ಆ್ಯಪ್ನಗರ

ಪತ್ರಕರ್ತ ಅರ್ನಬ್‌ ಗೋಸ್ವಾಮಿಗೆ ಬಿಗ್‌ ರಿಲೀಫ್‌; 2 ಎಫ್‌ಐಆರ್‌‌ಗಳಿಗೆ ತಡೆ ನೀಡಿದ ಬಾಂಬೆ ಹೈಕೋರ್ಟ್‌

ಪತ್ರಕರ್ತ ಅರ್ನಬ್‌ ಗೋಸ್ವಾಮಿಗೆ ಬಾಂಬೆ ಹೈಕೋರ್ಟ್‌ ಬಿಗ್‌ ರಿಲೀಫ್‌ ನೀಡಿದೆ. ಪಾಲ್ಘಾರ್‌ ಸಮೂಹ ಥಳಿತ ಪ್ರಕರಣ ಹಾಗೂ ಬಾಂದ್ರಾ ರೈಲ್ವೆ ನಿಲ್ದಾಣದಲ್ಲಿ ವಲಸೆ ಕಾರ್ಮಿಕರು ಸೇರಿರುವ ಬಗ್ಗೆ ಪ್ರಚೋದನಾಕಾರಿ ಪ್ರತಿಕ್ರಿಯೆಗೆ ಸಂಬಂಧಿಸಿದಂತೆ ದೂರು ದಾಖಲಾಗಿತ್ತು.

ANI 30 Jun 2020, 4:44 pm
ಮುಂಬಯಿ: ಪತ್ರಕರ್ತ ಅರ್ನಬ್‌ ಗೋಸ್ವಾಮಿಗೆ ಮತ್ತೊಂದು ಬಿಗ್‌ ರಿಲೀಫ್‌ ಸಿಕ್ಕಿದೆ. ಅರ್ನಬ್‌ ವಿರುದ್ಧ ದಾಖಲಾಗಿದ್ದ ಎರಡು ಎಫ್‌ಐಆರ್‌ಗಳನ್ನು ಬಾಂಬೆ ಹೈಕೋರ್ಟ್‌ ತಡೆಹಿಡಿದಿದೆ. ಮೇಲ್ನೋಟಕ್ಕೆ ಅಂತಹ ಆರೋಪಗಳು ಪ್ರಕರಣದಲ್ಲಿ ಕಂಡುಬಂದಿಲ್ಲ ಎಂದು ಕೋರ್ಟ್‌ ಅಭಿಪ್ರಾಯಪಟ್ಟಿದೆ.
Vijaya Karnataka Web bombay high court stays both firs filed against journalist arnab goswami
ಪತ್ರಕರ್ತ ಅರ್ನಬ್‌ ಗೋಸ್ವಾಮಿಗೆ ಬಿಗ್‌ ರಿಲೀಫ್‌; 2 ಎಫ್‌ಐಆರ್‌‌ಗಳಿಗೆ ತಡೆ ನೀಡಿದ ಬಾಂಬೆ ಹೈಕೋರ್ಟ್‌


ಪಾಲ್ಘಾರ್‌ ಗುಂಪು ಹಲ್ಲೆ ಹಾಗೂ ಬಾಂದ್ರಾ ನಿಲ್ದಾಣದಲ್ಲಿ ವಲಸೆ ಕಾರ್ಮಿಕರು ಸೇರಿದ ಘಟನೆಗಳಿಗೆ ಸಂಬಂಧಿಸಿದಂತೆ ಪ್ರಚೋದನಾಕಾರಿ ಕಾರ್ಯಕ್ರಮ ಪ್ರಸಾರ ಮಾಡಿದ ಬಗ್ಗೆ ಅರ್ನಬ್‌ ವಿರುದ್ಧ ಮುಂಬೈನಲ್ಲಿ ದೂರು ದಾಖಲಾಗಿತ್ತು. ಆದರೆ, ಮೇಲ್ನೋಟಕ್ಕೆ ಯಾವುದೇ ಆರೋಪಗಳು ಕಂಡುಬರದ ಹಿನ್ನೆಲೆ ಕೋರ್ಟ್‌ ಎಫ್‌ಐಆರ್‌ಗಳಿಗೆ ತಡೆಯಾಜ್ಞೆ ನೀಡಿದೆ.

ನ್ಯಾ.ಉಜ್ಜಲ್ ಭುಯಾನ್, ನ್ಯಾ.ರಿಯಾಜ್ ಚಗ್ಲಾ ನೇತೃತ್ವದ ಪೀಠ ಮೇಲ್ನೋಟಕ್ಕೆ ಅರ್ನಬ್ ಗೋಸ್ವಾಮಿ ವಿರುದ್ಧ ಅಂತಹ ಆರೋಪದ ಪ್ರಕರಣಗಳು ಕಂಡುಬಂದಿಲ್ಲ ಎಂದು ಹೇಳಿದೆ. ಹಿರಿಯ ವಕೀಲರಾದ ಹರೀಶ್ ಸಾಳ್ವೆ ಹಾಗೂ ಮಿಲಿಂದ್ ಸಾಥೆ, ಗೋಸ್ವಾಮಿ ಪರ ವಾದ ಮಂಡಿಸಿ ತಮ್ಮ ಕಕ್ಷಿದಾರರ ವಿರುದ್ಧ ಹಾಕಲಾಗಿರುವ ಎಫ್ಐಆರ್ ರಾಜಕೀಯ ಪ್ರೇರಿತ ಎಂದು ವಾದಿಸಿದ್ದರು.

ಅರ್ನಬ್‌ ಗೋಸ್ವಾಮಿಗೆ ತಾತ್ಕಾಲಿಕ ರಿಲೀಫ್‌; ಮಾಧ್ಯಮ ಸ್ವಾತಂತ್ರ್ಯ ಎತ್ತಿ ಹಿಡಿದ ಸುಪ್ರೀಂ

ಏಪ್ರಿಲ್‌ 29ರಂದು ಪ್ರಸಾರವಾಗಿದ್ದ ಕಾರ್ಯಕ್ರಮದಲ್ಲಿ ಬಾಂದ್ರಾ ರೈಲ್ವೆ ನಿಲ್ದಾಣದಲ್ಲಿ ವಲಸೆ ಕಾರ್ಮಿಕರು ಸೇರಿರುವ ಬಗ್ಗೆ ಪ್ರಚೋದನಾಕಾರಿ ಪ್ರತಿಕ್ರಿಯೆ ನೀಡಿದ್ದಾರೆ ಎಂಬ ಒಂದು ಆರೋಪವಿದ್ದರೆ, ಏಪ್ರಿಲ್‌ 21ರ ಕಾರ್ಯಕ್ರಮದಲ್ಲಿ ಪಾಲ್ಘಾರ್‌ ಸಮೂಹ ಥಳಿತ ಘಟನೆಗೆ ಸಂಬಂಧಿಸಿದಂತೆ ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿಗೆ ಪ್ರಶ್ನೆ ಮಾಡಿದ್ದಕ್ಕೆ ಸಂಬಂಧಿಸಿದಂತೆ ಪ್ರಕರಣಗಳು ದಾಖಲಾಗಿದ್ದವು.

ಮುಂಬಯಿನಲ್ಲಿ ತಡರಾತ್ರಿ ಅನರ್ಬ್‌ ಮೇಲೆ ಹಲ್ಲೆ, ಸೋನಿಯಾ ಗಾಂಧಿ ಕಾರಣವೆಂದು ಆರೋಪ!

ಮೇ 19ರಂದು ಎಫ್‌ಐಆರ್‌ಗಳನ್ನು ರದ್ದುಗೊಳಿಸುವಂತೆ ಸುಪ್ರೀಂ ಕೋರ್ಟ್‌ ಮೊರೆಗೆ ಅರ್ನಬ್‌ ಹೋಗಿದ್ದರು. ಆದರೆ, ಅವರ ಮನವಿಯನ್ನು ಸರ್ವೋಚ್ಚ ನ್ಯಾಯಾಲಯ ತಳ್ಳಿಹಾಕಿತ್ತು. ಪ್ರಕರಣದ ತನಿಖೆಯನ್ನು ಮಹಾರಾಷ್ಟ್ರ ಪೊಲೀಸರು ನಡೆಸುತ್ತಿರುವುದರಿಂದ ಅಲ್ಲಿ ಬಿಟ್ಟು, ದೇಶದ ಬೇರೆ ಕಡೆಗಳಲ್ಲಿ ದಾಖಲಾದ 14 ಎಫ್‌ಐಆರ್‌ಗಳನ್ನು ರದ್ದುಗೊಳಿಸುವಂತೆ ಸುಪ್ರೀಂ ಸೂಚಿಸಿತ್ತು. ಈಗ ಮಹಾರಾಷ್ಟ್ರದಲ್ಲಿಯ ಪ್ರಕರಣಗಳಿಗೂ ಹೈಕೋರ್ಟ್‌ ತಡೆ ನೀಡಿರುವುದು ಅರ್ನಬ್‌ ಗೋಸ್ವಾಮಿಗೆ ರಿಲೀಫ್‌ ಸಿಕ್ಕಿದೆ.

ಎಡಿಟರ್ಸ್‌ ಗಿಲ್ಡ್‌ ಆಫ್ ಇಂಡಿಯಾಗೆ ರಾಜೀನಾಮೆ ನೀಡಿದ ಅರ್ನಬ್‌ ಗೋಸ್ವಾಮಿ!

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ