ಆ್ಯಪ್ನಗರ

ಚಿಕನ್‌ ಇಲ್ಲ ಎಂದಿದ್ದಕ್ಕೆ ಡಾಬಾಗೆ ಬೆಂಕಿ..! ಕಿರಿಕ್‌ ಮಾಡಿ ಪೊಲೀಸರ ಅತಿಥಿಯಾದ ಕುಡುಕರು

ಚಿಕನ್‌ಗಾಗಿ ಡಾಬಾಗೆ ಬೆಂಕಿಯಿಟ್ಟ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ. ಭಾನುವಾರ ಬೆಳಗ್ಗೆ 1 ಗಂಟೆಗೆ ಬಂದು‌ ಕುಡುಕರು ಚಿಕನ್‌ ಕೇಳಿದ್ದು, ಡಾಬಾದಲ್ಲಿ ಚಿಕನ್‌ ಖಾಲಿಯಾಗಿದೆ. ಆದ್ದರಿಂದ ಕೋಪಗೊಂಡ ಕುಡುಕರು ಡಾಬಾಗೆ ಬೆಂಕಿಯಿಟ್ಟಿದ್ದಾರೆ.

Vijaya Karnataka Web 11 Jan 2021, 4:59 pm
ಮುಂಬೈ: ಡಾಬಾದಲ್ಲಿ ಚಿಕನ್‌ ಇಲ್ಲ ಅಂದ್ರೆ, ಗ್ರಾಹಕರು ಅಬ್ಬಬ್ಬಾ ಅಂದ್ರೆ ಹೋಟೆಲ್‌ ಮಾಲೀಕರ ಜೊತೆ ಜಗಳ ಆಡಬಹುದು. ಅಥವಾ ಬೇರೆ ಡಾಬಾಕ್ಕೆ ಹೋಗಿ ತಿನ್ನಬಹುದು. ಆದರೆ, ಮಹಾರಾಷ್ಟ್ರದ ನಾಗ್ಪುರದಲ್ಲಿ ಚಿಕನ್‌ ಇಲ್ಲ ಎಂದು ಹೇಳಿದ್ದಕ್ಕೆ ಇಬ್ಬರು ಕುಡುಕರು ಡಾಬಾಗೆ ಬೆಂಕಿ ಇಟ್ಟಿರುವ ಘಟನೆ ನಡೆದಿದೆ.
Vijaya Karnataka Web chicken 34234
ಸಾಂದರ್ಭಿಕ ಚಿತ್ರ


ಹೌದು, ಭಾನುವಾರ ಬೆಳಗ್ಗೆ 1 ಗಂಟೆಗೆ ಡಾಬಾಗೆ ಬಂದ ಕುಡುಕರು ತಿನ್ನಲು ಚಿಕನ್‌ ಕೇಳಿದ್ದಾರೆ. ಆದರೆ, ಮಾಲೀಕರು ಚಿಕನ್‌ ಖಾಲಿಯಾಗಿದೆ ಎಂದು ಹೇಳಿರುವುದು ಕುಡುಕರ ಕೋಪಕ್ಕೆ ಕಾರಣವಾಗಿದೆ. ಈ ಹಿನ್ನೆಲೆ ಇಬ್ಬರು ನಶೆಯಲ್ಲಿ ಡಾಬಾಗೆ ಬೆಂಕಿ ಹಚ್ಚಿದ್ದಾರೆ. ಅದೃಷ್ಟವಶಾತ್‌ ಯಾವುದೇ ಪ್ರಾಣಾಪಯ ಸಂಭವಿಸಿಲ್ಲ.

ಡಾಬಾಗೆ ಬೆಂಕಿಯಿಟ್ಟವರನ್ನು ಶಂಕರ್‌ ಥ್ಯಾಡೆ (29) ಮತ್ತು ಸಾಗರ್‌ ಪಟೇಲ್‌ (19) ಎಂದು ಗುರುತಿಸಲಾಗಿದೆ. ಯಾವುದೇ ಪ್ರಾಣಾಪಯ ಸಂಭವಿಸಿಲ್ಲ ಎಂದರೂ ಡಾಬಾ ಭಾಗಶಃ ಸುಟ್ಟು ಭಸ್ಮವಾಗಿದ್ದು, ಭಾರೀ ನಷ್ಟವುಂಟಾಗಿದೆ.
ಪಿಎಂಸಿ ಬ್ಯಾಂಕ್‌ ಹಗರಣ: ಇ.ಡಿ ವಿಚಾರಣೆಗೆ ಎದುರಿಸಿದ ಸಂಜಯ್‌ ರಾವತ್‌ ಪತ್ನಿ ವರ್ಷಾಪೊಲೀಸರಿಗೆ ಮಾಹಿತಿ ತಿಳಿಯುತ್ತಿದ್ದಂತೆ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ. ಹೆಚ್ಚಿನ ತನಿಖೆಗಾಗಿ ಆರೋಪಿಗಳ ವಿಚಾರಣೆಯನ್ನು ಪೊಲೀಸರು ನಡೆಸುತ್ತಿದ್ದಾರೆ. ಇದೇ ರೀತಿಯ ಘಟನೆ ಮಾನಕ್‌ಪುರದಲ್ಲಿ ನಡೆದಿತ್ತು. ಎಗ್‌ ಕರಿ ಮಾಡಿ ಕೊಡದಿದ್ದಕ್ಕೆ ತನ್ನ ಸ್ನೇಹಿತನನ್ನೇ ಯುವಕನೊಬ್ಬ ಕೊಂದಿದ್ದ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ