ಆ್ಯಪ್ನಗರ

'ಯಕ್ಷಗಾನದ ಮಹಾಬಲ' ರಾಮ ಹೆಗಡೆ ಕೆರೆಮನೆ ನಿಧನ

'ಯಕ್ಷಗಾನದ ಮಹಾಬಲ'ರೆಂದೇ ಪ್ರಖ್ಯಾತರಾಗಿದ್ದ ಪ್ರೊ. ರಾಮ ಹೆಗಡೆ ಕೆರೆಮನೆ(67) ಬುಧವಾರ ಅನಾರೋಗ್ಯದ ಕಾರಣದಿಂದ ಮಣಿಪಾಲದ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ವೃತ್ತಿಯಲ್ಲಿ ಗಣಿತ ಉಪನ್ಯಾಸಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು. ಯಕ್ಷಗಾನ ಕಲೆಯಲ್ಲಿ ಅಪಾರ ಪ್ರೀತಿ ಹೊಂದಿದ್ದರು.

Vijaya Karnataka Web 19 Sep 2019, 10:42 am
ವಿಟ್ಲ: ಯಕ್ಷಗಾನದ ಮಹಾಬಲ'ರೆಂದೇ ಪ್ರಖ್ಯಾತರಾಗಿದ್ದ ಡಾ. ಕೆರೆಮನೆ ಮಹಾಬಲ ಹೆಗಡೆಯವರ ಪುತ್ರ ಪ್ರೊ. ರಾಮ ಹೆಗಡೆ ಕೆರೆಮನೆ(67) ಬುಧವಾರ ಅಲ್ಪಕಾಲದ ಅಸೌಖ್ಯದಿಂದ ಮಣಿಪಾಲದ ಆಸ್ಪತ್ರೆಯಲ್ಲಿನಿಧನರಾದರು.
Vijaya Karnataka Web ramu keremane hegde


ಅಳಿಕೆ ಶ್ರೀ ಸತ್ಯಸಾಯಿ ಲೋಕಸೇವಾ ವಿದ್ಯಾಸಂಸ್ಥೆಯಲ್ಲಿಸುಮಾರು 38 ವರ್ಷ ಗಣಿತ ಉಪನ್ಯಾಸಕರಾಗಿ ಕಾರ್ಯನಿರ್ವಹಿಸಿ, ನಿವೃತ್ತರಾದ ಇವರು ಆರ್‌.ಎಂ. ಹೆಗಡೆ ಎಂದೇ ಖ್ಯಾತಿ ಗಳಿಸಿದ್ದರು. ಹಿಂದುಸ್ತಾನಿ ಗಾಯಕ, ಗಂಗೂಬಾಯಿ ಹಾನಗಲ್‌ ಅವರ ಶಿಷ್ಯರಾಗಿದ್ದ ಇವರು ನಿವೃತ್ತರಾದ ಮೇಲೆ ಯಕ್ಷರಂಗದಲ್ಲಿತಮ್ಮನ್ನು ತೊಡಗಿಸಿಕೊಂಡಿದ್ದರು. ಯಕ್ಷಗಾನದಲ್ಲಿರುವ ಅನೇಕ ಹಳೆಯ ರಾಗಗಳ ಕುರಿತು ಆಳವಾದ ಅಧ್ಯಯನ ಮಾಡಿಟ್ಟುಕೊಂಡು ಆ ಕುರಿತಾದ ಒಂದು ದೀರ್ಘವಾದ ವೀಡಿಯೋ ಧ್ವನಿಸುರುಳಿ ರೆಕಾರ್ಡ್‌ ಮಾಡಿಸಲು ಎಲ್ಲಸಿದ್ಧತೆ ಮಾಡಿದ್ದರು.

ಕೆಲವು ದಿನಗಳ ಹಿಂದೆ ಮಿದುಳಿನ ರಕ್ತಸ್ರಾವದಿಂದಾಗಿ ಮಣಿಪಾಲದಲ್ಲಿ ಚಿಕಿತ್ಸೆಗೆ ಸೇರಿದ್ದ ಅವರು ಕೋಮಾದಲ್ಲಿಯೇ ಇದ್ದರು. ಸ್ವತಃ ನೃತ್ಯಗಾರರೂ, ಹಾಡುಗಾರರೂ, ಮೃದಂಗ ವಾದನಕ್ಕೂ ಸೈ ಎನಿಸಿದ್ದ ಇವರ ಆಕಸ್ಮಿಕ ನಿಧನ ಯಕ್ಷಗಾನದ ಲೋಕಕ್ಕೇ ತುಂಬಲಾರದ ನಷ್ಟವಾಗಿದೆ. ಅವರಿಗೆ ಪತ್ನಿ, ಇಬ್ಬರು ಪುತ್ರ ಇದ್ದಾರೆ.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ