ಆ್ಯಪ್ನಗರ

Dakshina Kannada Crime News: ದಕ್ಷಿಣ ಕನ್ನಡದ ಕಡಬದಲ್ಲಿ ಕ್ಷುಲ್ಲಕ ಕಾರಣಕ್ಕೆ ಚೂರಿ ಇರಿತ: ಆರೋಪಿ ಬಂಧನ

Dakshina Kannada Crime News: 6 ತಿಂಗಳ ಹಿಂದೆ ಉಪ್ಪಿನಂಗಡಿಯಲ್ಲಿ ಮೀನು ವ್ಯಾಪಾರಕ್ಕೆ ಸಂಬಂಧಿಸಿದ ಗಲಾಟೆ ಕುರಿತು ನನ್ನ ತಮ್ಮ ಸಿನಾನ್‌ ಬಗ್ಗೆ ನೀನು ಯಾಕೆ ಉಪ್ಪಿನಂಗಡಿ ಪೊಲೀಸರಿಗೆ ಮಾಹಿತಿ ನೀಡಿದ್ದು ಎಂದು ಪ್ರಶ್ನಿಸಿ ಅವಾಚ್ಯ ಶಬ್ದಗಳಿಂದ ಬೈದು ಗಲಾಟೆ ಮಾಡಿ ನಂತರ ಅಂಗಡಿಯಲ್ಲೇ ಇದ್ದ ಚಾಕುವಿನಿಂದ ಮಹಮ್ಮದ್‌ ನವಾಜ್‌ನ ಹೊಟ್ಟೆಗೆ ಇರಿದು ಗಂಭೀರ ಗಾಯಗೊಳಿಸಲಾಗಿದೆ. ಬಳಿಕ ಗಾಯಾಳುವನ್ನು ಹಕೀಲ್‌ ಮತ್ತು ಆಸೀಫ್‌ ಎಂಬುವರು ಪುತ್ತೂರು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ ಎಂದು ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ.

Edited byದಿಲೀಪ್ ಡಿ. ಆರ್. | Vijaya Karnataka 16 Aug 2022, 4:40 pm

ಹೈಲೈಟ್ಸ್‌:

  • ಆರೋಪಿ ಬಗ್ಗೆ ಬಾಯಿ ಬಿಟ್ಟ ವಿಚಾರವನ್ನು ನೆಪವಾಗಿಟ್ಟುಕೊಂಡು ಚಾಕು ಇರಿತ
  • ಫುಡ್‌ ಪ್ರಾಡಕ್ಟ್ ಅಂಗಡಿಯೊಂದರ ಬಳಿ ನಡೆದಿದ್ದ ಘಟನೆ
  • ಮಂಗಳವಾರ ಆರೋಪಿಯನ್ನು ಬಂಧಿಸಿರುವ ಪೊಲೀಸರು
ಹೈಲೈಟ್ಸ್‌ ಮಾತ್ರವೇ ಓದಲು ಆ್ಯಪ್‌ ಡೌನ್‌ಲೋಡ್‌ ಮಾಡಿ
Vijaya Karnataka Web stab
ದಕ್ಷಿಣ ಕನ್ನಡದ ಕಡಬದಲ್ಲಿ ಕ್ಷುಲ್ಲಕ ಕಾರಣಕ್ಕೆ ಚೂರಿ ಇರಿತ: ಆರೋಪಿ ಬಂಧನ
ಕಡಬ (ದಕ್ಷಿಣ ಕನ್ನಡ): ಆರು ತಿಂಗಳ ಹಿಂದೆ ಉಪ್ಪಿನಂಗಡಿಯಲ್ಲಿ ಹಸಿ ಮೀನು ವ್ಯಾಪಾರಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಆರೋಪಿ ಬಗ್ಗೆ ಬಾಯಿ ಬಿಟ್ಟ ವಿಚಾರವನ್ನು ನೆಪವಾಗಿಟ್ಟುಕೊಂಡು ಕ್ಷುಲ್ಲಕ ಕಾರಣವೊಡ್ಡಿ ಯುವಕನೊಬ್ಬನಿಗೆ ಚಾಕು ಇರಿದು ಗಂಭೀರ ಗಾಯಗೊಳಿಸಿದ ಘಟನೆ, ಸೋಮವಾರ ಸಂಜೆ ಕೊೖಲ ಗ್ರಾಮದ ಏಂತಾರು ಎಂಬಲ್ಲಿ ಫುಡ್‌ ಪ್ರಾಡಕ್ಟ್ ಅಂಗಡಿಯೊಂದರ ಬಳಿ ನಡೆದಿದ್ದು, ಮಂಗಳವಾರ ಆರೋಪಿಯನ್ನು ಬಂಧಿಸಲಾಗಿದೆ.

ಕೊೖಲ ಗ್ರಾಮದ ಏಂತಾರು ಮನೆ ಇಬ್ರಾಹಿಂ ಎಂಬುವರ ಪುತ್ರ ಮಹಮ್ಮದ್‌ ನವಾಜ್‌ (29) ಗಂಭೀರ ಗಾಯಗೊಂಡವರು. ಈ ಸಂಬಂಧ ಆರೋಪಿ ಆದಂ ಎಂಬುವರ ಪುತ್ರ ನೌಫಾಲ್‌ (29) ನನ್ನು ಪೊಲೀಸರು ಬಂಧಿಸಿದ್ದಾರೆ.

ಆರೋಪಿ ನೌಫಾಲ್‌


ಮಳೆ ಅಬ್ಬರದಲ್ಲಿ ಕೋವಿಡ್‌ ನಿಯಂತ್ರಣ ಸವಾಲು; ದ.ಕ ಜಿಲ್ಲೆಯ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಅಧಿಕಾರಿಗಳ ಠಿಕಾಣಿ!
ಮಹಮ್ಮದ್‌ ನವಾಜ್‌ ಸೋಮವಾರ ಸಂಜೆ ನೌಫಾಲ್‌ನ ಅಂಗಡಿಗೆ ಮೊಬೈಲ್‌ ರೀಚಾರ್ಜ್ ಮಾಡಲು ಹೋದಾಗ ಅಲ್ಲಿ ರೀಚಾರ್ಜ್ ಇಲ್ಲದೆ ಬಳಿಕ ಆತೂರಿನ ಮಸೀದಿ ಬಳಿಯ ಅಂಗಡಿಯಲ್ಲಿ ರೀಚಾರ್ಜ್ ಮಾಡಿಕೊಂಡು ಮನೆಗೆ ತೆರಳಿದ ಬಳಿಕ ಈತನ ಅಣ್ಣ ರಹೀಂ ಈತನಿಗೆ ಫೋನ್‌ ಕರೆ ಮಾಡಿ ನೀನು ಯಾಕೆ ನೌಫಾಲ್‌ ಅಂಗಡಿಗೆ ರೀಜಾರ್ಜ್ ಮಾಡಿಸಲು ಹೋಗಿದ್ದು, ಆತ ನನಗೆ ಕರೆ ಮಾಡಿ ನಿನ್ನ ತಮ್ಮ ನನ್ನ ಅಂಗಡಿಗೆ ಯಾಕೆ ಬರೋದು ಎಂದು ನನಗೆ ಅವಾಚ್ಯವಾಗಿ ಬೈದಿರುವುದಾಗಿ ತಿಳಿಸಿದ್ದಾನೆ. ಇದೇ ವಿಚಾರವಾಗಿ ನನ್ನ ಅಣ್ಣನಿಗೆ ಯಾಕೆ ಫೋನ್‌ ಮಾಡಿ ಬೈದಿದ್ದು ಎಂದು ನೌಫಾಲ್‌ಗೆ ಮಹಮ್ಮದ್‌ ನವಾಜ್‌ ಪ್ರಶ್ನಿಸಿದಾಗ ಆತ ನೀನು ಅಂಗಡಿ ಹತ್ತಿರ ಬಾ ಮಾತನಾಡಲು ಇದೆ ಎಂದು ಕರೆಸಿಕೊಂಡು 6 ತಿಂಗಳ ಹಿಂದೆ ಉಪ್ಪಿನಂಗಡಿಯಲ್ಲಿ ಮೀನು ವ್ಯಾಪಾರಕ್ಕೆ ಸಂಬಂಧಿಸಿದ ಗಲಾಟೆ ಕುರಿತು ನನ್ನ ತಮ್ಮ ಸಿನಾನ್‌ ಬಗ್ಗೆ ನೀನು ಯಾಕೆ ಉಪ್ಪಿನಂಗಡಿ ಪೊಲೀಸರಿಗೆ ಮಾಹಿತಿ ನೀಡಿದ್ದು ಎಂದು ಪ್ರಶ್ನಿಸಿ ಅವಾಚ್ಯ ಶಬ್ದಗಳಿಂದ ಬೈದು ಗಲಾಟೆ ಮಾಡಿ ನಂತರ ಅಂಗಡಿಯಲ್ಲೇ ಇದ್ದ ಚಾಕುವಿನಿಂದ ಮಹಮ್ಮದ್‌ ನವಾಜ್‌ನ ಹೊಟ್ಟೆಗೆ ಇರಿದು ಗಂಭೀರ ಗಾಯಗೊಳಿಸಲಾಗಿದೆ.

ಬಂಟ್ವಾಳ ರೈಲ್ವೆ ಸ್ಟೇಷನ್‌, ಮಳೆ ಬಂದರೆ ಫುಲ್‌ ಟೆನ್ಶನ್‌..! ಹೈಟೆಕ್‌ನಂತೆ ಕಂಡರೂ ಒಳಹೊಕ್ಕರೆ ಬಂಡವಾಳ ಬಯಲು
ಬಳಿಕ ಗಾಯಾಳುವನ್ನು ಹಕೀಲ್‌ ಮತ್ತು ಆಸೀಫ್‌ ಎಂಬುವರು ಪುತ್ತೂರು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ ಎಂದು ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿ ನೌಫಾಲ್‌ನನ್ನು ಬಂಧಿಸಿದ್ದಾರೆ.
ಲೇಖಕರ ಬಗ್ಗೆ
ದಿಲೀಪ್ ಡಿ. ಆರ್.
ವಿಜಯ ಕರ್ನಾಟಕದ ಡಿಜಿಟಲ್ ಪತ್ರಕರ್ತನಾಗಿ 2019ರ ಆಗಸ್ಟ್‌ನಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡ ಟಿವಿ ನ್ಯೂಸ್ ವಾಹಿನಿಗಳಲ್ಲಿ 14 ವರ್ಷಕ್ಕೂ ಹೆಚ್ಚು ಕಾಲ ವಿವಿಧ ಹುದ್ದೆಗಳಲ್ಲಿ ಕಾರ್ಯ ನಿರ್ವಹಿಸಿದ ಅನುಭವ ಹೊಂದಿದ್ದಾರೆ. ರಾಜಕೀಯ, ವಿಜ್ಞಾನ-ತಂತ್ರಜ್ಞಾನ ರಂಗಗಳು ಇವರ ಆಸಕ್ತಿಯ ವಿಷಯಗಳು. ಇದಲ್ಲದೆ ಹಾಸ್ಯ, ವಿಡಂಬನಾತ್ಮಕ ಬರಹ, ವ್ಯಕ್ತಿ ಚಿತ್ರ, ಜೀವ ಪರ ನಿಲುವಿನ ಸಂವೇದನಾತ್ಮಕ ಲೇಖನಗಳನ್ನು ಹೆಚ್ಚಾಗಿ ಬರೆಯುತ್ತಾರೆ. ಕಾಡು, ಹಸಿರು, ಬೆಟ್ಟ ಗುಡ್ಡಗಳ ಚಾರಣ ಮಾಡುವುದು ಇವರ ಹವ್ಯಾಸ.... ಇನ್ನಷ್ಟು ಓದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ