ಆ್ಯಪ್ನಗರ

ಮುಂಬೈನಲ್ಲಿ 4 ಫ್ಲಾಟ್‌ ಹೊಂದಿದ್ದರೂ ಭಿಕ್ಷೆ ಬೇಡುತ್ತಿದ್ದ ಮಹಿಳೆ; ಆಸ್ತಿ ಆಸೆಗೆ ಅತ್ತೆಯನ್ನೇ ಕೊಲೆ ಮಾಡಿದ ಸೊಸೆ

ಆಸ್ತಿ ಆಸೆಗಾಗಿ ಸೊಸೆ ಅತ್ತೆಯನ್ನೇ ಕೊಲೆ ಮಾಡಿರುವ ಘಟನೆ ಮುಂಬೈನಲ್ಲಿ ನಡೆದಿದೆ. ಆದರೆ, ವಾಣಿಜ್ಯ ನಗರಿ ಮುಂಬೈನಲ್ಲಿ ನಾಲ್ಕು ಪ್ಲಾಟ್‌ಗಳನ್ನೂ ಹೊಂದಿದ್ರೂ ಅತೆ ಭಿಕ್ಷೆ ಬೇಡುತ್ತಿದ್ದರು ಎಂಬುದು ಅಚ್ಚರಿಗೆ ಕಾರಣವಾಗಿದೆ.

TIMESOFINDIA.COM 17 Jul 2020, 10:12 pm
ಮುಂಬಯಿ: ಆಸ್ತಿಯ ಆಸೆ ಹಾಗೂ ಆಗಾಗ ನಡೆಯುತ್ತಿದ್ದ ಜಗಳ ಸೊಸೆಯಿಂದ ಅತ್ತೆಯ ಹತ್ಯೆಗೆ ಕಾರಣವಾಗಿದೆ. ಹೌದು, 70 ವರ್ಷದ ಅತ್ತೆಯನ್ನು 32 ವರ್ಷದ ಸೊಸೆ ಮುಂಬೈನ ಚೆಂಬೂರ್‌ನಲ್ಲಿರುವ ಪೆಸ್ಟೂಮ್‌ ಸಾಗರ್‌ ಕಾಲೋನಿಯಲ್ಲಿ ಕೊಲೆ ಮಾಡಿದ್ದಾರೆ. ಮೃತರನ್ನು ಸಂಜನಾ ಪಾಟೀಲ್‌ ಎಂದು ಗುರುತಿಸಲಾಗಿದೆ.
Vijaya Karnataka Web elderly woman beggar owner of 4 flats in mumbai murdered by daughter in law for property
ಮುಂಬೈನಲ್ಲಿ 4 ಫ್ಲಾಟ್‌ ಹೊಂದಿದ್ದರೂ ಭಿಕ್ಷೆ ಬೇಡುತ್ತಿದ್ದ ಮಹಿಳೆ; ಆಸ್ತಿ ಆಸೆಗೆ ಅತ್ತೆಯನ್ನೇ ಕೊಲೆ ಮಾಡಿದ ಸೊಸೆ


ಸೋಮವಾರ ಸಂಜೆ ಬಾತ್‌ರೂಮ್‌ನಲ್ಲಿ ಜಾರಿ ಬಿದ್ದಿದ್ದಾರೆ ಎಂದು ಗಂಭೀರ ಗಾಯಗಳಾಗಿದ್ದ ವೃದ್ಧೆಯನ್ನು ರಾಜವಾಡಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಸಂಜನಾ ಪಾಟೀಲ್‌ ಮೃತಪಟ್ಟಿದ್ದಾರೆ. ನಂತರ ಪೊಲೀಸರು ನಡೆಸಿದ ತನಿಖೆಯಲ್ಲಿ ಸಂಜನಾ ಪಾಟೀಲ್‌ ದತ್ತು ಪುತ್ರ ದಿನೇಶ್‌ ಪಾಟೀಲ್‌ ಪತ್ನಿ ಅಂಜನಾ ದಿನೇಶ್‌ ಪಾಟೀಲ್‌ ಕೊಲೆ ಮಾಡಿರುವುದು ಬಯಲಾಗಿದೆ.

ಕೆಲ ವರ್ಷಗಳ ಹಿಂದೆ ಮೃತ ಸಂಜನಾ ಪಾಟೀಲ್‌ ಪತಿ ಸಾವನ್ನಪ್ಪಿದ್ದರು. ದಂಪತಿಗಳು ತಮಗೆ ಮಕ್ಕಳಿಲ್ಲ ಎಂದು ದಿನೇಶ್‌ ಅವರನ್ನು ದತ್ತು ತೆಗೆದುಕೊಂಡಿದ್ದರು. ದಿನೇಶ ಸಂಜನಾ ಅವರ ಪತಿಯ ಸಹೋದರನ ಮಗನಾಗಿದ್ದ. ಸಂಜನಾ ಪಾಟೀಲ್‌ ಚೆಂಬೂರ್‌ ಹಾಗೂ ವೋರ್ಲಿಯಲ್ಲಿ ತಲಾ ಎರಡು ಪ್ಲಾಟ್‌ಗಳನ್ನು ಹೊಂದಿದ್ದರು.

ಮೂರು ಪ್ಲಾಟ್‌ಗಳನ್ನು ಬಾಡಿಗೆಗೆ ನೀಡಿ ನಾಲ್ಕನೇಯದರಲ್ಲಿ ತಮ್ಮ ದತ್ತು ಪುತ್ರ ದಿನೇಶ್‌ ಹಾಗೂ ಆತನ ಪತ್ನಿ ಜೊತೆಗೆ ವಾಸವಾಗಿದ್ದರು. ಮೂರು ಪ್ಲಾಟ್‌ಗಳಿಂದ ಬಾಡಿಗೆ ಬರುತ್ತಿದ್ದರೂ ನಗರದ ಗಾಟಕ್‌ಪುರ ಪ್ರದೇಶದಲ್ಲಿರುವ ಜೈನ ಮಂದಿರದ ಮುಂದೆ ಭಿಕ್ಷೆ ಬೇಡುತ್ತಿದ್ದರು ಎನ್ನಲಾಗಿದೆ.

ವೈದ್ಯರಿಂದ ಪೊಲೀಸರಿಗೆ ಮಾಹಿತಿ
ಸೋಮವಾರ ಸಂಜೆ ಆಸ್ಪತ್ರೆಗೆ ಸಂಜನಾ ಅವರನ್ನು ದಾಖಲಿಸಿದ ನಂತರ, ಅವರ ದೇಹದಲ್ಲಿ 14 ಕಡೆ ಗಾಯ ಹಾಗೂ ಕುತ್ತಿಗೆ ಮೇಲೆ ಕೈಗುರುತು ಮೂಡಿರುವುದನ್ನು ಕಂಡು ಸಂಶಯಗೊಂಡ ವೈದ್ಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಈ ಹಿನ್ನೆಲೆ ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ.

ಬೆಂಗಳೂರು: ಪ್ರಧಾನಿ ಕಚೇರಿಯಲ್ಲಿ ಸಲಹೆಗಾರ ಎಂದೇಳಿ ಯುವಕನ ನಿಗೂಢ ಸುತ್ತಾಟ, ವಂಚಕನಿಗೆ ಪೊಲೀಸರ ಬಲೆ

ಪೊಲೀಸರ ತನಿಖೆಗೆ ಸೊಸೆ ಸಹಕಾರ ನೀಡಿದ್ದಿಲ್ಲ. ಆದರೆ, ಅಂಜನಾ ಪಾಟೀಲ್‌ ಕಿರಿಯ ಪುತ್ರಿ ತನ್ನ ತಾಯಿ ಹಾಗೂ ಅಜ್ಜಿಯ ನಡುವೆ ಸೋಮವಾರ ಬೆಳಗ್ಗೆ ನಡೆದ ಗಲಾಟೆ ಬಗ್ಗೆ ಮಾಹಿತಿ ನೀಡಿದಾಗ ಘಟನೆ ಬೆಳಕಿಗೆ ಬಂದಿದೆ. ಅದಲ್ಲದೇ ಆರೋಪಿ ಸೊಸೆ ಒಳ ಉಡುಪಲ್ಲಿ ಮೃತ ಮಹಿಳೆಯ ಆಭರಣಗಳು ಪತ್ತೆಯಾಗಿವೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಪರೋಲ್‌ ಮೇಲೆ ಜೈಲಿನಿಂದ ಹೊರಬಂದು ಪತ್ನಿಯನ್ನು ಕೊಂದು, ತಾನೂ ಆತ್ಮಹತ್ಯೆ ಮಾಡಿಕೊಂಡ ಅಪರಾಧಿ

ಸೋಮವಾರ ಮಧ್ಯಾಹ್ನ ಮೂರು ಗಂಟೆ ಸುಮಾರಿಗೆ ಅಂಜನಾ ಕ್ರಿಕೆಟ್‌ ಬ್ಯಾಟ್‌ನಿಂದ ಸಂಜನಾ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ನಂತರ ಮೊಬೈಲ್‌ ಚಾರ್ಜರ್‌ ವೈರ್‌ನಿಂದ ಕುತ್ತಿಗೆ ಬಿಗಿಯಲಾಗಿದ್ದು, ಅದರಿಂದ ಸಂಜನಾ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ಆಗಾಗ ನಾಲ್ಕು ಪ್ಲಾಟ್‌ಗಳನ್ನು ತನ್ನ ಹೆಸರಿಗೆ ಬರೆದುಕೊಡುವಂತೆ ಸೊಸೆ ಸಂಜನಾ ಅವರ ಹತ್ತಿರ ಜಗಳ ಆಡುತ್ತಿದ್ದರು ಎಂದು ತಿಳಿದು ಬಂದಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ