ಆ್ಯಪ್ನಗರ

ದೆಹಲಿ ಹಿಂಸೆ ಭೀಕರತೆಗೆ ನಾಚಿ ಯಮನೂ ರಾಜೀನಾಮೆ ನೀಡುತ್ತಿದ್ದ: ಶಿವಸೇನೆ!

ದೆಹಲಿ ಸಿಎಎ ದಂಗೆ ಕುರಿತು ಮತ್ತೆ ಪ್ರಧಾನಿ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ವಿರುದ್ಧ ವಾಗ್ದಾಳಿ ನಡೆಸಿರುವ ಶಿವಸೇನೆ, ದಂಗೆಯ ಭೀಕರತೆ ಅದೆಷ್ಟಿತ್ತೆಂದರೆ ಅದನ್ನು ಕಂಡ ಯಮ ಕೂಡ ತನ್ನ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದ ಎಂದು ಮಾರ್ಮಿಕವಾಗಿ ಹೇಳಿದೆ.

Vijaya Karnataka Web 9 Mar 2020, 6:31 pm
ನವದೆಹಲಿ: ದೆಹಲಿ ಸಿಎಎ ದಂಗೆ ಕುರಿತು ಮತ್ತೆ ಪ್ರಧಾನಿ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ವಿರುದ್ಧ ವಾಗ್ದಾಳಿ ನಡೆಸಿರುವ ಶಿವಸೇನೆ, ದಂಗೆಯ ಭೀಕರತೆ ಅದೆಷ್ಟಿತ್ತೆಂದರೆ ಅದನ್ನು ಕಂಡ ಯಮ ಕೂಡ ತನ್ನ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದ ಎಂದು ಮಾರ್ಮಿಕವಾಗಿ ಹೇಳಿದೆ.
Vijaya Karnataka Web Delhi Violence
ದೆಹಲಿ ದಂಗೆಯ ಭೀಕರತೆ ಅದೆಷ್ಟಿತ್ತೆಂದರೆ ಈ ಭೀಕರತೆ ಕಂಡು ಯಮರಾಜ ಕೂಡ ತನ್ನ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದ ಎಂದು ಶಿವಸೇನೆ ಅಭಿಪ್ರಾಯಪಟ್ಟಿದೆ.


ಈ ಕುರಿತು ಶಿವಸೇನೆ ಮುಖವಾಣಿ ಸಾಮ್ನಾದಲ್ಲಿ ಸಂಪಾದಕೀಯ ಬರೆಯಲಾಗಿದ್ದು, ದೆಹಲಿ ಹಿಂಸಾಚಾರದಲ್ಲಿ ಹಿಂದೂ-ಮುಸ್ಲಿಂ ಕುಟುಂಬದ ಮುಗ್ಧ ಮಕ್ಕಳು ಅನಾತರಾಗಿದ್ದಾರೆ. ಆದರೆ ಇದಕ್ಕೆ ಕಾರಣರಾದವರು ನಾಚಿಕೆಯಿಲ್ಲದೇ ದಂಗೆಯನ್ನು ಬೆಂಬಲಿಸಿ ಹೇಳಿಕೆ ನೀಡುತ್ತಲೇ ಇದ್ದಾರೆ ಎಂದು ಕಿಡಿಕಾರಲಾಗಿದೆ.

ಐಬಿ ಅಧಿಕಾರಿ ಹತ್ಯೆ: ತಾಹೀರ್ ಸಹೋದರನನ್ನು ವಶಕ್ಕೆ ಪಡೆದ ಪೊಲೀಸರು!

ನಾವು ಅನಾಥರ ಹೊಸ ಸಮಾಜ ನಿರ್ಮಿಸಲು ಹೊರಟಿದ್ದೇವೆ ಎಂದು ಭಾಸವಾಗುತ್ತಿದ್ದು, ರಾಜಕೀಯ ವಿರೋಧಾಭಾಸ ಈ ಪರಿಯ ಹಿಮಸೆಗೆ ಕಾರಣವಾಗಬಾರದು ಎಂದು ಸಾಮ್ನಾ ಅಭಿಪ್ರಾಯಪಟ್ಟಿದೆ.

50ಕ್ಕೂ ಹೆಚ್ಚು ಜನರ ಪ್ರಾಣ ತೆಗೆಯಲು ಗಲಭೆಕೋರರಿಗೆ ಅಧಿಕಾರ ನೀಡಿದವರು ಯಾರು? ಇದು ಮಾನವೀಯತೆಯ ಸಾವೇ? ಎಂದು ಸಾಮ್ನಾ ಸಂಪಾದಕೀಯ ಪ್ರಶ್ನಿಸಿದೆ.

ಆಯ್ತು ಮಾತಾಡೋಣ: ದೆಹಲಿ ದಂಗೆ ಕುರಿತು ಮಾ.11ರಂದು ಶಾ ಉತ್ತರ!

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ