ಆ್ಯಪ್ನಗರ

ಬಾಂದ್ರಾದಲ್ಲಿ ವಲಸಿಗರು ಗುಂಪು ಸೇರಿದ್ದು ಒಂದು ಘಟನೆಯಷ್ಟೇ; ಮುಂಬಯಿಗೆ ಸೇನೆ ನಿಯೋಜಿಸುವ ಅವಶ್ಯಕತೆ ಇಲ್ಲ: ಬಾಂಬೆ ಹೈಕೋರ್ಟ್‌

ಮುಂಬಯಿಯಲ್ಲಿ ದೇಶದಲ್ಲೇ ಅತಿ ಹೆಚ್ಚು ಕೊರೊನಾ ವೈರಸ್‌ ಸೋಂಕಿತರು ಇದ್ದಾರೆ. ಈ ಹಿನ್ನೆಲೆ ಇತ್ತೀಚೆಗೆ ಬಾಂದ್ರಾದಲ್ಲಿ ನಡೆದಂತಹ ಘಟನೆ ಮತ್ತೊಮ್ಮೆ ನಡೆಯಬಾರದೆಂದರೆ ಸೇನೆ ನಿಯೋಜಿಸಬೇಕು ಎಂದು ಜನರು ಅರ್ಜಿ ಸಲ್ಲಿಸಿದ್ದರು. ಈ ಬಗ್ಗೆ ಬಾಂಬೆ ಹೈಕೋರ್ಟ್ ತನ್ನ ಅಭಿಪ್ರಾಯಪಟ್ಟಿದೆ.

TIMESOFINDIA.COM 30 Apr 2020, 6:21 pm
ಮುಂಬಯಿ: ಮಹಾನಗರಕ್ಕೆ ಸೇನೆಯನ್ನು ನಿಯೋಜಿಸುವ ಅವಶ್ಯಕತೆ ಇಲ್ಲ ಎಂದು ಬಾಂಬೆ ಹೈಕೋರ್ಟ್ ತೀರ್ಪು ನೀಡಿದೆ. ಬಾಂದ್ರಾ ರೈಲು ನಿಲ್ದಾಣಕ್ಕೆ ವಲಸಿಗರು ತಮ್ಮ ಊರಿಗೆ ಹೋಗಲು ಇತ್ತೀಚೆಗೆ ಒಂದೇ ಕಡೆ ಸೇರಿಕೊಂಡಿದ್ದು ಕೇವಲ ಒಂದು ಘಟನೆಯಷ್ಟೇ ಎಂದೂ ಹೈಕೋರ್ಟ್ ನ್ಯಾಯಮೂರ್ತಿ ಅಭಿಪ್ರಾಯಪಟ್ಟಿದ್ದಾರೆ.
Vijaya Karnataka Web bombay-high-court_


ಏಪ್ರಿಲ್‌ 14,2020ರಂದು ನಡೆದ ಘಟನೆ ಗಂಭೀರ ಭದ್ರತಾ ಲೋಪವಾಗಿದೆ. ಇದರಿಂದ ನಮಗೆ ನೇರವಾಗಿ ತೊಂದರೆಯಾಗಿದೆ. ನಂತರ ಕೊರೊನಾ ವೈರಸ್‌ ಪ್ರಕರಣಗಳು ನಮ್ಮ ಪ್ರದೇಶದಲ್ಲಿ ಹೆಚ್ಚಾಗಿವೆ ಎಂದು ಬಾಂದ್ರಾ, ಖರ್‌ ಹಾಗೂ ಮಹೀಮ್‌ ನಿವಾಸಿಗಳು ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ಅಂತಹ ದುರ್ಬಲ ವಲಯ ಹಾಗೂ ರೆಡ್‌ ಝೋನ್‌ಗಳಲ್ಲಿ ಸೇನೆ ಅಥವಾ ಹೆಚ್ಚು ಭದ್ರತಾ ಸಿಬ್ಬಂದಿಯನ್ನು ನಿಯೋಜಿಸುವುದು ಸೇರಿದಂತೆ ತುರ್ತು ನಿರ್ದೇಶನಗಳನ್ನು ನೀಡಲು ಹಲವರು ಮನವಿ ಮಾಡಿಕೊಂಡಿದ್ದರು.

ಈ ಬಗ್ಗೆ ಏಪ್ರಿಲ್‌ 27, 2020ರಂದು ವಿಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಬರ್ಗೆಸ್ ಕೊಲಾಬಾವಾಲ್ಲಾ, ಸರಕಾರಕ್ಕೆ ಅಂತಹ ತುರ್ತು ನಿರ್ದೇಶನಗಳನ್ನು ನೀಡುವ ಅಗತ್ಯತೆ ಸದ್ಯಕ್ಕಿಲ್ಲ. ಕೋರ್ಟ್ ಈ ಮೊದಲಿನಂತೆ ಸಾಮಾನ್ಯವಾಗಿ ಕಲಾಪ ನಡೆಸುವ ವೇಳೆ ಅಗತ್ಯ ಬಿದ್ದರೆ ನಿರ್ದೇಶನ ನೀಡುವುದಾಗಿಯೂ ಹೇಳಿದರು.

ಕೊರೊನಾ ಬಲೆಯಲ್ಲಿ ಏಷ್ಯಾದ ಅತಿದೊಡ್ಡ ಸ್ಲಂ..! ಮಿಷನ್‌ ಧಾರಾವಿ ಸಕ್ಸಸ್‌ ಆಗುತ್ತಾ..?

ಅರ್ಜಿದಾರರ ಪರ ವಕೀಲ ರಾಹುಲ್ ತನ್ವಾನಿ ಅವರು ಬಾಂದ್ರಾದಲ್ಲಿ ಈಗಾಗಲೇ ಭದ್ರತಾ ಉಲ್ಲಂಘನೆ ನಡೆದಿರುವುದರಿಂದ ತುರ್ತು ಪರಿಸ್ಥಿತಿ ಇದೆ ಎಂದು ವಾದಿಸಿದರು. ನಗರದಲ್ಲಿ ಯಾವುದೇ ಸಾರಿಗೆ ಲಭ್ಯವಿಲ್ಲ ಎಂಬ ಅಂಶವನ್ನು ಗಮನಿಸಿದರೆ, ಅನೇಕರು ಕಾನೂನುಬಾಹಿರವಾಗಿ ಅಸ್ತಿತ್ವದಲ್ಲಿರುವ ಆದೇಶಗಳನ್ನು ಉಲ್ಲಂಘಿಸಿ ಒಟ್ಟುಗೂಡಿದ್ದಾರೆ ಎಂದು ವಾದ ಮಾಡಿದರು. ಆದರೆ ನ್ಯಾಯಾಧೀಶರು ಇದು ಕೇವಲ ಒಂದು ಘಟನೆ ಎಂದು ಅಭಿಪ್ರಾಯಪಟ್ಟರು.

ಮಹಾರಾಷ್ಟ್ರದಲ್ಲಿ ಸಾಂವಿಧಾನಿಕ ಬಿಕ್ಕಟ್ಟು, ಸಿಎಂ ಸ್ಥಾನಕ್ಕೆ ಉದ್ಧವ್‌ ಠಾಕ್ರೆ ರಾಜೀನಾಮೆ?

ಅಲ್ಲದೆ, ರಾಜ್ಯ ಸರಕಾರ ಹಾಗೂ ಪಾಲಿಕೆಯ ಅಧಿಕಾರಿಗಳು ಬಾಂದ್ರಾದಲ್ಲಿ ನಡೆದ ಪರಿಸ್ಥಿತಿಯನ್ನು ಮತ್ತೆ ಪುನರಾವರ್ತನೆಯಾಗದಂತೆ ತಹಬದಿಯಲ್ಲಿಡಲು ತನ್ನ ಕೈಲಾದ ಪ್ರಯತ್ನ ಮಾಡಲಿದ್ದಾರೆ ಎಂದೂ ನ್ಯಾಯಮೂರ್ತಿ ತಿಳಿಸಿದರು.

ರಾಜ್ಯದ ಶೇ.80ರಷ್ಟು ಕೊರೊನಾ ಸೋಂಕಿತರಲ್ಲಿ ರೋಗದ ಲಕ್ಷಣವೇ ಇಲ್ಲ: ಉದ್ಧವ್ ಠಾಕ್ರೆ

ಏಪ್ರಿಲ್‌ 14,2020ರ ಘಟನೆ ಕೊರೊನಾ ವೈರಸ್‌ ಹೆಚ್ಚಲು ನೇರ ಕಾರಣವಾಗಿದೆ. ಈ ಹಿನ್ನೆಲೆ ಸೇನೆ, ಕೇಂದ್ರ ಮೀಸಲು ಪೊಲೀಸ್ ಪಡೆ ಮತ್ತು ರಾಜ್ಯ ಮೀಸಲು ಪೊಲೀಸ್ ಪಡೆಗಳನ್ನು ಮುಂಬಯಿ ಮಹಾ ನಗರದಲ್ಲಿ ನಿಯೋಜಿಸಬೇಕು. ಜತೆಗೆ, ಬಾಂದ್ರಾ ಘಟನೆ ಬಗ್ಗೆ ಹೈಕೋರ್ಟ್ ಮೇಲ್ವಿಚಾರಣೆಯಲ್ಲಿ ಎಸ್‌ಐಟಿ ತನಿಖೆಯಾಗಬೇಕು ಎಂದೂ ಅರ್ಜಿದಾರರು ವಾದ ಮಾಡಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ