ಮುಂಬೈ (ಮಹಾರಾಷ್ಟ್ರ): ಕೊರೊನಾ ವೈರಸ್ ಭೀತಿಯಿಂದ ಮನೆ ಸೇರಿರುವ ಜನರು, ಅಗತ್ಯ ವಸ್ತುಗಳ ಖರೀದಿಗಾಗಿ ಹೊಸ ಮಾರ್ಗ ಅನುಸರಿಸುತ್ತಿದ್ಧಾರೆ. ಕಿರಾಣಿ ಅಂಗಡಿಗಳ ಎದುರು ಗುಂಪುಗಟ್ಟಿ ನಿಲ್ಲದೆ ರಸ್ತೆಯಲ್ಲೇ ವೃತ್ತಗಳನ್ನು ರಚಿಸಲಾಗಿದೆ. ಪ್ರತಿಯೊಬ್ಬರೂ ಆ ವೃತ್ತದ ಒಳಗೆ ನಿಲ್ಲಬೇಕಿದೆ. ಒಬ್ಬರ ನಂತರ ಒಬ್ಬರು ಖರೀದಿ ಬಳಿಕ ವೃತ್ತಗಳನ್ನು ದಾಟಿಕೊಂಡು ಮುಂದೆ ಬರಬೇಕಾಗಿದೆ.
ಮುಂಬೈನ ಅಂದೇರಿ ಪೂರ್ವದಲ್ಲಿ ಈ ಪದ್ದತಿ ಅನುಸರಿಸಲಾಗುತ್ತಿದೆ. ಮುಂಬೈ ಪೊಲೀಸರೂ ಕೂಡಾ ಈ ನಿಯಮವನ್ನು ಪಾಲಿಸಲು ಜನತೆಗೆ ನೆರವಾಗುತ್ತಿದ್ಧಾರೆ. ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವ ಬಗ್ಗೆ ಜನರಿಗೆ ಪಾಠ ಹೇಳುತ್ತಿದ್ಧಾರೆ.
ಕೋಲಾರದಲ್ಲಿ ಲಾಕ್ಡೌನ್ ಆದೇಶ ಉಲ್ಲಂಘಿಸಿದವರಿಗೆ ಬಿತ್ತು ಲಾಠಿ ಏಟು!
ಮಂಗಳವಾರ ರಾತ್ರಿ ಪ್ರಧಾನಿ ನರೇಂದ್ರ ಮೋದಿ ಅವರು 21 ದಿನಗಳ ಲಾಕ್ ಡೌನ್ ಘೋಷಿಸಿದ ಬಳಿಕ, ಜನರು ಅಗತ್ಯ ವಸ್ತುಗಳು ಸಿಗದೆ ಹೋಗಬಹುದು ಅನ್ನೋ ಭಯದಿಂದ ಸಾಧ್ಯವಾದಷ್ಟೂ ವಸ್ತುಗಳನ್ನು ಖರೀದಿಸಲು ಮುಗಿಬೀಳುತ್ತಿದ್ದಾರೆ. ಅಗತ್ಯವಸ್ತುಗಳ ಕೊರತೆ ಉಂಟಾಗೋದಿಲ್ಲ ಎಂದು ಸರ್ಕಾರ ಪದೇ ಪದೇ ಹೇಳುತ್ತಿದ್ದರೂ ಜನರು ನಂಬೋದಕ್ಕೆ ಸಿದ್ದವಿಲ್ಲದಂಥಾ ಪರಿಸ್ಥಿತಿ ನಿರ್ಮಾಣವಾಗಿದೆ.
80 ಕೋಟಿ ಭಾರತೀಯರಿಗೆ ₹2ಕ್ಕೆ ಗೋಧಿ, ₹3ಕ್ಕೆ ಅಕ್ಕಿ ನೀಡಲು ನಿರ್ಧರಿಸಿದ ಕೇಂದ್ರ!
ಬೆಂಗಳೂರಿನಲ್ಲೂ ಕೂಡಾ ತರಕಾರಿ, ಹಾಲು, ಹಣ್ಣು, ದಿನಸಿ ವಸ್ತುಗಳ ಖರೀದಿಗೆ ಜನರು ಮಾರುಕಟ್ಟೆಯಲ್ಲಿ ಮುಗಿಬೀಳುತ್ತಿದ್ದ ದೃಶ್ಯ ಸರ್ವೇ ಸಾಮಾನ್ಯವಾಗಿತ್ತು. ಪೊಲೀಸರು ಜನರನ್ನು ಮನೆಯಿಂದ ಹೊರಗೆ ಬಾರದಂತೆ ತಡೆಯಲು ಹರಸಾಹಸ ನಡೆಸಬೇಕಾಗಿ ಬಂದಿದೆ.
ಕೊರೊನಾ ವೈರಸ್ ಎಫೆಕ್ಟ್: ರಾಷ್ಟ್ರೀಯ ಜನಸಂಖ್ಯಾ ನೋಂದಣಿ ಮುಂದೂಡಿಕೆ
ಮುಂಬೈನ ಅಂದೇರಿ ಪೂರ್ವದಲ್ಲಿ ಈ ಪದ್ದತಿ ಅನುಸರಿಸಲಾಗುತ್ತಿದೆ. ಮುಂಬೈ ಪೊಲೀಸರೂ ಕೂಡಾ ಈ ನಿಯಮವನ್ನು ಪಾಲಿಸಲು ಜನತೆಗೆ ನೆರವಾಗುತ್ತಿದ್ಧಾರೆ. ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವ ಬಗ್ಗೆ ಜನರಿಗೆ ಪಾಠ ಹೇಳುತ್ತಿದ್ಧಾರೆ.
ಕೋಲಾರದಲ್ಲಿ ಲಾಕ್ಡೌನ್ ಆದೇಶ ಉಲ್ಲಂಘಿಸಿದವರಿಗೆ ಬಿತ್ತು ಲಾಠಿ ಏಟು!
ಮಂಗಳವಾರ ರಾತ್ರಿ ಪ್ರಧಾನಿ ನರೇಂದ್ರ ಮೋದಿ ಅವರು 21 ದಿನಗಳ ಲಾಕ್ ಡೌನ್ ಘೋಷಿಸಿದ ಬಳಿಕ, ಜನರು ಅಗತ್ಯ ವಸ್ತುಗಳು ಸಿಗದೆ ಹೋಗಬಹುದು ಅನ್ನೋ ಭಯದಿಂದ ಸಾಧ್ಯವಾದಷ್ಟೂ ವಸ್ತುಗಳನ್ನು ಖರೀದಿಸಲು ಮುಗಿಬೀಳುತ್ತಿದ್ದಾರೆ. ಅಗತ್ಯವಸ್ತುಗಳ ಕೊರತೆ ಉಂಟಾಗೋದಿಲ್ಲ ಎಂದು ಸರ್ಕಾರ ಪದೇ ಪದೇ ಹೇಳುತ್ತಿದ್ದರೂ ಜನರು ನಂಬೋದಕ್ಕೆ ಸಿದ್ದವಿಲ್ಲದಂಥಾ ಪರಿಸ್ಥಿತಿ ನಿರ್ಮಾಣವಾಗಿದೆ.
80 ಕೋಟಿ ಭಾರತೀಯರಿಗೆ ₹2ಕ್ಕೆ ಗೋಧಿ, ₹3ಕ್ಕೆ ಅಕ್ಕಿ ನೀಡಲು ನಿರ್ಧರಿಸಿದ ಕೇಂದ್ರ!
ಬೆಂಗಳೂರಿನಲ್ಲೂ ಕೂಡಾ ತರಕಾರಿ, ಹಾಲು, ಹಣ್ಣು, ದಿನಸಿ ವಸ್ತುಗಳ ಖರೀದಿಗೆ ಜನರು ಮಾರುಕಟ್ಟೆಯಲ್ಲಿ ಮುಗಿಬೀಳುತ್ತಿದ್ದ ದೃಶ್ಯ ಸರ್ವೇ ಸಾಮಾನ್ಯವಾಗಿತ್ತು. ಪೊಲೀಸರು ಜನರನ್ನು ಮನೆಯಿಂದ ಹೊರಗೆ ಬಾರದಂತೆ ತಡೆಯಲು ಹರಸಾಹಸ ನಡೆಸಬೇಕಾಗಿ ಬಂದಿದೆ.
ಕೊರೊನಾ ವೈರಸ್ ಎಫೆಕ್ಟ್: ರಾಷ್ಟ್ರೀಯ ಜನಸಂಖ್ಯಾ ನೋಂದಣಿ ಮುಂದೂಡಿಕೆ