ಆ್ಯಪ್ನಗರ

ಕಂಗನಾಗೆ ಬಿಜೆಪಿ ಬೆಂಬಲ ದುರದೃಷ್ಟಕರ: ಸಂಜಯ್‌ ರಾವತ್..! ಸಂಸದರ ಟೀಕೆಗೆ ನಟಿಯಿಂದ ಖಡಕ್‌ ಪ್ರತಿಕ್ರಿಯೆ

ಮುಂಬೈಯನ್ನು ಪಾಕ್‌ ಆಕ್ರಮಿತ ಕಾಶ್ಮೀರಕ್ಕೆ ಹೋಲಿಸಿದ್ದರೂ ನಟಿ ಕಂಗನಾ ರಣಾವತ್‌ ಅವರನ್ನು ಬಿಜೆಪಿ ಬೆಂಬಲಿಸುತ್ತಿರುವುದು ದುರದೃಷ್ಟಕರ ಎಂದು ಶಿವಸೇನೆ ಸಂಸದ ಸಂಜಯ್‌ ರಾವತ್‌ ಟೀಕಿಸಿದ್ದಾರೆ. ಇದಕ್ಕೆ ಖಡಕ್‌ ಪ್ರತಿಕ್ರಿಯೆ ನೀಡಿದ ಕಂಗನಾ ವಾವ್‌, ನನ್ನನ್ನು ಹತ್ಯೆಗೈಯಲು ಬಿಜೆಪಿ ಬಿಡಬೇಕಿತ್ತೆ ಎಂದು ರಾವತ್‌ ಅವರನ್ನು ಪ್ರಶ್ನಿಸಿದ್ದಾರೆ.

Agencies 13 Sep 2020, 3:47 pm
ಮುಂಬಯಿ: ವಾಣಿಜ್ಯ ನಗರಿ ಮುಂಬೈಯನ್ನು ಪಾಕ್‌ ಆಕ್ರಮಿತ ಕಾಶ್ಮೀರಕ್ಕೆ ಹೋಲಿಸಿದ್ದರೂ ನಟಿ ಕಂಗನಾ ರಣಾವತ್‌ ಅವರನ್ನು ಬಿಜೆಪಿ ಬೆಂಬಲಿಸುತ್ತಿರುವುದು ದುರದೃಷ್ಟಕರ ಎಂದು ಶಿವಸೇನೆ ಸಂಸದ ಸಂಜಯ್‌ ರಾವತ್‌ ಹೇಳಿದ್ದಾರೆ. ಬಿಹಾರದಲ್ಲಿ ಮುಂದೆ ನಡೆಯುವ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಬಿಜೆಪಿ ಈ ನಡೆಯನ್ನು ಅನುಸರಿಸುತ್ತಿದೆ ಎಂದು ರಾವತ್‌ ಟೀಕಿಸಿದರು.
Vijaya Karnataka Web bjp backing kangana ranaut who insulted mumbai is unfortunate says sanjay raut
ಕಂಗನಾಗೆ ಬಿಜೆಪಿ ಬೆಂಬಲ ದುರದೃಷ್ಟಕರ: ಸಂಜಯ್‌ ರಾವತ್..! ಸಂಸದರ ಟೀಕೆಗೆ ನಟಿಯಿಂದ ಖಡಕ್‌ ಪ್ರತಿಕ್ರಿಯೆ


ಶಿವಸೇನೆಯ ಮುಖವಾಣಿ 'ಸಾಮನಾ'ದಲ್ಲಿನ ತಮ್ಮ ವಾರದ ಅಂಕಣ ರೋಖೋಕ್‌ನಲ್ಲಿ ಸಂಜಯ್ ರಾವತ್‌, ದೇಶದಲ್ಲಿ ವಾಣಿಜ್ಯ ನಗರಿ ಮುಂಬೈನ ಮಹತ್ವವನ್ನು ಕಡಿಮೆ ಮಾಡಲು ವ್ಯವಸ್ಥಿತ ಪ್ರಯತ್ನ ನಡೆಯುತ್ತಿದೆ ಎಂದು ಆರೋಪಿಸಿದ್ದು, ಹಾಗೂ ಮುಂಬೈಯನ್ನು ನಿರಂತರವಾಗಿ ದೂಷಿಸುವುದು ಆ ಪಿತೂರಿಯ ಭಾಗವಾಗಿದೆ ಎಂದರು.

ಸಂಜಯ್‌ ರಾವತ್‌ ಟೀಕೆಗೆ ಟ್ವೀಟ್‌ ಮೂಲಕ ಪ್ರತಿಕ್ರಿಯಿಸಿದ ನಟಿ ಕಂಗನಾ ರಣಾವತ್‌, ಡ್ರಗ್‌ ಮಾಫಿಯಾವನ್ನು ಬಯಲಿಗೆಳೆದವರಿಗೆ ಬಿಜೆಪಿ ರಕ್ಷಣೆ ನೀಡುತ್ತಿರುವುದು ದುರದೃಷ್ಟಕರವಂತೆ, ಅದ್ಭುತ..! ಇದರ ಬದಲಿಗೆ ಶಿವಸೇನಾ ಗೂಂಡಾಗಳು ನನ್ನ ಮೇಲೆ ದಾಳಿ ಮಾಡಲು ಬಿಜೆಪಿ ಬಿಡಬೇಕಿತ್ತಲವೇ ಸಂಜಯ್‌ ಜೀ..? ಮಾಫಿಯಾ ವಿರುದ್ಧ ನಿಂತಿರುವ ಯುವತಿಯನ್ನು ರಕ್ಷಿಸಲು ಬಿಜೆಪಿಗೆ ಎಷ್ಟು ಧೈರ್ಯ ಅಲ್ವಾ..? ಎಂದು ನಟಿ ರಾವಂತ್‌ಗೆ ತಿರುಗೇಟು ನೀಡಿದ್ದಾರೆ.


ಇನ್ನು ತಮ್ಮ ಬರಹದಲ್ಲಿ ಮಹಾರಾಷ್ಟ್ರದ ಎಲ್ಲಾ ಮರಾಠಿಗರು ಒಂದಾಗಬೇಕಾದ ಕಷ್ಟದ ಅವಧಿ ಇದಾಗಿದೆ ಎಂದು ಸಂಜಯ್ ರಾವತ್ ಹೇಳಿದ್ದು, ನಟಿ ಕಂಗನಾ ರಣಾವತ್‌ ಅವರನ್ನು ಬೆಂಬಲಿಸಿ ಹಾಗೂ ಸುಶಾಂತ್ ಸಿಂಗ್ ರಜಪೂತ್ ಪ್ರಕರಣದಲ್ಲಿ ತೆಗೆದುಕೊಂಡ ನಿಲುವಿನ ಮೂಲಕ ಬಿಹಾರ್‌ ಚುನಾವಣೆಯಲ್ಲಿ ಬಿಜೆಪಿ ಮೇಲ್ಜಾತಿಯ ರಜಪೂತ್‌ ಹಾಗೂ ಕ್ಷತ್ರಿಯ ಮತಗಳನ್ನು ಸೆಳೆಯುವ ಪ್ರಯತ್ನ ಮಾಡಿದೆ ಎಂದು ಹೇಳಿದ್ದಾರೆ.

ಮುಂಬೈನ್ನು ಅವಮಾನಿಸಿದ ಕಂಗನಾಗೆ ಕೇಂದ್ರದ ರಕ್ಷಣೆ ದುರದೃಷ್ಟಕರ: ಬಿಜೆಪಿ ವಿರುದ್ಧ ಶಿವಸೇನೆ ಕಿಡಿ

ಮಹಾರಾಷ್ಟ್ರಕ್ಕೆ ಅವಮಾನವಾದರೆ ಪರವಾಗಿಲ್ಲ. ಆದರೆ, ರಾಜ್ಯವನ್ನು ಅವಮಾನಿಸಿದ ರೀತಿಗೆ ಒಬ್ಬ ಮಹಾರಾಷ್ಟ್ರ ಬಿಜೆಪಿ ನಾಯಕನೂ ಆಕ್ರೋಶ ವ್ಯಕ್ತಪಡಿಸಲಿಲ್ಲ ಎಂದು ಬಿಜೆಪಿಯನ್ನು ಟೀಕಿಸಿದ್ದಾರೆ. ಒಬ್ಬ ನಟಿ ಮುಖ್ಯಮಂತ್ರಿಯನ್ನು ಅವಮಾನಿಸುತ್ತಾಳೆ. ರಾಜ್ಯದ ಜನರು ಇದಕ್ಕೆ ಪ್ರತಿಕ್ರಿಯಿಸಬಾರದು ಎಂದು ಹೇಳಿದರೆ, ಇದು ಯಾವ ರೀತಿಯ ಏಕಪಕ್ಷೀಯ ಸ್ವಾತಂತ್ರ್ಯ? ಎಂದು ಸಂಜಯ್ ರಾವತ್ ಬಿಜೆಪಿಯನ್ನು ಪ್ರಶ್ನಿಸಿದ್ದಾರೆ.

ಕಂಗನಾಗೆ ಸೇರಿದ ಕಟ್ಟಡ ಕೆಡವಲು ಮುಂದಾದ ಮುಂಬೈ ಪಾಲಿಕೆ! ಆಕ್ರೋಶ ವ್ಯಕ್ತಪಡಿಸಿದ ನಟಿ!

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ