ಆ್ಯಪ್ನಗರ

ಕಂಬಳದ 'ಓಟದ ವೀರ' ಶ್ರೀನಿವಾಸ ಗೌಡಗೆ ಯಡಿಯೂರಪ್ಪ ಸನ್ಮಾನ

ಬೆಂಗಳೂರು: ಕಂಬಳದ ಮೂಲಕ ತಮ್ಮ ಓಟದ ವೇಗವನ್ನು ಇಡೀ ದೇಶಕ್ಕೆ ಪರಿಚಯಿಸಿದ ಶ್ರೀನಿವಾಸಗೌಡ ಅವರಿಗೆ ಬೆಂಗಳೂರಿನ ಮುಖ್ಯಮಂತ್ರಿ ಸಚಿವಾಲಯ, ಕಾರ್ಮಿಕ, ವಾರ್ತಾ ಇಲಾಖೆ, ಕ್ರೀಡಾಪ್ರಾಧಿಕಾರ ಹೀಗೆ ಹಲವು ಕಡೆ ಗೌರವ, ಸನ್ಮಾನಗಳು ಸಂದವು. ಸಾಂಪ್ರದಾಯಿಕ ಕ್ರೀಡೆ ‘ಕಂಬಳ’ದಲ್ಲಿ ಓಟದ ಮೂಲಕ ದಾಖಲೆ ನಿರ್ಮಿಸಿರುವ ಮಂಗಳೂರು ತಾಲೂಕು ಅಶ್ವತ್ಥಪುರದ ಶ್ರೀನಿವಾಸಗೌಡ ಅವರನ್ನು ಜಮೈಕಾದ ಅಥ್ಲೀಟ್‌ ಉಸೈನ್‌ ಬೋಲ್ಟ್‌ ಗೆ ಹೋಲಿಕೆ ಮಾಡಲಾಗುತ್ತಿದೆ. ಅವರಿಗೆ ಒಲಂಪಿಕ್ಸ್‌ನಲ್ಲಿ ಅವಕಾಶ ಕಲ್ಪಿಸಲು ಸೂಕ್ತ ತರಬೇತಿ ಕೊಡಲು ಭಾರತೀಯ ಕ್ರೀಡಾ ಪ್ರಾಧಿಕಾರ ಆಸಕ್ತಿ ತೋರಿದೆ. ಆದರೆ, ಮಾ.10ರವರೆಗೆ ಕಂಬಳದಲ್ಲಿ ಪಾಲ್ಗೊಳ್ಳುತ್ತಿರುವ ಶ್ರೀನಿವಾಸಗೌಡ, ಅ ಬಳಿಕವಷ್ಟೇ ಕ್ರೀಡಾ ಪ್ರಾಧಿಕಾರದ ಆಹ್ವಾನವನ್ನು ಒಪ್ಪುವ ಕುರಿತು ನಿರ್ಧರಿಸಲಿದ್ದಾರೆ.

Vijaya Karnataka Web 17 Feb 2020, 7:36 pm
ಬೆಂಗಳೂರು: ಕಂಬಳದ ಮೂಲಕ ತಮ್ಮ ಓಟದ ವೇಗವನ್ನು ಇಡೀ ದೇಶಕ್ಕೆ ಪರಿಚಯಿಸಿದ ಶ್ರೀನಿವಾಸಗೌಡ ಅವರಿಗೆ ಬೆಂಗಳೂರಿನ ಮುಖ್ಯಮಂತ್ರಿ ಸಚಿವಾಲಯ, ಕಾರ್ಮಿಕ, ವಾರ್ತಾ ಇಲಾಖೆ, ಕ್ರೀಡಾಪ್ರಾಧಿಕಾರ ಹೀಗೆ ಹಲವು ಕಡೆ ಗೌರವ, ಸನ್ಮಾನಗಳು ಸಂದವು. ಸಾಂಪ್ರದಾಯಿಕ ಕ್ರೀಡೆ ‘ಕಂಬಳ’ದಲ್ಲಿ ಓಟದ ಮೂಲಕ ದಾಖಲೆ ನಿರ್ಮಿಸಿರುವ ಮಂಗಳೂರು ತಾಲೂಕು ಅಶ್ವತ್ಥಪುರದ ಶ್ರೀನಿವಾಸಗೌಡ ಅವರನ್ನು ಜಮೈಕಾದ ಅಥ್ಲೀಟ್‌ ಉಸೈನ್‌ ಬೋಲ್ಟ್‌ ಗೆ ಹೋಲಿಕೆ ಮಾಡಲಾಗುತ್ತಿದೆ. ಅವರಿಗೆ ಒಲಂಪಿಕ್ಸ್‌ನಲ್ಲಿ ಅವಕಾಶ ಕಲ್ಪಿಸಲು ಸೂಕ್ತ ತರಬೇತಿ ಕೊಡಲು ಭಾರತೀಯ ಕ್ರೀಡಾ ಪ್ರಾಧಿಕಾರ ಆಸಕ್ತಿ ತೋರಿದೆ. ಆದರೆ, ಮಾ.10ರವರೆಗೆ ಕಂಬಳದಲ್ಲಿ ಪಾಲ್ಗೊಳ್ಳುತ್ತಿರುವ ಶ್ರೀನಿವಾಸಗೌಡ, ಅ ಬಳಿಕವಷ್ಟೇ ಕ್ರೀಡಾ ಪ್ರಾಧಿಕಾರದ ಆಹ್ವಾನವನ್ನು ಒಪ್ಪುವ ಕುರಿತು ನಿರ್ಧರಿಸಲಿದ್ದಾರೆ.
Vijaya Karnataka Web yediyurappa pays homage to kambalas race hero srinivasa gowda
ಕಂಬಳದ 'ಓಟದ ವೀರ' ಶ್ರೀನಿವಾಸ ಗೌಡಗೆ ಯಡಿಯೂರಪ್ಪ ಸನ್ಮಾನ



​ವಿಧಾನಸೌಧದಲ್ಲಿ ಸನ್ಮಾನ

ಮೂಲತಃ ಕಟ್ಟಡ ಕಾರ್ಮಿಕರಾದ ಶ್ರೀನಿವಾಸಗೌಡ ಅವರನ್ನು ರಾಜ್ಯ ಸರಕಾರ ಸೋಮವಾರ ವಿಧಾನಸೌಧಕ್ಕೆ ಆಹ್ವಾನಿಸಿ ಸನ್ಮಾನಿಸಿತು. ಗೌಡರ ಸಾಧನೆಗೆ ಖುದ್ದು ಸಿಎಂ ಬಿಎಸ್‌ ಯಡಿಯೂರಪ್ಪ ಅವರು ಅಭಿನಂದನೆ ಸಲ್ಲಿಸಿದರು. ಮೈಸೂರು ಪೇಟ ತೊಡಿಸಿ ಸನ್ಮಾನಿಸಿದರು. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ಪ್ರಶಂಸಾ ಪತ್ರ ಹಾಗೂ ಕಾರ್ಮಿಕ ಇಲಾಖೆ ವತಿಯಿಂದ 3 ಲಕ್ಷ ರೂ. ಪ್ರೋತ್ಸಾಹಧನದ ಚೆಕ್‌ ಅನ್ನು ಶ್ರೀನಿವಾಸಗೌಡಗೆ ಹಸ್ತಾಂತರಿಸಲಾಯಿತು.


ತುಳುನಾಡ ಕಂಬಳ ವೀರನಿಗೆ ಉಪರಾಷ್ಟ್ರಪತಿಯಿಂದ ಪ್ರಶಂಸೆ, ಟ್ವೀಟ್‌ನಲ್ಲಿ ಹೇಳಿದ್ದೇನು ?

​​ಗ್ರಾಮೀಣ ಕ್ರೀಡೆಗೆ ಹೆಚ್ಚು ಪ್ರೋತ್ಸಾಹ

‘‘ದಕ್ಷಿಣ ಕನ್ನಡದ ಸಾಂಪ್ರದಾಯಿಕ ಕ್ರೀಡೆ ‘ಕಂಬಳ’ ಓಟದಲ್ಲಿ ದಾಖಲೆ ನಿರ್ಮಿಸಿದ್ದ ಶ್ರೀನಿವಾಸಗೌಡ ಬಗ್ಗೆ ಮಾಧ್ಯಮದಲ್ಲಿ ಗಮನಿಸಿದ್ದೆ. ಅವರನ್ನು ವಿಧಾನಸೌಧಕ್ಕೆ ಆಹ್ವಾನಿಸಿ ಸಂತೋಷದಿಂದ ಅಭಿನಂದಿಸಿದ್ದೇನೆ. ಸರಕಾರ ಗ್ರಾಮೀಣ ಕ್ರೀಡೆಗೆ ಹೆಚ್ಚು ಪ್ರೋತ್ಸಾಹ ನೀಡಲಿದೆ,’’ ಎಂದು ಸಿಎಂ ಯಡಿಯೂರಪ್ಪ ಈ ಸಂದರ್ಭದಲ್ಲಿ ಹೇಳಿದರು. ಸಚಿವರಾದ ಸಿಟಿ ರವಿ, ಶಿವರಾಮ್‌ ಹೆಬ್ಬಾರ್‌, ಭಾರತೀಯ ಕ್ರೀಡಾ ಪ್ರಾಧಿಕಾರದ ನಿರ್ದೇಶಕ ಅಜಯ್‌ ಕುಮಾರ್‌ ಬೆಹಲ್‌, ಕ್ರೀಡೆ ಮತ್ತು ಯುವಜನ ಸಬಲೀಕರಣ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.


ಕಂಬಳದ ಉಸೇನ್‌ ಬೋಲ್ಟ್‌ಗೆ ಕೇಂದ್ರ ಸಚಿವರ ಬುಲಾವ್‌, ಹಳ್ಳಿಯಿಂದ ದಿಲ್ಲಿಯತ್ತ ಶ್ರೀನಿವಾಸಗೌಡ

​ಖುಷಿ ಪಟ್ಟ ಶ್ರೀನಿವಾಸಗೌಡ

ಸನ್ಮಾನ ಸ್ವೀಕರಿಸಿದ ಶ್ರೀನಿವಾಸಗೌಡ ‘‘ಉಸೇನ್‌ ಬೋಲ್ಟ್‌ ಬಗ್ಗೆ ಕೇಳಿದ್ದೆ. ನಾನೂ ಅಷ್ಟೂ ಫಾಸ್ಟ್‌ ಆಗಿ ಓಡುತ್ತೇನೆ ಅಂದುಕೊಂಡಿರಲಿಲ್ಲ. ಯಜಮಾನರು ಕೋಣಗಳನ್ನು ಚೆನ್ನಾಗಿ ಸಾಕಿದ್ದರಿಂದ ನಾನು ವೇಗವಾಗಿ ಓಡಿ ದಾಖಲೆ ನಿರ್ಮಿಸಲು ಸಾಧ್ಯವಾಯಿತು. ಮುಖ್ಯಮಂತ್ರಿಗಳೇ ಕರೆದು ಸನ್ಮಾನ ಮಾಡಿದ್ದು ಖುಷಿ ತಂದಿದೆ,’’ ಎಂದರು.

​ಮಾರ್ಚ್‌ 10ರ ಬಳಿಕ ತರಬೇತಿ ಬಗ್ಗೆ ತೀರ್ಮಾನ

‘‘12 ಕಂಬಳಗಳಲ್ಲಿ 35 ಮೆಡಲ್‌ ಪಡೆದಿದ್ದೇನೆ. ರಾಷ್ಟ್ರೀಯ ಮಟ್ಟದ ಕ್ರೀಡೆಯಲ್ಲಿ ಸ್ಪರ್ಧಿಸುವ ತರಬೇತಿಗೆ ಆಹ್ವಾನ ಬಂದಿದೆ. ಮಾರ್ಚ್‌ 10 ರವರೆಗೆ ಕಂಬಳ ನಡೆಯಲಿವೆ. ಕಂಬಳಗಳು ಮುಗಿದ ಬಳಿಕ ತರಬೇತಿ ಪಡೆಯುವ ಬಗ್ಗೆ ನಿರ್ಧಾರ ಕೈಗೊಳ್ಳುತ್ತೇನೆ,’’ ಎಂದು ಸ್ಪಷ್ಟಪಡಿಸಿದರು.


ಕಂಬಳ ಸಂರಕ್ಷಣೆ ಮತ್ತು ತರಬೇತಿ ಆಕಾಡೆಮಿಯ ಗುಣಪಾಲ ಕಡಂಬ, ವಾರ್ತಾ ಇಲಾಖೆ ಪ್ರಧಾನ ಕಾರ್ಯದರ್ಶಿ ಮಣಿವಣ್ಣನ್‌, ಕಾರ್ಯದರ್ಶಿ ಸಿದ್ದರಾಮಯ್ಯ ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ