ಜುಬ್ಬಿಯಾಕಗೆ ವಿಮಾನ ಪ್ರಯಾಣ ಯೋಗ!
ಫರಂಗಿಪೇಟೆಯ ಜುಬ್ಬಿಯಾಕ ಅಂದರೆ ಗೊತ್ತಿಲ್ಲದ ಜನರು ಬಹಳ ಕಡಿಮೆ. ಸ್ವಂತ ವಾಹನ ಇಲ್ಲದಿದ್ದರೂ, ಬೇರೆಯವರ ವಾಹನಕ್ಕೆ ಕೈ ತೋರಿಸಿಯೇ ಪ್ರತಿದಿನ ಹತ್ತಾರು ಕಿ.ಮೀ. ಸುತ್ತುವ ಜುಬ್ಬಿಯಾಕ ಭಾನುವಾರ ವಿಮಾನ ಏರಿ ಬೆಂಗಳೂರಿಗೆ ಹೋಗಿದ್ದಾರೆ.
Vijaya Karnataka 28 Jan 2019, 4:36 pm
ಮುಹಮ್ಮದ್ ಆರಿಫ್ ಮಂಗಳೂರು
ಫರಂಗಿಪೇಟೆಯ ಜುಬ್ಬಿಯಾಕ ಅಂದರೆ ಗೊತ್ತಿಲ್ಲದ ಜನರು ಬಹಳ ಕಡಿಮೆ. ಸ್ವಂತ ವಾಹನ ಇಲ್ಲದಿದ್ದರೂ, ಬೇರೆಯವರ ವಾಹನಕ್ಕೆ ಕೈ ತೋರಿಸಿಯೇ ಪ್ರತಿದಿನ ಹತ್ತಾರು ಕಿ.ಮೀ. ಸುತ್ತುವ ಜುಬ್ಬಿಯಾಕ ಭಾನುವಾರ ವಿಮಾನ ಏರಿ ಬೆಂಗಳೂರಿಗೆ ಹೋಗಿದ್ದಾರೆ.
ಜುಬ್ಬಿಯಾಕ ವಿಮಾನ ಏರಿರುವ ಫೋಟೊ ಸಹಿತ ಬೆಂಗಳೂರಿಗೆ ಹೋಗಿರುವ ವಿಚಾರವು ಅವರ ಕುಟುಂಬ, ನೆರೆಹೊರೆ ಸೇರಿದಂತೆ ಊರವರ ಮೊಬೈಲ್ಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯ ವಿಚಾರವಾಗಿ ವೈರಲ್ ಆಗುತ್ತಿದೆ.
ಫರಂಗಿಪೇಟೆಯ ಝುಬೇರ್ ಎಫ್. ಅವರು ಜುಬ್ಬಿಯಾಕ ಎಂದೇ ಪ್ರಸಿದ್ಧರು. ಅವರದ್ದು ತುಂಬು ಕುಟುಂಬ. ಹಿಂದೆ ಅಂಗಡಿ ನಡೆಸುತ್ತಿದ್ದ ಜುಬ್ಬಿಯಾಕ, ಮಕ್ಕಳು, ಮೊಮ್ಮಕ್ಕಳಾದ ಬಳಿಕ ಅದನ್ನೆಲ್ಲ ಬಿಟ್ಟಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ತಮ್ಮ ಎಂದಿನ ಬಿಳಿ ಲುಂಗಿ, ಬಿಳಿ ಅಂಗಿ, ತಲೆಗೊಂದು ರುಮಾಲು ಕಟ್ಟಿ ಬೆಳಗ್ಗೆ ಮನೆಯಿಂದ ಹೊರಟರೆ, ಮತ್ತೆ ಮರಳುತ್ತಿದ್ದುದು ರಾತ್ರಿ 11ರ ನಂತರವೇ.
ಮನೆಯಿಂದ ಹೊರಟು ಹೆದ್ದಾರಿಗೆ ಬಂದರೆ, ಎದುರು ಸಿಗುವ ವಾಹನಕ್ಕೆ ಕೈ ತೋರಿಸುತ್ತಾರೆ. ಇತ್ತ ಬಂದರೆ ಮಂಗಳೂರು. ಅತ್ತ ಹೋದರೆ ಪುತ್ತೂರು, ಸುಳ್ಯ, ಬೆಳ್ತಂಗಡಿ. ಒಬ್ಬರ ಕಾರು, ಬೈಕ್ನಲ್ಲಿ ಅವರು ಹೋಗುವಷ್ಟು ದೂರ ಹೋದರೆ, ಅಲ್ಲಿಂದ ಇಳಿದು ಮತ್ತೆ ಇನ್ನೊಬ್ಬರ ವಾಹನ ಏರುತ್ತಾರೆ. ಹಾಗೆ 3-4 ವಾಹನ ಏರಿ ಮಂಗಳೂರಿಗೆ ಬರುತ್ತಾರೆ. ಮರಳುವಾಗಲೂ 4-5 ವಾಹನ ಮೂಲಕ ಮನೆಗೆ ಸೇರುತ್ತಾರೆ. ಅದು ಯಾರ ವಾಹನವೂ ಆಗುತ್ತದೆ. ರಾತ್ರಿ ಎಷ್ಟೋ ಬಾರಿ ಪೊಲೀಸರು ಮನೆಗೆ ಬಿಟ್ಟದ್ದೂ ಇದೆ.
ಹಾಗೆ ಹೊರಟವರು ಎಲ್ಲಿ ಯಾವುದೇ ಧಾರ್ಮಿಕ, ರಾಜಕೀಯ ಸಭಾ ಕಾರ್ಯಕ್ರಮಗಳಿದ್ದರೂ ಅಲ್ಲಿ ಹಾಜರ್. ಅಷ್ಟೇ ಅಲ್ಲ, ನೇರವಾಗಿ ವೇದಿಕೆ ಏರುವ ಅಭ್ಯಾಸವೂ ಇದೆ. ಮುಸ್ಲಿಂ ಧರ್ಮಗುರುಗಳು ಇದ್ದರೆಂದರೆ ವೇದಿಕೆ ಏರದೆ ಬಿಡುವುದಿಲ್ಲ. ಅವರ ಕೈ ಕುಲುಕದೆ ಕೆಳಗೆ ಇಳಿಯುವುದಿಲ್ಲ. ವೇದಿಕೆಯಲ್ಲಿ ಕುಳಿತುಕೊಂಡದ್ದೂ ಇದೆ.
ಮಂಗಳೂರಿನಲ್ಲಿ ಶನಿವಾರ ನಡೆದ ಸಭಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಅವರು, ಸಚಿವ ಯು.ಟಿ.ಖಾದರ್ ಅವರ ಬಳಿಗೆ ಓಡೋಡಿ ಬಂದು ಕೈ ಹಿಡಿದರು. ಸಚಿವರು ಎಂದಿನಂತೆ, ಕಷ್ಟ ಸುಖ ವಿಚಾರಿಸಿದಾಗ, ನನಗೆ ನಾಳೆ ಬೆಂಗಳೂರಿನ ಮುಸ್ಲಿಂ ಜಮಾತ್ ಸಮಾವೇಶಕ್ಕೆ ಹೋಗಬೇಕು, ಹೇಗಂತ ಗೊತ್ತಾಗುವುದಿಲ್ಲ ಎಂದು ಚಿಂತೆ ತೋಡಿಕೊಂಡರು. ನೀವು ಹೇಗೆ ಕಾರಿನಲ್ಲಿ ಹೋಗುತ್ತೀರಾ ಎಂಬ ಪ್ರಶ್ನೆಯನ್ನೂ ಕೇಳಿಬಿಟ್ಟರು.
ಮಂಗಳೂರಿನಲ್ಲಿ ಬೆಳಗ್ಗೆ ಕಾರ್ಯಕ್ರಮ ಇರುವುದರಿಂದ ಕಾರಿನಲ್ಲಿ ಹೋಗುವುದು ಕಷ್ಟ. ವಿಮಾನದಲ್ಲಾದರೆ ಬರುತ್ತೀರಾ ಎಂದು ಸಚಿವ ಖಾದರ್ ಪ್ರಶ್ನಿಸಿದರು. ನೀವು ಕರೆದುಕೊಂಡು ಹೋದರೆ ಬರುತ್ತೇನೆ ಎಂದು ನಗುತ್ತಾ ಹೇಳಿದರು. ಹಾಗೆ ಭಾನುವಾರ ಬೆಳಗ್ಗೆ ಸಚಿವರು ಭಾಗವಹಿಸಿದ್ದ ಕಾರ್ಯಕ್ರಮದಲ್ಲಿ ಜುಬ್ಬಿಯಾಕ ಕೂಡ ಹಾಜರ್. ಕಾರ್ಯಕ್ರಮ ಮುಗಿದ ಬಳಿಕ ಸಚಿವರ ಕಾರನ್ನೂ ಏರಿದರು. 3-4 ಕಾರ್ಯಕ್ರಮಗಳಲ್ಲಿ ಭಾಗವಹಿಸಿದ ಬಳಿಕ, ಸಚಿವರು ಅವರನ್ನು ವಿಮಾನ ಮೂಲಕ ಬೆಂಗಳೂರಿಗೆ ಕರೆದುಕೊಂಡು ಹೋಗಿದ್ದಾರೆ. ಸಮಾವೇಶ ಮುಗಿಸಿ, ರಾತ್ರಿ ಬೆಂಗಳೂರಿನಲ್ಲೇ ಉಳಿದು, ಸೋಮವಾರ ಮರಳಲಿದ್ದಾರೆ.
ಫರಂಗಿಪೇಟೆಯ ಜುಬ್ಬಿಯಾಕ ಅಂದರೆ ಗೊತ್ತಿಲ್ಲದ ಜನರು ಬಹಳ ಕಡಿಮೆ. ಸ್ವಂತ ವಾಹನ ಇಲ್ಲದಿದ್ದರೂ, ಬೇರೆಯವರ ವಾಹನಕ್ಕೆ ಕೈ ತೋರಿಸಿಯೇ ಪ್ರತಿದಿನ ಹತ್ತಾರು ಕಿ.ಮೀ. ಸುತ್ತುವ ಜುಬ್ಬಿಯಾಕ ಭಾನುವಾರ ವಿಮಾನ ಏರಿ ಬೆಂಗಳೂರಿಗೆ ಹೋಗಿದ್ದಾರೆ.
ಜುಬ್ಬಿಯಾಕ ವಿಮಾನ ಏರಿರುವ ಫೋಟೊ ಸಹಿತ ಬೆಂಗಳೂರಿಗೆ ಹೋಗಿರುವ ವಿಚಾರವು ಅವರ ಕುಟುಂಬ, ನೆರೆಹೊರೆ ಸೇರಿದಂತೆ ಊರವರ ಮೊಬೈಲ್ಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯ ವಿಚಾರವಾಗಿ ವೈರಲ್ ಆಗುತ್ತಿದೆ.
ಫರಂಗಿಪೇಟೆಯ ಝುಬೇರ್ ಎಫ್. ಅವರು ಜುಬ್ಬಿಯಾಕ ಎಂದೇ ಪ್ರಸಿದ್ಧರು. ಅವರದ್ದು ತುಂಬು ಕುಟುಂಬ. ಹಿಂದೆ ಅಂಗಡಿ ನಡೆಸುತ್ತಿದ್ದ ಜುಬ್ಬಿಯಾಕ, ಮಕ್ಕಳು, ಮೊಮ್ಮಕ್ಕಳಾದ ಬಳಿಕ ಅದನ್ನೆಲ್ಲ ಬಿಟ್ಟಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ತಮ್ಮ ಎಂದಿನ ಬಿಳಿ ಲುಂಗಿ, ಬಿಳಿ ಅಂಗಿ, ತಲೆಗೊಂದು ರುಮಾಲು ಕಟ್ಟಿ ಬೆಳಗ್ಗೆ ಮನೆಯಿಂದ ಹೊರಟರೆ, ಮತ್ತೆ ಮರಳುತ್ತಿದ್ದುದು ರಾತ್ರಿ 11ರ ನಂತರವೇ.
ಮನೆಯಿಂದ ಹೊರಟು ಹೆದ್ದಾರಿಗೆ ಬಂದರೆ, ಎದುರು ಸಿಗುವ ವಾಹನಕ್ಕೆ ಕೈ ತೋರಿಸುತ್ತಾರೆ. ಇತ್ತ ಬಂದರೆ ಮಂಗಳೂರು. ಅತ್ತ ಹೋದರೆ ಪುತ್ತೂರು, ಸುಳ್ಯ, ಬೆಳ್ತಂಗಡಿ. ಒಬ್ಬರ ಕಾರು, ಬೈಕ್ನಲ್ಲಿ ಅವರು ಹೋಗುವಷ್ಟು ದೂರ ಹೋದರೆ, ಅಲ್ಲಿಂದ ಇಳಿದು ಮತ್ತೆ ಇನ್ನೊಬ್ಬರ ವಾಹನ ಏರುತ್ತಾರೆ. ಹಾಗೆ 3-4 ವಾಹನ ಏರಿ ಮಂಗಳೂರಿಗೆ ಬರುತ್ತಾರೆ. ಮರಳುವಾಗಲೂ 4-5 ವಾಹನ ಮೂಲಕ ಮನೆಗೆ ಸೇರುತ್ತಾರೆ. ಅದು ಯಾರ ವಾಹನವೂ ಆಗುತ್ತದೆ. ರಾತ್ರಿ ಎಷ್ಟೋ ಬಾರಿ ಪೊಲೀಸರು ಮನೆಗೆ ಬಿಟ್ಟದ್ದೂ ಇದೆ.
ಹಾಗೆ ಹೊರಟವರು ಎಲ್ಲಿ ಯಾವುದೇ ಧಾರ್ಮಿಕ, ರಾಜಕೀಯ ಸಭಾ ಕಾರ್ಯಕ್ರಮಗಳಿದ್ದರೂ ಅಲ್ಲಿ ಹಾಜರ್. ಅಷ್ಟೇ ಅಲ್ಲ, ನೇರವಾಗಿ ವೇದಿಕೆ ಏರುವ ಅಭ್ಯಾಸವೂ ಇದೆ. ಮುಸ್ಲಿಂ ಧರ್ಮಗುರುಗಳು ಇದ್ದರೆಂದರೆ ವೇದಿಕೆ ಏರದೆ ಬಿಡುವುದಿಲ್ಲ. ಅವರ ಕೈ ಕುಲುಕದೆ ಕೆಳಗೆ ಇಳಿಯುವುದಿಲ್ಲ. ವೇದಿಕೆಯಲ್ಲಿ ಕುಳಿತುಕೊಂಡದ್ದೂ ಇದೆ.
ಮಂಗಳೂರಿನಲ್ಲಿ ಶನಿವಾರ ನಡೆದ ಸಭಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಅವರು, ಸಚಿವ ಯು.ಟಿ.ಖಾದರ್ ಅವರ ಬಳಿಗೆ ಓಡೋಡಿ ಬಂದು ಕೈ ಹಿಡಿದರು. ಸಚಿವರು ಎಂದಿನಂತೆ, ಕಷ್ಟ ಸುಖ ವಿಚಾರಿಸಿದಾಗ, ನನಗೆ ನಾಳೆ ಬೆಂಗಳೂರಿನ ಮುಸ್ಲಿಂ ಜಮಾತ್ ಸಮಾವೇಶಕ್ಕೆ ಹೋಗಬೇಕು, ಹೇಗಂತ ಗೊತ್ತಾಗುವುದಿಲ್ಲ ಎಂದು ಚಿಂತೆ ತೋಡಿಕೊಂಡರು. ನೀವು ಹೇಗೆ ಕಾರಿನಲ್ಲಿ ಹೋಗುತ್ತೀರಾ ಎಂಬ ಪ್ರಶ್ನೆಯನ್ನೂ ಕೇಳಿಬಿಟ್ಟರು.
ಮಂಗಳೂರಿನಲ್ಲಿ ಬೆಳಗ್ಗೆ ಕಾರ್ಯಕ್ರಮ ಇರುವುದರಿಂದ ಕಾರಿನಲ್ಲಿ ಹೋಗುವುದು ಕಷ್ಟ. ವಿಮಾನದಲ್ಲಾದರೆ ಬರುತ್ತೀರಾ ಎಂದು ಸಚಿವ ಖಾದರ್ ಪ್ರಶ್ನಿಸಿದರು. ನೀವು ಕರೆದುಕೊಂಡು ಹೋದರೆ ಬರುತ್ತೇನೆ ಎಂದು ನಗುತ್ತಾ ಹೇಳಿದರು. ಹಾಗೆ ಭಾನುವಾರ ಬೆಳಗ್ಗೆ ಸಚಿವರು ಭಾಗವಹಿಸಿದ್ದ ಕಾರ್ಯಕ್ರಮದಲ್ಲಿ ಜುಬ್ಬಿಯಾಕ ಕೂಡ ಹಾಜರ್. ಕಾರ್ಯಕ್ರಮ ಮುಗಿದ ಬಳಿಕ ಸಚಿವರ ಕಾರನ್ನೂ ಏರಿದರು. 3-4 ಕಾರ್ಯಕ್ರಮಗಳಲ್ಲಿ ಭಾಗವಹಿಸಿದ ಬಳಿಕ, ಸಚಿವರು ಅವರನ್ನು ವಿಮಾನ ಮೂಲಕ ಬೆಂಗಳೂರಿಗೆ ಕರೆದುಕೊಂಡು ಹೋಗಿದ್ದಾರೆ. ಸಮಾವೇಶ ಮುಗಿಸಿ, ರಾತ್ರಿ ಬೆಂಗಳೂರಿನಲ್ಲೇ ಉಳಿದು, ಸೋಮವಾರ ಮರಳಲಿದ್ದಾರೆ.