ಆ್ಯಪ್ನಗರ

ವಾಟ್ಸಾಪ್‌ ಚಾಟ್‌ ಸೋರಿಕೆಯಾದ ಬೆನ್ನಲ್ಲೇ ಮಾಜಿ ಬಾರ್ಕ್‌ ಸಿಇಒ ದಾಸ್‌ಗುಪ್ತಾ ಐಸಿಯುಗೆ ದಾಖಲು

ಬಾರ್ಕ್‌ನ ಮಾಜಿ ಸಿಇಒ ಪಾರ್ತೊ ದಾಸ್‌ಗುಪ್ತಾ ಮತ್ತು ರಿಪಬ್ಲಿಕ್‌ ಟಿವಿಯ ಸಂಪಾದಕ ಅರ್ನಬ್‌ ಗೋಸ್ವಾಮಿ ನಡುವಿನ ವಾಟ್ಸಾಪ್ ಚಾಟ್‌ ಸೋರಿಕೆಯಾದ ಬೆನ್ನಲ್ಲೇ ದಾಸ್‌ಗುಪ್ತಾ ಅವರ ಆರೋಗ್ಯದಲ್ಲಿ ಏರುಪೇರಾಗಿದ್ದು, ಜೆಜೆ ಹಾಸ್ಪಿಟಲ್‌ಗೆ ದಾಖಲಿಸಲಾಗಿದೆ.

Agencies 16 Jan 2021, 2:43 pm
ಮುಂಬಯಿ: ಬಾರ್ಕ್‌ನ ಮಾಜಿ ಸಿಇಒ ಪಾರ್ತೊ ದಾಸ್‌ಗುಪ್ತಾ ಹಾಗೂ ರಿಪಬ್ಲಿಕ್‌ ಟಿವಿಯ ಸಂಪಾದಕ ಅರ್ನಬ್‌ ಗೋಸ್ವಾಮಿ ನಡುವೆ ನಡೆದಿದ್ದು ಎನ್ನಲಾದ ವಾಟ್ಸಾಪ್‌ ಸಂಭಾಷಣೆ ಸೋರಿಕೆಯಾದ‌ ಬೆನ್ನಲ್ಲೇ ದಾಸ್‌ಗುಪ್ತಾ ಅವರ ಆರೋಗ್ಯದಲ್ಲಿ ಏರುಪೇರಾಗಿದ್ದು, ಅವರನ್ನು ಜೆಜೆ ಹಾಸ್ಪಿಟಲ್‌ಗೆ ದಾಖಲಿಸಲಾಗಿದೆ.
Vijaya Karnataka Web Partho Dasgupta


ನ್ಯಾಯಾಂಗ ಬಂಧನದಲ್ಲಿ ಇರುವಾಗಲೇ ಶುಕ್ರವಾರ ರಾತ್ರಿ ಪಾರ್ತೊ ದಾಸ್‌ಗುಪ್ತಾ ತೀವ್ರ ರಕ್ತದ ಒತ್ತಡದಿಂದ ಪ್ರಜ್ಞೆ ತಪ್ಪಿ ಬಿದ್ದಿದ್ದರು. ನಂತರ ರಾತ್ರಿ ಒಂದು ಗಂಟೆ ಸುಮಾರಿಗೆ ಅವರನ್ನು ತಜೋಲಾ ಜೈಲಿನಿಂದ ಅಧಿಕಾರಿಗಳು ಆಸ್ಪತ್ರೆಗೆ ದಾಖಲಿಸಿದರು ಎಂದು ತಿಳಿದು ಬಂದಿದೆ.

ಶನಿವಾರ ಮುಂಜಾನೆ ಅವರನ್ನು ಐಸಿಯುಗೆ ದಾಖಲಿಸಲಾಗಿದೆ ಎಂದು ಅವರ ಪತ್ನಿ ಸಮ್ರಾಜ್ನಿ ದಾಸ್‌ಗುಪ್ತಾ ಹೇಳಿದ್ದಾರೆ. ಸದ್ಯ ಅವರು ಆಕ್ಸಿಜನ್‌ ಸಂಪರ್ಕದಲ್ಲಿದ್ದಾರೆ.

ಟಿಆರ್‌ಪಿ ಹಗರಣ: ಅರ್ನಬ್‌, ದಾಸ್‌ಗುಪ್ತಾ ನಡುವಿನ ಸ್ಫೋಟಕ ವ್ಯಾಟ್ಸಪ್‌ ಸಂದೇಶ ಸೋರಿಕೆ
"ಪಾರ್ಥೊ ಧ್ವನಿ ಆಜ್ಞೆಗೆ ಸ್ಪಂದಿಸುತ್ತಿಲ್ಲ ಮತ್ತು ಅವರ ಮಾತು ಅಸಂಗತವಾಗಿದೆ. ಅವರು ಸಕ್ಕರೆ ಖಾಯಿಲೆ ರೋಗಿಯಾಗಿದ್ದು, ಏರಿಳಿತದ ರಕ್ತದೊತ್ತಡವನ್ನು ಹೊಂದಿದ್ದಾರೆ. ಅವರ ಆರೋಗ್ಯ ಪರಿಸ್ಥಿತಿಯ ಬಗ್ಗೆ ಇಂದು ಬೆಳಿಗ್ಗೆ ನಮಗೆ ಮಾಹಿತಿ ನೀಡಲಾಯಿತು. ಅವರ ಪರಿಸ್ಥಿತಿ ಗಂಭೀರವಾಗಿದೆ," ಎಂದು ಅವರು ಮಾಹಿತಿ ನೀಡಿದ್ದಾರೆ.

ಟಿಆರ್‌ಪಿ ಹಗರಣಕ್ಕೆ ಸಂಬಂಧಿಸಿದಂತೆ ದಾಸ್‌ಗುಪ್ತಾ ಅವರನ್ನು ಮುಂಬಯಿ ಪೊಲೀಸರು ಡಿಸೆಂಬರ್‌ ಕೊನೆಯ ವಾರದಲ್ಲಿ ಬಂಧಿಸಿದ್ದರು. ಡಿಸೆಂಬರ್‌ 31ರವರೆಗೆ ಅವರು ಪೊಲೀಸ್‌ ಕಸ್ಟಡಿಯಲ್ಲಿದ್ದರು. ನಂತರ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ