ಆ್ಯಪ್ನಗರ

ಶಿವಸೇನೆಗೆ ಕಂಗನಾ ಸಮಸ್ಯೆಯೇ ಅಲ್ಲ, ದೇಶದಲ್ಲಿ ಬಹಳಷ್ಟು ಸಮಸ್ಯೆಗಳಿವೆ: ಸಂಜಯ್‌ ರಾವತ್‌

ಬಾಲಿವುಡ್‌ ನಟಿ ಕಂಗನಾ ರಣಾವತ್ ಹಾಗೂ ಶಿವಸೇನೆ ನಾಯಕರ ನಡುವೆ ವಾಕ್ಸಮರ ಮುಂದುವರೆದಿದೆ. ಶಿವಸೇನಾ ಸಂಸದ‌ ಸಂಜಯ್‌ ರಾವತ್‌ ಕಂಗನಾ ನಮಗೆ ಸಮಸ್ಯೆಯೇ ಅಲ್ಲ, ಅದು ಬಿಟ್ಟು ದೇಶದಲ್ಲಿ ಬಹಳಷ್ಟು ಸಮಸ್ಯೆಗಳಿವೆ ಎಂದು ಹೇಳಿದ್ದಾರೆ.

Agencies 17 Sep 2020, 6:25 pm
ಮುಂಬಯಿ: ಬಾಲಿವುಡ್‌ ನಟಿ ಕಂಗನಾ ರಣಾವತ್‌ ನಮಗೆ ಸಮಸ್ಯೆಯೇ ಅಲ್ಲ, ಅದು ಬಿಟ್ಟು ದೇಶದಲ್ಲಿ ಬಹಳಷ್ಟು ಸಮಸ್ಯೆಗಳಿವೆ ಎಂದು ಶಿವಸೇನೆ ಸಂಸದ ಸಂಜಯ್‌ ರಾವತ್‌ ಹೇಳಿದ್ದಾರೆ.
Vijaya Karnataka Web kangana ranaut not an issue for shiv sena there are several other issues in the country sanjay raut
ಶಿವಸೇನೆಗೆ ಕಂಗನಾ ಸಮಸ್ಯೆಯೇ ಅಲ್ಲ, ದೇಶದಲ್ಲಿ ಬಹಳಷ್ಟು ಸಮಸ್ಯೆಗಳಿವೆ: ಸಂಜಯ್‌ ರಾವತ್‌


ಉರ್ಮಿಳಾ ಮಟೋಂಡ್ಕರ್‌ ಅವರನ್ನು ಸಾಫ್ಟ್‌-ಪೋರ್ನ್‌ ನಟಿ ಎಂದು ಟೀಕಿಸಿದ್ದ ಕಂಗನಾ ಹೇಳಿಕೆಗೆ ಮುಂಬೈನಲ್ಲಿ ಪ್ರತಿಕ್ರಿಯಿಸಿದ ರಾವತ್‌, ರಣಾವತ್‌ ಹೇಳಿಕೆ ಅವರ ಸಂಸ್ಕೃತಿಯನ್ನು ತೋರಿಸುತ್ತದೆ. ನಾನು ಮಹಾತ್ಮ ಗಾಂಧಿಯವರ ಕೆಟ್ಟದ್ದನ್ನು ನೋಡಬೇಡಿ, ಕೆಟ್ಟದ್ದನ್ನು ಕೇಳಬೇಡಿ, ಕೆಟ್ಟದ್ದನ್ನು ಮಾತನಾಡಬೇಡಿ ಎಂಬ ವಾಕ್ಯವನ್ನು ನಂಬುತ್ತೇನೆ ಎಂದು ಹೇಳಿದರು.

ಕಂಗನಾ ಅವರು ಶಿವಸೇನೆಗೆ ಸಮಸ್ಯೆಯೇ ಅಲ್ಲ ಅದು ಬಿಟ್ಟು ಬೇರೆ ಸಮಸ್ಯೆಗಳಿವೆ. ರಣಾವತ್‌ ಉರ್ಮಿಳಾ ನಟನೆಗೆ ಜನಪ್ರಿಯವಾಗಿಲ್ಲ, ಕೇವಲ ಸಾಫ್ಟ್‌ ಫೋರ್ನ್‌ ನಟಿಯಾಗಿ ಹೆಸರಾಗಿದ್ದಾರೆ ಎಂದು ಹೇಳಿದ್ದರು ಎಂದು ರಾವತ್‌ ಹೇಳಿದ್ದಾರೆ.

ಕಂಗನಾಗೆ ಬಿಜೆಪಿ ಬೆಂಬಲ ದುರದೃಷ್ಟಕರ: ಸಂಜಯ್‌ ರಾವತ್..! ಸಂಸದರ ಟೀಕೆಗೆ ನಟಿಯಿಂದ ಖಡಕ್‌ ಪ್ರತಿಕ್ರಿಯೆ

ಬಾಲಿವುಡ್‌ನಲ್ಲಿ ಡ್ರಗ್ ಮಾಫಿಯಾಕ್ಕೆ ಸಂಬಂಧಪಟ್ಟಂತೆ ಕಂಗನಾ ರಣಾವತ್‌ ದನಿಯೆತ್ತಿದ್ದರು. ಈ ಕಾರಣಕ್ಕಾಗಿ ಭಾರೀ ವಿರೋಧ ವ್ಯಕ್ತವಾಗಿತ್ತು. ಬೃಹನ್‌ ಮುಂಬೈ ನಗರ ಪಾಲಿಕೆ ಕಂಗನಾ ಅವರ ಅಕ್ರಮ ಕಟ್ಟಡ ಒಂದು ಭಾಗವನ್ನು ಕೆಡವಿತ್ತು. ಇದಕ್ಕೆ ಮುಂಬೈಯನ್ನು ರಣಾವತ್‌ ಪಾಕ್‌ ಆಕ್ರಮಿತ ಕಾಶ್ಮೀರಕ್ಕೆ ಹೋಲಿಸಿದ್ದರು.

ಮುಂಬೈನ್ನು ಅವಮಾನಿಸಿದ ಕಂಗನಾಗೆ ಕೇಂದ್ರದ ರಕ್ಷಣೆ ದುರದೃಷ್ಟಕರ: ಬಿಜೆಪಿ ವಿರುದ್ಧ ಶಿವಸೇನೆ ಕಿಡಿ

ಇದರಿಂದ ಶಿವಸೇನೆ ಭಾರೀ ಆಕ್ರೋಶ ವ್ಯಕ್ತಪಡಿಸಿತ್ತು. ಬಿಜೆಪಿ ನೇತೃತ್ವದ ಕೇಂದ್ರ ಸರಕಾರ ಕಂಗನಾ ರಣಾವತ್‌ಗೆ ವೈ ಪ್ಲಸ್‌ ಭದ್ರತೆಯನ್ನು ಒದಗಿಸಿದ್ದು, ರಣಾವತ್‌ ವಿಷಯವನ್ನು ಬಿಜೆಪಿ ಬಿಹಾರ ಚುನಾವಣೆಗೆ ಬಳಸಿಕೊಳ್ಳುತ್ತಿದೆ ಎಂದು ಶಿವಸೇನೆ ಟೀಕಿಸಿತ್ತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ