ಆ್ಯಪ್ನಗರ

ಉಳ್ಳಾಲದಲ್ಲಿ ವಿದ್ಯಾರ್ಥಿನಿಯರಿಗೆ ಕಿರುಕುಳ: ರೆಡ್ ಹ್ಯಾಂಡಾಗಿ ಸಿಕ್ಕಿ ಬಿದ್ದವನಿಗೆ ಸ್ಥಳೀಯರಿಂದ ಗೂಸಾ!

ಉಳ್ಳಾಲದ ಬಂಡಿಕೊಟ್ಯ ಬಳಿ ಕಾಲೇಜು ಮತ್ತು ಹೈಸ್ಕೂಲಿಗೆ ತೆರಳುತ್ತಿದ್ದ ಹುಡುಗಿಯರನ್ನು ಟಾರ್ಗೆಟ್ ಮಾಡಿ ಚುಡಾಯಿಸುತ್ತಾ ಕಿರುಕುಳ ನೀಡುತ್ತಿದ್ದ ಯುವಕನೋರ್ವನ್ನು ಸ್ಥಳೀಯರು ಹಿಡಿದು ಧರ್ಮದೇಟು ನೀಡಿ ಪೊಲೀಸರಿಗೆ ಒಪ್ಪಿಸಿದ ಘಟನೆ ನಡೆದಿದೆ.

Vijaya Karnataka Web 15 Jan 2021, 11:50 am
ತೊಕ್ಕೊಟ್ಟು: ಹೈಸ್ಕೂಲ್, ಕಾಲೇಜು ತೆರಳುತ್ತಿದ್ದ ವಿದ್ಯಾರ್ಥಿನಿಯರನ್ನು ಚುಡಾಯಿಸುತ್ತಾ ಕಿರುಕುಳ ನೀಡುತ್ತಾ ವಿಕೃತ ಸಂತಸ ಪಡೆಯುತ್ತಿದ್ದ ಅಪ್ರಾಪ್ತನನ್ನು ಸಾರ್ವಜನಿಕರು ಹಿಡಿದು ಉಳ್ಳಾಲ ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ.
Vijaya Karnataka Web ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ


ಉಳ್ಳಾಲದ ಬಂಡಿಕೊಟ್ಯ ಬಳಿ ಕಾಲೇಜು ಮತ್ತು ಹೈಸ್ಕೂಲಿಗೆ ತೆರಳುತ್ತಿದ್ದ ಹುಡುಗಿಯರನ್ನು ಟಾರ್ಗೆಟ್ ಮಾಡಿ ಯುವಕ ಚುಡಾಯಿಸುತ್ತಾ ಕಿರುಕುಳ ನೀಡುತ್ತಿದ್ದ ಎನ್ನಲಾಗಿದ್ದು, ಆ ಬಗ್ಗೆ ಯುವಕನನ್ನು ವಿಚಾರಿಸಲು ಸ್ಥಳೀಯರು ಹಲವು ದಿನಗಳಿಂದ ಕಾದು ಕುಳಿತಿದ್ದು ಶನಿವಾರ ಯುವತಿಯೊಬ್ಬಳಿಗೆ ಚುಡಾಯಿಸುವ ಯತ್ನದಲ್ಲಿ ತೊಕ್ಕೊಟ್ಟು ಅಳೇಕಲದ ಅಲ್ಪಸಂಖ್ಯಾತ ಸಮುದಾಯದ 16 ವರ್ಷದ ಹುಡುಗ ಸ್ಥಳೀಯರಿಗೆ ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದಿದ್ದಾನೆ.

ಕಳೆದ ಕೆಲವು ದಿನಗಳಿಂದ ಈತ ಕಾಲೇಜು ಮತ್ತು ಹೈಸ್ಕೂಲ್ ಹೋಗುತ್ತಿದ್ದ ಹುಡುಗಿಯರನ್ನು ತನ್ನ ಸ್ಕೂಟರಿನಲ್ಲಿ ಹಿಂಬಾಲಿಸುತ್ತಾ ಅವರ ದೇಹದ ಭಾಗವನ್ನು ಮುಟ್ಟುತ್ತಾ ವಿಕೃತ ಸಂತೋಷ ಪಡುತ್ತಿದ್ದ. ಆತನ ಕಿರುಕುಳಕ್ಕೆ ಬೇಸತ್ತು ಹುಡುಗಿಯರು ಮನೆ ಮಂದಿಯಲ್ಲಿ ತಿಳಿಸಿದ್ದು ಈ ಬಗ್ಗೆ ಸ್ಥಳೀಯರು ಉಳ್ಳಾಲ ಠಾಣೆಗೆ ಮೌಖಿಕ ದೂರನ್ನು ನೀಡಿದ್ದರೂ ಯುವಕನನ್ನು ಹಿಡಿದು ಪೊಲೀಸರು ವಿಚಾರಣೆ ನಡೆಸದ ಭಯದಲ್ಲಿ ಕೆಲವು ಹುಡುಗಿಯರು ಹೆದರಿ ಆಟೋ ರಿಕ್ಷಾದಲ್ಲಿ ಸಂಚರಿಸುತ್ತಿದ್ದರು ಎನ್ನಲಾಗಿದೆ.
ಅಕ್ರಮ ಗೋ ಸಾಗಣೆದಾರರ ಮೇಲೆ ಹಲ್ಲೆ, ಆರೋಪ: ಶೃಂಗೇರಿಯಲ್ಲಿ ಬಜರಂಗದಳ ಕಾರ್ಯಕರ್ತರ ಬಂಧನ

ಕೆಲವು ಹುಡುಗಿಯರು ಹುಡುಗನಿಗೆ ಚಪ್ಪಲಿ ತೋರಿಸಿದ್ದರೂ, ಯದ್ವಾತದ್ವಾ ಬೈದಿದ್ದರೂ ಅಪ್ರಾಪ್ತ ಯುವಕ ತನ್ನ ಚಾಳಿಯನ್ನು ಬಿಟ್ಟಿರಲಿಲ್ಲ. ಶುಕ್ರವಾರ ಬೆಳಗ್ಗೆ ಯುವಕ ಬಂಡಿಕೊಟ್ಯದ ಅಯ್ಯಪ್ಪ ಮಂದಿರದ ಬಳಿ ತನ್ನ ಸ್ಕೂಟರ್ ನಲ್ಲಿ ಹುಡುಗಿಯೊಬ್ಬಳನ್ನು ಚುಡಾಯಿಸುವ ಯತ್ನದಲ್ಲಿಯೇ ಸ್ಥಳೀಯರಿಗೆ ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದಿದ್ದಾನೆ ಎನ್ನಲಾಗಿದ್ದು, ಧರ್ಮದೇಟು ನೀಡಿ ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ. ಆರೋಪಿಯನ್ನು ಪೊಲೀಸರು ವಿಚಾರಿಸಿದಾಗ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾನೆ ಎಂದು ತಿಳಿದುಬಂದಿದೆ.
ಚಿನ್ನ ಖರೀದಿ ನೆಪದಲ್ಲಿ ಕಳ್ಳಿಯ ಕೈಚಳಕ..! ಸಿಸಿಟಿವಿಯಲ್ಲಿ ಸೆರೆಯಾಯ್ತು ಆಭರಣ ಕಳವು..!

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ