ಆ್ಯಪ್ನಗರ

ಗೋಮಾಂಸಕ್ಕೆ ಇಲ್ಲಿ ನೋ.. ಗೋವಾದಲ್ಲಿ ಯೆಸ್‌..! ಇದು ನಿಮ್ಮ ಹಿಂದುತ್ವವೇ..?: ಉದ್ಧವ್‌ ಠಾಕ್ರೆ ವಾಗ್ದಾಳಿ

ಮಹಾರಾಷ್ಟ್ರ ಸಿಎಂ ಹಾಗೂ ಗವರ್ನರ್‌ ನಡುವಿನ ಹಿಂದುತ್ವದ ಕುರಿತ ಮಾತಿನ ಸಮರ ದಸರಾದಂದು ಮುಂದುವರೆದಿದೆ. ರಾಜ್ಯಪಾಲ ಭಗತ್‌ ಸಿಂಗ್‌ ಕೊಶ್ಯರಿ ವಿರುದ್ಧ ಕಿಡಿಕಾರಿರುವ ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ ಇದು ನಿಮ್ಮ ಹಿಂದುತ್ವವೇ ಎಂದು ಪ್ರಶ್ನಿಸಿದ್ದಾರೆ.

Agencies 25 Oct 2020, 10:02 pm
ಮುಂಬೈ: ಮಹಾರಾಷ್ಟ್ರ ಸಿಎಂ ಹಾಗೂ ಗವರ್ನರ್‌ ನಡುವಿನ ಮಾತಿನ ಸಮರ ದಸರಾದಂದು ಮುಂದುವರೆದಿದೆ. ರಾಜ್ಯಪಾಲ ಭಗತ್‌ ಸಿಂಗ್‌ ಕೊಶ್ಯರಿ ವಿರುದ್ಧ ಕಿಡಿಕಾರಿರುವ ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ, ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್‌ ಭಾಗವತ್‌ ಅವರ ಭಾಷಣವನ್ನು ಅನುಸರಿಸಿ ಎಂದು ಸಲಹೆ ನೀಡಿದ್ದಾರೆ.
Vijaya Karnataka Web maharashtra chief minister uddhav thackeray to governor bhagat singh koshyari this your hindutva
ಗೋಮಾಂಸಕ್ಕೆ ಇಲ್ಲಿ ನೋ.. ಗೋವಾದಲ್ಲಿ ಯೆಸ್‌..! ಇದು ನಿಮ್ಮ ಹಿಂದುತ್ವವೇ..?: ಉದ್ಧವ್‌ ಠಾಕ್ರೆ ವಾಗ್ದಾಳಿ


ವಿಜಯದಶಮಿ ಪ್ರಯುಕ್ತ ಮುಂಬೈನಲ್ಲಿ ಮಾತನಾಡಿದ ಉದ್ಧವ್‌ ಠಾಕ್ರೆ, ಕೊರೊನಾ ವೈರಸ್‌ ಕಾರಣ ನಾವು ಇನ್ನೂ ದೇವಾಲಯಗಳನ್ನು ತೆರೆಯದ ಕಾರಣ ಹಿಂದುತ್ವದ ಬಗ್ಗೆ ನಮಗೆ ಪ್ರಶ್ನೆ ಮಾಡುತ್ತಿದ್ದಾರೆ ಎಂದು ರಾಜ್ಯಪಾಲರ ಹೆಸರು ಉಲ್ಲೇಖಸದೆ ವಾಗ್ದಾಳಿ ನಡೆಸಿದರು.

ನೀವು ನಮ್ಮ ಹಿಂದುತ್ವದ ಬಗ್ಗೆ ಮಾತನಾಡುತ್ತಿದ್ದೀರಿ. ಆದ್ದರಿಂದ ಮಹಾರಾಷ್ಟ್ರದಲ್ಲಿ ನೀವು ಗೋಮಾಂಸ ನಿಷೇಧಿಸುತ್ತೀರಿ. ಆದರೆ, ಗೋವಾದಲ್ಲಿ ನಿಮಗೆ ಗೋಮಾಂಸ ಏನು ಮಾಡುವುದಿಲ್ಲ. ಇದು ನಿಮ್ಮ ಹಿಂದುತ್ವವೇ..? ಎಂದು ಪ್ರಶ್ನಿಸಿದ ಠಾಕ್ರೆ ಬಿಜೆಪಿ ದ್ವಂದ್ವ ನೀತಿಯನ್ನು ಅನುಸರಿಸುತ್ತಿದೆ ಎಂದು ವಿಮರ್ಷೆ ಮಾಡಿದರು.

ಈ ವೇಳೆ ಆರ್‌ಎಸ್‌ಎಸ್‌ ಮುಖ್ಯಸ್ಥ ಭಾನುವಾರ ಮಾಡಿದ್ದ ಭಾಷಣವನ್ನು ಉಲ್ಲೇಖಿಸಿದ ಠಾಕ್ರೆ, ಮೋಹನ್ ಭಾಗವತ್ ಇಂದು ಹಿಂದುತ್ವವು ಪೂಜೆಗಳೊಂದಿಗೆ ಮಾತ್ರ ಸಂಬಂಧ ಹೊಂದಿಲ್ಲ ಎಂದು ಹೇಳಿದ್ದಾರೆರು. ಕೆಲವರು ಕಪ್ಪು ಟೋಪಿ ಧರಿಸಿ ನಮ್ಮ ನಂಬಿಕೆಗಳನ್ನು ಪ್ರಶ್ನಿಸಿ ನಮ್ಮನ್ನು ಜಾತ್ಯತೀತ ಎಂದು ಕರೆಯುತ್ತಿದ್ದಾರೆ ಅಂತವರು ಭಾಗವತ್ ಭಾಷಣ ಕೇಳಲಿ ಎಂದು ಹೇಳಿದರು.

ಉದ್ಧವ್ ಸರ್ಕಾರದಿಂದ 'ಬಿಗಿನ್ ಅಗೇನ್' ಮಾರ್ಗಸೂಚಿ: ದೇವಸ್ಥಾನ ತೆರೆಯುವ ಉಲ್ಲೇಖವಿಲ್ಲ!

ವಿಜಯದಶಮಿ ಭಾಷಣದಲ್ಲಿ ಮೋಹನ್‌ ಭಾಗವತ್‌ ಹಿಂದುತ್ವವನ್ನು ವ್ಯಾಖ್ಯಾನಿಸಿ, ಯಾರಾದರೂ ನಮಗೆ ಸವಾಲು ಹಾಕಲು ಬಯಸಿದರೆ, ಅಪಾಯವನ್ನು ಮೈಮೇಲೆ ಎಳೆದುಕೊಂಡಂತೆ ಎಂದು ಎಚ್ಚರಿಸಿದ್ದರು. ಜೊತೆಗೆ ಹಿಂದುತ್ವಕ್ಕೆ ಧಾರ್ಮಿಕ ಅರ್ಥ ಸೇರಿಸಿ ಅದನ್ನು ವಿರೂಪಗೊಳಿಸಲಾಗಿದೆ ಎಂದು ಬೇಸರ ವ್ಯಕ್ತಪಡಿಸಿದ್ದರು.

ಹಿಂದುತ್ವದ ತಪ್ಪು ಕಲ್ಪನೆಯನ್ನು ಸಂಘ ಉತ್ತೇಜಿಸುವುದಿಲ್ಲ. ಇದು ನಮ್ಮ ಗುರುತನ್ನು ವ್ಯಕ್ತಪಡಿಸುವ ಪದವಾಗಿದೆ. ಆಧ್ಯಾತ್ಮಿಕತೆ ಆಧಾರಿತ ಸಂಪ್ರದಾಯಗಳ ನಿರಂತರತೆ ಮತ್ತು ಭಾರತದ ಭೂಮಿಯಲ್ಲಿನ ಮೌಲ್ಯ ವ್ಯವಸ್ಥೆ, ಸಂಪೂರ್ಣ ಸಂಪತ್ತು ಎಂದು ಆರ್‌ಎಸ್‌ಎಸ್‌ ಮುಖ್ಯಸ್ಥ ಹಿಂದುತ್ವವನ್ನು ವ್ಯಾಖ್ಯಾನಿಸಿದ್ದರು.

ಧಾರ್ಮಿಕ ಕ್ಷೇತ್ರಗಳನ್ನು ತೆರೆಯವ ವಿಚಾರದಲ್ಲಿ ಉದ್ಧವ್-ರಾಜ್ಯಪಾಲರ ನಡುವೆ ವಾಕ್ಸಮರ: ಬಿಜೆಪಿ ಪ್ರತಿಭಟನೆ!

ಪೂಜಾ ಸ್ಥಳಗಳನ್ನು ತೆರೆಯುವ ವಿಷಯವಾಗಿ ಅಕ್ಟೋಬರ್‌ ಆರಂಭದಲ್ಲಿ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ ಹಾಗೂ ರಾಜ್ಯಪಾಲ ಭಗತ್‌ ಸಿಂಗ್‌ ಕೊಶ್ಯರಿ ನಡುವೆ ಮಾತಿನ ಸಮರಕ್ಕೆ ಕಾರಣವಾಗಿತ್ತು. ಕೊಶ್ಯರಿ ಠಾಕ್ರೆ ಅವರನ್ನು ಜಾತ್ಯತೀತವಾಗಿದ್ದಾರೆಯೇ ಎಂದು ಪತ್ರದ ಮೂಲಕ ಪ್ರಶ್ನಿಸಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ