಥೆಗಳ ಅಧ್ಯಕ್ಷ ಪ್ರೊ. ನರೇಂದ್ರ ಎಲ್‌. ನಾಯಕ್‌, ಶ್ರೀದೇವಿ ಶಿಕ್ಷಣ ಸಂಸ್ಥೆ ಅಧ್ಯಕ್ಷ ಎ. ಸದಾನಂದ ಶೆಟ್ಟಿ, ಸೂರಜ್‌ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಮಂಜು ನಾಥ್‌ ರೇವಣ್ಕರ್‌, ದ.ಕ. ಜಿಲ್ಲಾಸಾಹಿತ್ಯ ಪರಿಷತ್‌ ಅಧ್ಯಕ್ಷ ಪ್ರದೀಪ್‌ ಕುಮಾರ್‌ ಕಲ್ಕೂರ ಮತ್ತಿತರರು ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ