ಆ್ಯಪ್ನಗರ

ಸುಳ್ಳು ಸುದ್ದಿಯಿಂದ ಬಾಂದ್ರಾದಲ್ಲಿ ಸೇರಿದ ಕಾರ್ಮಿಕರು, ಪೊಲೀಸರಿಂದ ಟಿವಿ ಪತ್ರಕರ್ತನ ಬಂಧನ

ಮಂಗಳವಾರ ನಡೆದ ಬಾಂದ್ರಾ ಘಟನೆಗೆ ಸಂಬಂಧಿಸಿದಂತೆ ಖಾಸಗಿ ವಾಹಿನಿಯ ಪತ್ರಕರ್ತರೊಬ್ಬರನ್ನು ಪೊಲೀಸರು ಬಂಧಿಸಿದ್ದು, ಪತ್ರಕರ್ತ ನೀಡಿದ ಸುಳ್ಳು ಸುದ್ದಿಯಿಂದ ಸಾವಿರಾರೂ ಸಂಖ್ಯೆಯಲ್ಲಿ ಕಾರ್ಮಿಕರು ಬಾಂದ್ರಾ ರೈಲ್ವೆ ನಿಲ್ದಾಣದ ಎದುರಗಡೆ ಸೇರಿದ್ದರು ಎಂದು ಪೊಲೀಸರು ಹೇಳಿದ್ದಾರೆ.

Vijaya Karnataka Web 15 Apr 2020, 5:04 pm
ಮುಂಬಯಿ: ಮಂಗಳವಾರ ನಡೆದ ಬಾಂದ್ರಾ ಘಟನೆಗೆ ಸಂಬಂಧಿಸಿದಂತೆ ಟಿವಿ ಪತ್ರಕರ್ತರೊಬ್ಬರನ್ನು ಬಂಧಿಸಲಾಗಿದೆ. ಪತ್ರಕರ್ತನ ಸುಳ್ಳು ಸುದ್ದಿಯಿಂದ ಬಾಂದ್ರಾ ನಿಲ್ದಾಣದಲ್ಲಿ ಸಾವಿರಾರು ಕಾರ್ಮಿಕರು ಸೇರುವುದಕ್ಕೆ ಕಾರಣವಾಗಿತ್ತು. ಮಂಗಳವಾರದಿಂದ ರೈಲ್ವೆ ಸೇವೆ ಪ್ರಾರಂಭವಾಗುತ್ತದೆ ಎಂಬ ವರದಿಯನ್ನು ಪತ್ರಕರ್ತ ಮಾಡಿದ್ದರು.
Vijaya Karnataka Web Bandra1


ಎಬಿಪಿ ಮಾಜಾ ವಾಹಿನಿಯ ವರದಿಗಾರ ರಾಹುಲ್‌ ಕುಲಕರ್ಣಿಯನ್ನು ಬಂಧಿಸಲಾಗಿದೆ ಎಂದು ಮಹಾರಾಷ್ಟ್ರ ಟೈಮ್ಸ್‌ ವರದಿ ಮಾಡಿದೆ. ಏಪ್ರಿಲ್‌ 14ರಂದು ರೈಲ್ವೆ ಪ್ರಯಾಣ ವಾಪಸ್‌ ಪ್ರಾರಂಭವಾಗುತ್ತದೆ ಎಂಬ ಸುಳ್ಳು ಸುದ್ದಿ ಹರಡಿರುವುದಕ್ಕೆ ಆತನನ್ನು ಒಸ್ಮಾನಾಬಾದ್‌ ಜಿಲ್ಲೆಯ ಸ್ವಗ್ರಾಮದಲ್ಲಿ ಬಂಧಿಸಲಾಗಿದೆ.

ಸುಳ್ಳು ಸುದ್ದಿಯಿಂದ ಮುಂಬೈನ ಬಾಂದ್ರಾ ನಿಲ್ದಾಣದಲ್ಲಿ ವಲಸೆ ಕಾರ್ಮಿಕರು ಸಾವಿರಾರು ಸಂಖ್ಯೆಯಲ್ಲಿ ನೆರೆದಿದ್ದರು ಎಂದು ಪೊಲೀಸರು ಹೇಳಿದ್ದಾರೆ. ಪತ್ರಕರ್ತನ ವಿರುದ್ಧ ಐಪಿಸಿ ಸೆಕ್ಷನ್‌ 117, 188, 269, 270, 505 (2) ಹಾಗೂ ಸಾಂಕ್ರಾಮಿಕ ರೋಗ ಕಾಯಿದೆ 1897ರ ಸೆಕ್ಷನ್‌ 3ರಡಿಯಲ್ಲಿ ಜಾಮೀನು ರಹಿತ ಪ್ರಕರಣವನ್ನು ದಾಖಲಿಸಲಾಗಿದೆ.

ವಲಸೆ ಕಾರ್ಮಿಕರನ್ನು ಪ್ರಚೋದಿಸಿದ್ದ ಸಿಎಎ ವಿರೋಧಿ ಹೋರಾಟಗಾರ ವಿನಯ್ ದುಬೆ ಬಂಧನ!

ಲಾಕ್‌ಡೌನ್‌ ಹಿನ್ನೆಲೆ ಜನರಿಗೆ ಸಮಸ್ಯೆಯಾದ್ದರಿಂದ ಜನ ಸಾಧಾರಣ ವಿಶೇಷ ರೈಲುಗಳು ಮರುಕಾರ್ಯಾರಂಭ ಮಾಡುತ್ತವೆ ಎಂದು ಇತ್ತೀಚಿನ ವರದಿಯಲ್ಲಿ ರಾಹುಲ್‌ ಕುಲಕರ್ಣಿ ಹೇಳಿದ್ದರು. ಈ ಸುದ್ದಿಯನ್ನು ನಂಬಿದ ವಲಸೆ ಕಾರ್ಮಿಕರು ಬಾಂದ್ರಾ ರೈಲ್ವೆ ನಿಲ್ದಾಣದಲ್ಲಿ ನೆರೆದಿದ್ದರು.

ಅಬ್ಬಾ! ಲಾಕ್‌ಡೌನ್‌ ಉಲ್ಲಂಘನೆ, ಬಾಂದ್ರಾದಲ್ಲಿ ನೆರೆದ ಸಾವಿರಾರು ಕಾರ್ಮಿಕರು, ಊರಿಗೆ ಹೋಗಲು ಪ್ರತಿಭಟನೆ

ಬಿಹಾರ್‌, ಉತ್ತರ ಪ್ರದೇಶ, ಪಶ್ಚಿಮ ಬಂಗಾಳ ರಾಜ್ಯದ ಸಾವಿರಾರು ವಲಸೆ ಕಾರ್ಮಿಕರು ಬಾಂದ್ರಾ ರೈಲ್ವೆ ನಿಲ್ದಾಣದ ಬಳಿ ಸೇರಿದ್ದರು. ನಮ್ಮನ್ನು ತವರಿಗೆ ಕಳುಹಿಸಿ ಎಂದು ಸರಕಾರಕ್ಕೆ ಬೇಡಿಕೆಯನ್ನಿಟ್ಟದ್ದರು. ಸಾವಿರಾರೂ ಸಂಖ್ಯೆಯಲ್ಲಿ ಕಾರ್ಮಿಕರು ಸೇರಿದ್ದರಿಂದ ಲಾಕ್‌ಡೌನ್‌ ಉಲ್ಲಂಘನೆಯಾಗಿದ್ದು, ಅವರನ್ನು ಚದುರಿಸಲು ಪೊಲೀಸರು ಲಾಠಿ ಚಾರ್ಜ್‌ ಮಾಡಿದ್ದರು.

ಬಾಂದ್ರಾದಂತಹ ಘಟನೆಗಳಿಂದ ಕೊರೊನಾ ವಿರುದ್ಧದ ಹೋರಾಟ ದುರ್ಬಲ: ಅಮಿತ್‌ ಶಾ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ