ಆ್ಯಪ್ನಗರ

ಶಿರಡಿ ಸಾಯಿಬಾಬಾ ಜನ್ಮಸ್ಥಳ ವಿವಾದ ಸುಖಾಂತ್ಯ: ಗ್ರಾಮಸ್ಥರ ಮನವೊಲಿಸಿದ ಮಹಾ ಸಿಎಂ ಠಾಕ್ರೆ

ಶಿರಡಿಯಲ್ಲಿ ಇದ್ದಷ್ಟು ದಿನ ಸಾಯಿಬಾಬಾ ತಮ್ಮ ಹುಟ್ಟೂರು ಹಾಗೂ ಜಾತಿ ಕುರಿತು ಎಂದೂ ಹೇಳಿರಲಿಲ್ಲ. ಆದರೆ ಈಗ ಸಿಎಂ ಉದ್ಧವ್‌ ಠಾಕ್ರೆ ಪಾರ್ತಿ ಗ್ರಾಮವೇ ಸಾಯಿಬಾಬಾರ ಜನ್ಮಸ್ಥಳ ಎಂದು ಕರೆದಿದ್ದು, ವಿವಾದಕ್ಕೆ ಕಾರಣವಾಯ್ತು.

Vijaya Karnataka 20 Jan 2020, 8:32 pm
ಮುಂಬಯಿ: ಮಹಾರಾಷ್ಟ್ರ ಸಿಎಂ ಉದ್ಧವ್‌ ಠಾಕ್ರೆ ಅವರು ಶಿರಡಿ ಗ್ರಾಮದ ಮುಖಂಡರು ಹಾಗೂ ಕೆಲ ರಾಜಕೀಯ ನಾಯಕರ ನಿಯೋಗದೊಂದಿಗೆ ಸೋಮವಾರ ನಡೆಸಿದ ಸಭೆ ಫಲಪ್ರದಗೊಂಡ ಹಿನ್ನೆಲೆಯಲ್ಲಿ, ಶಿರಡಿ ಸಾಯಿಬಾಬಾರ ಜನ್ಮಸ್ಥಳದ ಕುರಿತು ಎದ್ದಿದ್ದ ವಿವಾದ ಸುಖಾಂತ್ಯ ಕಂಡಿದೆ.
Vijaya Karnataka Web shiradi uddhav
ಶಿರಡಿ ಸಾಯಿಬಾಬಾ ಜನ್ಮಸ್ಥಳ ವಿವಾದ ಸುಖಾಂತ್ಯ: ಗ್ರಾಮಸ್ಥರ ಮನವೊಲಿಸಿದ ಮಹಾ ಸಿಎಂ ಠಾಕ್ರೆ


ಕೆಲವು ದಿನಗಳ ಹಿಂದೆ ಪರ್ಬಾನಿ ಜಿಲ್ಲೆಯ ಪಾರ್ತಿ ಗ್ರಾಮ ಸಾಯಿಬಾಬಾರ ಜನ್ಮಸ್ಥಳ ಎಂದು ಹೇಳಿದ್ದ ಉದ್ಧವ್ ಠಾಕ್ರೆ, ಇದನ್ನು 100 ಕೋಟಿ ರೂ. ಅನುದಾನದಲ್ಲಿ ಅಭಿವೃದ್ಧಿಪಡಿಸುವುದಾಗಿ ಘೋಷಿಸಿದ್ದರು. ಶಿರಡಿಯಲ್ಲಿ ಇದ್ದಷ್ಟು ದಿನ ಸಾಯಿಬಾಬಾ ತಮ್ಮ ಹುಟ್ಟೂರು ಹಾಗೂ ಜಾತಿ ಕುರಿತು ಎಂದೂ ಹೇಳಿರಲಿಲ್ಲ. ಆದರೆ ಈಗ ಸಿಎಂ ಉದ್ಧವ್‌ ಠಾಕ್ರೆ ಪಾರ್ತಿ ಗ್ರಾಮವೇ ಸಾಯಿಬಾಬಾರ ಜನ್ಮಸ್ಥಳ ಎಂದು ಕರೆದಿದ್ದು, ವಿವಾದಕ್ಕೆ ಕಾರಣವಾಯ್ತು. ಇದಕ್ಕೆ ನಮ್ಮ ಆಕ್ಷೇಪವಿದೆ ಎಂದು ಹೇಳಿ ಶಿರಡಿ ಗ್ರಾಮಸ್ಥರು ಭಾನುವಾರ ಬಂದ್‌ ನಡೆಸಿದ್ದರು. ಇದಕ್ಕೆ ಶಿವಸೇನೆ ಸಂಸದ ಸದಾಶಿವ ಲೋಖಂಡೆ ಸಹ ಸಾಥ್‌ ನೀಡಿದ್ದರು.

ವಿವಾದ ತೀವ್ರಗೊಳ್ಳುತ್ತಿದ್ದಂತೆಯೇ ಎಚ್ಚೆತ್ತ ಸಿಎಂ ಉದ್ಧವ್ ಠಾಕ್ರೆ ಸಭೆ ಕರೆದಿದ್ದರು. ಅದರಂತೆ ಲೋಖಂಡೆ ಹಾಗೂ ಸಾಯಿಬಾಬಾ ದೇವಸ್ಥಾನ ಆಡಳಿತ ಮಂಡಳಿ ಮುಖ್ಯಸ್ಥರ ನೇತೃತ್ವದಲ್ಲಿ 40 ಸದಸ್ಯರ ನಿಯೋಗ ಸೋಮವಾರ ಉದ್ಧವ್‌ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿದ ಬಳಿಕ ವಿವಾದ ತಿಳಿಯಾಗಿದೆ. ಪಾರ್ತಿ ಅಭಿವೃದ್ಧಿ ಪ್ರಸ್ತಾವನೆ ಕೈಬಿಡುವುದಾಗಿ ನಿಯೋಗಕ್ಕೆ ಸಿಎಂ ಭರವಸೆ ನೀಡಿದರು ಎಂದು ಮೂಲಗಳು ಹೇಳಿವೆ.

ಇಂದಿನಿಂದ ಶಿರಡಿಯಲ್ಲಿ ಅನಿರ್ದಿಷ್ಟಾವಧಿ ಬಂದ್‌: ಬಾಬಾ ದೇಗುಲ ಮುಚ್ಚಲ್ಲ ಎಂದ ಆಡಳಿತ ಮಂಡಳಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ