ಆರ್. ಸಿ. ಭಟ್
ಮಂಗಳೂರು: ದಕ್ಷಿಣ ಕನ್ನಡ ಹಾಗೂ ಮಲೆನಾಡು ಭಾಗದ ಅಡಿಕೆ ತೋಟಗಳಲ್ಲಿಕಂಡು ಬಂದಿರುವ ಹಳದಿ ರೋಗ ಬಾಧೆ ವರ್ಷದಿಂದ ವರ್ಷಕ್ಕೆ ವಿಸ್ತರಿಸುತ್ತಾ ಹೋಗುತ್ತಿದ್ದಂತೆ ಇದಕ್ಕೊಂದು ಪರಿಹಾರ ಕಂಡುಕೊಳ್ಳುವ ಬಗ್ಗೆ ಸರಕಾರ ಹಾಗೂ ಕೃಷಿ ವಿಜ್ಞಾನಿಗಳ ಮೇಲೆ ಒತ್ತಡ ಬರತೊಡಗಿದೆ. ಈ ಹಿನ್ನೆಲೆಯಲ್ಲಿವಿಜ್ಞಾನಿಗಳ ತಂಡ ಸತತ ಅಧ್ಯಯನ ನಡೆಸುತ್ತಿದ್ದು, ರೋಗ ನಿರೋಧಕ ತಳಿ ಅಭಿವೃದ್ಧಿಪಡಿಸುವತ್ತ ಚಿತ್ತ ಹರಿಸಿದ್ದಾರೆ. ಎರಡು ದಶಕಗಳಿಗೂ ಹೆಚ್ಚು ಕಾಲದಿಂದ ಹಳದಿ ರೋಗ ಅಡಿಕೆ ತೋಟಗಳನ್ನು ಬಾಧಿಸುತ್ತಿದೆ. ಆದರೆ ಇದಕ್ಕೆ ನಿಖರ ಕಾರಣವಾಗಲಿ, ನಿಯಂತ್ರಣಕ್ಕೆ ಔಷಧವನ್ನಾಗಲಿ ಇನ್ನೂ ಪತ್ತೆ ಮಾಡಲು ಸಾಧ್ಯವಾಗಲಿಲ್ಲ. ಪೈಟೋಪ್ಲಾಸ್ಮಾ ಎಂಬ ವೈರಾಣು ಕಾರಣ ಎಂದು ಹೇಳಲಾಗುತ್ತಿದೆಯಾದರೂ ಅದನ್ನು ನಿಯಂತ್ರಿಸಲು ಸಾಧ್ಯವಾಗಿಲ್ಲ. ಈ ನಿಟ್ಟಿನಲ್ಲಿ ಇದಕ್ಕೊಂದು ಶಾಶ್ವತ ಪರಿಹಾರ ಕಂಡುಕೊಳ್ಳಬೇಕು ಎಂದು ಕಳೆದೆರಡು ವರ್ಷಗಳಿಂದ ಕೃಷಿಕರ ವಲಯದಿಂದ ಆಗ್ರಹಗಳು ಕೇಳಿ ಬರುತ್ತಿದೆ. ಈ ಹಿನ್ನೆಲೆಯಲ್ಲಿ ಹಳದಿ ರೋಗ ತಡೆಗೆ ಮತ್ತು ಅದಕ್ಕೆ ಪರಿಹಾರ ಕಂಡುಹಿಡಿಯುವ ನಿಟ್ಟಿನಲ್ಲಿ ಗಂಭೀರ ಪ್ರಯತ್ನ ಆರಂಭವಾಗಿದೆ.
ರೋಗ ಬಾಧಿತ ಕೆಲವು ಸಸ್ಯ ವರ್ಗಗಳಿಗೆ, ತರಕಾರಿ ಗಿಡಗಳಲ್ಲಿ ರೋಗ ನಿರೋಧಕ ತಳಿ ಅಭಿವೃದ್ಧಿಪಡಿಸಿ ಯಶಸ್ವಿಯಾದ ಉದಾಹರಣೆಗಳು ಇವೆ. ಇದೇ ಮಾದರಿಯನ್ನು ಅಡಿಕೆ ಕೃಷಿಯಲ್ಲೂ ಯಾಕೆ ಬಳಕೆ ಮಾಡಬಾರದು ಎಂಬ ಬೇಡಿಕೆ ಅಡಿಕೆ ಕೃಷಿಕರದ್ದು. ಈ ಹಿನ್ನೆಲೆಯಲ್ಲಿ ಸಿಪಿಸಿಆರ್ಐ ವಿಜ್ಞಾನಿಗಳ ತಂಡಕ್ಕೆ ಅಡಿಕೆ ಬೆಳೆಗಾರರ ಸಮೂಹ ಮನವಿ ಮಾಡಿರುವ ಹಿನ್ನೆಲೆಯಲ್ಲಿ ವಿಜ್ಞಾನಿಗಳ ತಂಡ ರೋಗ ನಿರೋಧಕ ತಳಿ ಅಭಿವೃದ್ಧಿಯತ್ತ ಗಂಭೀರ ಚಿಂತನೆ ನಡೆಸಿ ಪ್ರಯತ್ನಕ್ಕೆ ಕೈ ಹಾಕಿದೆ.
ಏನಿದು ರೋಗ ನಿರೋಧಕ ತಳಿ?: ಶೇ.90ಕ್ಕಿಂತ ಹೆಚ್ಚು ಹಳದಿ ರೋಗ ಬಾಧಿತವಾಗಿರುವ ಅಡಿಕೆ ತೋಟಗಳಲ್ಲಿ ಹಸಿರಾಗಿರುವ ಮರಗಳನ್ನು ಗುರುತು ಮಾಡಿ, ಅವುಗಳಲ್ಲಿ ರೋಗಾಣು ಇಲ್ಲ ಎಂಬುದನ್ನು ಮೊದಲು ಖಚಿತಪಡಿಸಿ ರೋಗ ನಿರೋಧಕ ತಳಿ ಅಭಿವೃದ್ಧಿಪಡಿಸಬಹುದಾಗಿದೆ. ಅಂಗಾಂಶ ಕೃಷಿ ಮೂಲಕ ತಳಿ ಅಭಿವೃದ್ಧಿ ಅಥವಾ ರೋಗ ಇಲ್ಲದೇ ಇರುವ ಮರಗಳನ್ನು ಪರಾಗಸ್ಪರ್ಶ ಮಾಡಿ ಸಸ್ಯಾಭಿವೃದ್ಧಿ ಮಾಡಬಹುದು. ಈಗಾಗಲೇ ಕೆಲವು ಕೃಷಿಕರು ಈ ನಿಟ್ಟಿನಲ್ಲಿ ಯೋಜನೆ ಮಾಡಿ ಪ್ರಸ್ತಾವನೆ ಸಲ್ಲಿಸಿದ್ದಾರೆ. ಈ ನಿಟ್ಟಿನಲ್ಲಿ ವಿಜ್ಞಾನಿಗಳು ಚಿಂತನೆ ನಡೆಸಿದ್ದಾರೆ.
ಹಳದಿ ರೋಗ ಬಂದ ಮರಗಳು ಸಾಮಾನ್ಯವಾಗಿ ಕಣ್ಣಿಗೆ ಕಾಣಿಸುತ್ತದೆ. ಆದರೆ ಹಸಿರು ಇರುವ ಮರಗಳಲ್ಲೂ ರೋಗಾಣು ಇಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು. ಅದಕ್ಕಾಗಿ ತಪಾಸಣೆ ಲ್ಯಾಬ್ ತೆರೆಯುವುದು ಅತೀ ಅಗತ್ಯ. ಇನ್ನು ಪರಾಗಸ್ಪರ್ಶ ಕ್ರಿಯೆ ಜಾಗರೂಕತೆ, ನೈಪುಣ್ಯತೆಯಿಂದ ಮಾಡಿಸಬೇಕು. ಸ್ಥಳೀಯವಾಗಿ ಮರ ಏರುವವರಿಗೆ ಈ ಬಗ್ಗೆ ತರಬೇತಿ ನೀಡಿ ಪ್ರಕ್ರಿಯೆ ಮಾಡಿಸಬೇಕು. ಈ ನಿಟ್ಟಿನಲ್ಲಿ ವಿಜ್ಞಾನಿಗಳ ತಂಡ ಪ್ರಯತ್ನ ನಡೆಸುತ್ತಿದೆ.
'ಅಡಿಕೆಗೆ ಬಾಧಿಸಿರುವ ಹಳದಿ ರೋಗ ನಿರ್ಮೂಲನೆ ನಿಟ್ಟಿನಲ್ಲಿ ಅನೇಕ ಸಂಶೋಧನೆಗಳು ನಡೆಯುತ್ತಿವೆ. ಈ ನಡುವೆ ರೋಗ ನಿರೋಧಕ ತಳಿ ಅಭಿವೃದ್ಧಿಗೆ ಅಡಿಕೆ ಬೆಳೆಗಾರರಿಂದ ಪ್ರಸ್ತಾವನೆ ಬಂದಿದ್ದು, ಈ ನಿಟ್ಟಿನಲ್ಲಿ ವಿಶೇಷ ಗಮನ ಹರಿಸಿ ತಳಿ ಅಭಿವೃದ್ಧಿಯತ್ತ ಚಿಂತಿಸುತ್ತಿದ್ದೇವೆ. ಇದಕ್ಕಾಗಿ ಶೇ.90ಕ್ಕಿಂತ ಹೆಚ್ಚು ಹಳದಿ ರೋಗ ಬಾಧಿತವಾಗಿರುವ ತೋಟಗಳಲ್ಲಿ ರೋಗಕ್ಕೆ ತುತ್ತಾಗದ ಮರಗಳನ್ನು ಗುರುತಿಸಿ ಅವುಗಳ ಮೂಲಕ ಅಂಗಾಂಶ ಕೃಷಿ ಮೂಲಕ ತಳಿ ಅಭಿವೃದ್ಧಿ ಅಥವಾ ಪರಾಗಸ್ಪರ್ಶ ಮಾಡಿ ಸಸ್ಯಾಭಿವೃದ್ಧಿ ಮಾಡುವ ನಿಟ್ಟಿನಲ್ಲಿ ಪ್ರಯತ್ನ ನಡೆಸಲಿದ್ದೇವೆ' ಎಂದು ವಿಟ್ಲದ ಸಿಪಿಸಿಆರ್ಐ ಪ್ರಾದೇಶಿಕ ಕೇಂದ್ರದ ಬೆಳೆ ಉತ್ಪಾದನಾ ವಿಭಾಗದ ವಿಜ್ಞಾನಿ ಡಾ. ಭವಿಷ್ಯ ಹೇಳಿದ್ದಾರೆ.
ಮಂಗಳೂರು: ದಕ್ಷಿಣ ಕನ್ನಡ ಹಾಗೂ ಮಲೆನಾಡು ಭಾಗದ ಅಡಿಕೆ ತೋಟಗಳಲ್ಲಿಕಂಡು ಬಂದಿರುವ ಹಳದಿ ರೋಗ ಬಾಧೆ ವರ್ಷದಿಂದ ವರ್ಷಕ್ಕೆ ವಿಸ್ತರಿಸುತ್ತಾ ಹೋಗುತ್ತಿದ್ದಂತೆ ಇದಕ್ಕೊಂದು ಪರಿಹಾರ ಕಂಡುಕೊಳ್ಳುವ ಬಗ್ಗೆ ಸರಕಾರ ಹಾಗೂ ಕೃಷಿ ವಿಜ್ಞಾನಿಗಳ ಮೇಲೆ ಒತ್ತಡ ಬರತೊಡಗಿದೆ. ಈ ಹಿನ್ನೆಲೆಯಲ್ಲಿವಿಜ್ಞಾನಿಗಳ ತಂಡ ಸತತ ಅಧ್ಯಯನ ನಡೆಸುತ್ತಿದ್ದು, ರೋಗ ನಿರೋಧಕ ತಳಿ ಅಭಿವೃದ್ಧಿಪಡಿಸುವತ್ತ ಚಿತ್ತ ಹರಿಸಿದ್ದಾರೆ.
ರೋಗ ಬಾಧಿತ ಕೆಲವು ಸಸ್ಯ ವರ್ಗಗಳಿಗೆ, ತರಕಾರಿ ಗಿಡಗಳಲ್ಲಿ ರೋಗ ನಿರೋಧಕ ತಳಿ ಅಭಿವೃದ್ಧಿಪಡಿಸಿ ಯಶಸ್ವಿಯಾದ ಉದಾಹರಣೆಗಳು ಇವೆ. ಇದೇ ಮಾದರಿಯನ್ನು ಅಡಿಕೆ ಕೃಷಿಯಲ್ಲೂ ಯಾಕೆ ಬಳಕೆ ಮಾಡಬಾರದು ಎಂಬ ಬೇಡಿಕೆ ಅಡಿಕೆ ಕೃಷಿಕರದ್ದು. ಈ ಹಿನ್ನೆಲೆಯಲ್ಲಿ ಸಿಪಿಸಿಆರ್ಐ ವಿಜ್ಞಾನಿಗಳ ತಂಡಕ್ಕೆ ಅಡಿಕೆ ಬೆಳೆಗಾರರ ಸಮೂಹ ಮನವಿ ಮಾಡಿರುವ ಹಿನ್ನೆಲೆಯಲ್ಲಿ ವಿಜ್ಞಾನಿಗಳ ತಂಡ ರೋಗ ನಿರೋಧಕ ತಳಿ ಅಭಿವೃದ್ಧಿಯತ್ತ ಗಂಭೀರ ಚಿಂತನೆ ನಡೆಸಿ ಪ್ರಯತ್ನಕ್ಕೆ ಕೈ ಹಾಕಿದೆ.
ಏನಿದು ರೋಗ ನಿರೋಧಕ ತಳಿ?: ಶೇ.90ಕ್ಕಿಂತ ಹೆಚ್ಚು ಹಳದಿ ರೋಗ ಬಾಧಿತವಾಗಿರುವ ಅಡಿಕೆ ತೋಟಗಳಲ್ಲಿ ಹಸಿರಾಗಿರುವ ಮರಗಳನ್ನು ಗುರುತು ಮಾಡಿ, ಅವುಗಳಲ್ಲಿ ರೋಗಾಣು ಇಲ್ಲ ಎಂಬುದನ್ನು ಮೊದಲು ಖಚಿತಪಡಿಸಿ ರೋಗ ನಿರೋಧಕ ತಳಿ ಅಭಿವೃದ್ಧಿಪಡಿಸಬಹುದಾಗಿದೆ. ಅಂಗಾಂಶ ಕೃಷಿ ಮೂಲಕ ತಳಿ ಅಭಿವೃದ್ಧಿ ಅಥವಾ ರೋಗ ಇಲ್ಲದೇ ಇರುವ ಮರಗಳನ್ನು ಪರಾಗಸ್ಪರ್ಶ ಮಾಡಿ ಸಸ್ಯಾಭಿವೃದ್ಧಿ ಮಾಡಬಹುದು. ಈಗಾಗಲೇ ಕೆಲವು ಕೃಷಿಕರು ಈ ನಿಟ್ಟಿನಲ್ಲಿ ಯೋಜನೆ ಮಾಡಿ ಪ್ರಸ್ತಾವನೆ ಸಲ್ಲಿಸಿದ್ದಾರೆ. ಈ ನಿಟ್ಟಿನಲ್ಲಿ ವಿಜ್ಞಾನಿಗಳು ಚಿಂತನೆ ನಡೆಸಿದ್ದಾರೆ.
ಜಗತ್ತಿನಾದ್ಯಂತ ಬೇರೆ ಬೇರೆ ಸಸ್ಯಗಳಲ್ಲಿ ಕಂಡು ಬಂದಿರುವ ರೋಗ ಬಾಧೆಗಳಿಗೆ ರೋಗ ನಿರೋಧಕ ತಳಿ ಅಭಿವೃದ್ಧಿ ಮಾಡುವ ಮೂಲಕ ಪರಿಹಾರ ಕಂಡುಕೊಳ್ಳಲಾಗಿದೆ. ಈ ನಿಟ್ಟಿನಲ್ಲಿ ಅಡಿಕೆ ಬೆಳೆಯಲ್ಲಿ ಕಂಡು ಬಂದಿರುವ ಹಳದಿ ರೋಗ ಬಾಧೆಗೆ ಯಾಕೆ ಈ ಪ್ರಯತ್ನ ಮಾಡಬಾರದು ಎಂದು ಚಿಂತಿಸಿ ಕೃಷಿ ವಿಜ್ಞಾನಿಗಳಿಗೆ ಈ ಬಗ್ಗೆ ಪ್ರಸ್ತಾವನೆ ಸಲ್ಲಿಸಿದ್ದೇವೆ. ಕೃಷಿ ವಿಜ್ಞಾನಿಗಳು ಈ ನಿಟ್ಟಿನಲ್ಲಿ ಪ್ರಯತ್ನ ನಡೆಸುತ್ತಿದ್ದಾರೆ.
ಹಳದಿ ರೋಗ ಬಂದ ಮರಗಳು ಸಾಮಾನ್ಯವಾಗಿ ಕಣ್ಣಿಗೆ ಕಾಣಿಸುತ್ತದೆ. ಆದರೆ ಹಸಿರು ಇರುವ ಮರಗಳಲ್ಲೂ ರೋಗಾಣು ಇಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು. ಅದಕ್ಕಾಗಿ ತಪಾಸಣೆ ಲ್ಯಾಬ್ ತೆರೆಯುವುದು ಅತೀ ಅಗತ್ಯ. ಇನ್ನು ಪರಾಗಸ್ಪರ್ಶ ಕ್ರಿಯೆ ಜಾಗರೂಕತೆ, ನೈಪುಣ್ಯತೆಯಿಂದ ಮಾಡಿಸಬೇಕು. ಸ್ಥಳೀಯವಾಗಿ ಮರ ಏರುವವರಿಗೆ ಈ ಬಗ್ಗೆ ತರಬೇತಿ ನೀಡಿ ಪ್ರಕ್ರಿಯೆ ಮಾಡಿಸಬೇಕು. ಈ ನಿಟ್ಟಿನಲ್ಲಿ ವಿಜ್ಞಾನಿಗಳ ತಂಡ ಪ್ರಯತ್ನ ನಡೆಸುತ್ತಿದೆ.
'ಅಡಿಕೆಗೆ ಬಾಧಿಸಿರುವ ಹಳದಿ ರೋಗ ನಿರ್ಮೂಲನೆ ನಿಟ್ಟಿನಲ್ಲಿ ಅನೇಕ ಸಂಶೋಧನೆಗಳು ನಡೆಯುತ್ತಿವೆ. ಈ ನಡುವೆ ರೋಗ ನಿರೋಧಕ ತಳಿ ಅಭಿವೃದ್ಧಿಗೆ ಅಡಿಕೆ ಬೆಳೆಗಾರರಿಂದ ಪ್ರಸ್ತಾವನೆ ಬಂದಿದ್ದು, ಈ ನಿಟ್ಟಿನಲ್ಲಿ ವಿಶೇಷ ಗಮನ ಹರಿಸಿ ತಳಿ ಅಭಿವೃದ್ಧಿಯತ್ತ ಚಿಂತಿಸುತ್ತಿದ್ದೇವೆ. ಇದಕ್ಕಾಗಿ ಶೇ.90ಕ್ಕಿಂತ ಹೆಚ್ಚು ಹಳದಿ ರೋಗ ಬಾಧಿತವಾಗಿರುವ ತೋಟಗಳಲ್ಲಿ ರೋಗಕ್ಕೆ ತುತ್ತಾಗದ ಮರಗಳನ್ನು ಗುರುತಿಸಿ ಅವುಗಳ ಮೂಲಕ ಅಂಗಾಂಶ ಕೃಷಿ ಮೂಲಕ ತಳಿ ಅಭಿವೃದ್ಧಿ ಅಥವಾ ಪರಾಗಸ್ಪರ್ಶ ಮಾಡಿ ಸಸ್ಯಾಭಿವೃದ್ಧಿ ಮಾಡುವ ನಿಟ್ಟಿನಲ್ಲಿ ಪ್ರಯತ್ನ ನಡೆಸಲಿದ್ದೇವೆ' ಎಂದು ವಿಟ್ಲದ ಸಿಪಿಸಿಆರ್ಐ ಪ್ರಾದೇಶಿಕ ಕೇಂದ್ರದ ಬೆಳೆ ಉತ್ಪಾದನಾ ವಿಭಾಗದ ವಿಜ್ಞಾನಿ ಡಾ. ಭವಿಷ್ಯ ಹೇಳಿದ್ದಾರೆ.