ಮುಂಬಯಿ: 2016ರಿಂದಲೂ ಬಿಜೆಪಿ ಜೊತೆ ವೈಮನಸ್ಸು ಹೊಂದಿದ್ದ ಮಹಾರಾಷ್ಟ್ರದ ಹಿರಿಯ ನಾಯಕ ಏಕನಾಥ್ ಖಡ್ಸೆ, ಕೊನೆಗೂ ಪಕ್ಷಕ್ಕೆ ರಾಜೀನಾಮೆ ನೀಡಿ ಹೊರಬಿದ್ದಿದ್ದಾರೆ.
ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರೊಂದಿಗಿನ ವೈಯಕ್ತಿಕ ವೈರತ್ವದ ಪರಿಣಾಮ, ಏಕನಾಥ್ ಖಡ್ಸೆ ಹಿಂದಿನ ಬಿಜೆಪಿ ನೇತೃತ್ವದ ಸಮ್ಮಿಶ್ರ ಸರ್ಕಾರದಲ್ಲಿ ಸಚಿವ ಸ್ಥಾನವಾನ್ನು ಕಳೆದುಕೊಂಡಿದ್ದರು.
ಏಕನಾಥ್ ಖಡ್ಸೆ ವಿರುದ್ಧ ಭ್ರಷ್ಟಾಚಾರ ಆರೋಪ ಕೇಳಿ ಬಂದ ಪರಿಣಾಮ, ದೇವೇಂದ್ರ ಫಡ್ನವೀಸ್ ಖಡ್ಸೆ ಅವರನ್ನು ಸಂಪುಟದಿಂದ ತೆಗೆದುಹಾಕುವ ನಿರ್ಣಯ ಕೈಗೊಂಡಿದ್ದರು. ಇದು ಇಬ್ಬರೂ ನಾಯಕರ ನಡುವೆ ವೈಮನಸ್ಸು ಬೆಳೆಯಲು ಕಾರಣವಾಗಿತ್ತು.
ಫಡ್ನವಿಸ್ ಸಂಪುಟದಲ್ಲಿ ಖಡ್ಸೆ ಖೇಲ್ ಖತಂ
ಖಡ್ಸೆ ವಿರುದ್ಧ ಅಕ್ರಮ ಭೂಮಿ ಖರೀದಿ ಹಾಗೂ ಭೂಗತ ಪಾತಕಿ ದಾವೂದ್ ಇಬ್ರಾಹಿಂ ಜೊತೆ ನಂಟು ಹೊಂದಿರುವ ಗಂಭೀರ ಆರೋಪ ಕೇಳಿ ಬಂದಿತ್ತು. ಪರಿಣಾಮವಾಗಿ ದೇವೇಂದ್ರ ಫಡ್ನವೀಸ್ ಖಡ್ಸೆ ಅವರನ್ನು ಸಂಪುಟದಿಂದ ಉಚ್ಛಾಟಿಸಿದ್ದರು.
ಇದೀಗ ಬಿಜೆಪಿ ತೊರೆದಿರುವ ಏಕನಾಥ್ ಖಡ್ಸೆ, ದೇವೇಂದ್ರ ಫಡ್ನವೀಸ್ ಅವರ ಕಾರಣದಿಂದಾಗಿ ನನ್ನ ರಾಜಕೀಯ ಜೀವನ ಹಾಳಾಯಿತು ಎಂದು ಕಿಡಿಕಾರಿದ್ದಾರೆ. ಕಳೆದ ನಾಲ್ಕು ವರ್ಷಗಳಿಂದ ನಾನು ಮಾನಸಿಕವಾಗಿ ಬಹಳ ಕುಗ್ಗಿದ್ದು, ಇದಕ್ಕೆ ಫಡ್ನವೀಸ್ ಸಾಧಿಸಿದ ದ್ವೇಷದ ರಾಜಕಾರಣವೇ ಕಾರಣ ಎಂದು ಖಡ್ಸೆ ಆರೋಪಿಸಿದ್ದಾರೆ.
ಇಷ್ಟೇ ಅಲ್ಲದೇ ನನ್ನ ವಿರುದ್ಧ ಸುಳ್ಳು ಅತ್ಯಾಚಾರ ಆರೋಪ ಹೊರಿಸಲು ಪಕ್ಷದ ಕೆಲವು ನಾಯಕರು ಪ್ರಯತ್ನಿಸಿದ್ದು, ಈ ಎಲ್ಲಾ ಬೆಳವಣಿಗೆಗಳಿಂದ ನೊಂದು ಬಿಜೆಪಿ ತೊರೆಯುತ್ತಿರುವುದಾಗಿ ಏಕನಾಥ್ ಖಡ್ಸೆ ಹೇಳಿದ್ದಾರೆ. ಸದ್ಯ ಬಿಜೆಪಿ ತೊರೆದಿರುವ ಏಕನಾಥ್ ಖಡ್ಸೆ, ಇದೇ ಶುಕ್ರವಾರ(ಅ.23) ಶರದ್ ಪವಾರ್ ನೇತೃತ್ವದ ಎನ್ಸಿಪಿ ಪಕ್ಷಕ್ಕೆ ಸೇರ್ಪಡೆಯಾಗಲಿದ್ದಾರೆ.
ದಾವೂದ್ಗೆ ಫೋನ್ ಕಾಲ್: ಆರೋಪ ಅಲ್ಲಗಳೆದ ಮಹಾರಾಷ್ಟ್ರ ಸಚಿವ ಏಕನಾಥ್ ಖಡ್ಸೆ
ಬಿಜೆಪಿ ಪ್ರತಿಕ್ರಿಯೆ:
ಇನ್ನು ಏಕನಾಥ್ ಖಡ್ಸೆ ಪಕ್ಷ ತೊರೆಯುತ್ತಿರುವ ನಿರ್ಧಾರದ ಕುರಿತು ಪ್ರತಿಕ್ರಿಯೆ ನೀಡಿರುವ ಮಹಾರಾಷ್ಟ್ರ ಬಿಜೆಪಿ ಘಟಕ, ಎನ್ಸಿಪಿ ಸೇರುತ್ತಿರುವ ಖಡ್ಸೆ ಅವರಿಗೆ ಒಳ್ಳೆಯದಾಗಲಿ ಎಂದು ಹಾರೈಸುವುದಾಗಿ ಹೇಳಿದೆ.
ಈ ಕುರಿತು ಮಾತನಾಡಿರುವ ಮಹಾರಾಷ್ಟ್ರ ಬಿಜೆಪಿ ಮುಖ್ಯಸ್ಥ ಚಂದ್ರಕಾಂತ್ ಪಾಟೀಲ್, ಖಡ್ಸೆ ರಾಜೀನಾಮೆಯನ್ನು ಅಂಗೀಕರಿಸಿರುವುದಾಗಿ ಸ್ಪಷ್ಟಪಡಿಸಿದರು. ಖಡ್ಸೆ ಎನ್ಸಿಪಿ ಸೇರುತ್ತಾರೆ ಎಂದು ಹೇಳಲಾಗುತ್ತಿದೆ. ಅದು ನಿಜವಾಗಿದ್ದರೆ ಅವರಿಗೆ ಪಕ್ಷದ ವತಿಯಿಂದ ಶುಭ ಹಾರೈಸುವುದಾಗಿ ಚಂದ್ರಕಾಂತ್ ಪಾಟೀಲ್ ಹೇಳಿದರು.
ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರೊಂದಿಗಿನ ವೈಯಕ್ತಿಕ ವೈರತ್ವದ ಪರಿಣಾಮ, ಏಕನಾಥ್ ಖಡ್ಸೆ ಹಿಂದಿನ ಬಿಜೆಪಿ ನೇತೃತ್ವದ ಸಮ್ಮಿಶ್ರ ಸರ್ಕಾರದಲ್ಲಿ ಸಚಿವ ಸ್ಥಾನವಾನ್ನು ಕಳೆದುಕೊಂಡಿದ್ದರು.
ಏಕನಾಥ್ ಖಡ್ಸೆ ವಿರುದ್ಧ ಭ್ರಷ್ಟಾಚಾರ ಆರೋಪ ಕೇಳಿ ಬಂದ ಪರಿಣಾಮ, ದೇವೇಂದ್ರ ಫಡ್ನವೀಸ್ ಖಡ್ಸೆ ಅವರನ್ನು ಸಂಪುಟದಿಂದ ತೆಗೆದುಹಾಕುವ ನಿರ್ಣಯ ಕೈಗೊಂಡಿದ್ದರು. ಇದು ಇಬ್ಬರೂ ನಾಯಕರ ನಡುವೆ ವೈಮನಸ್ಸು ಬೆಳೆಯಲು ಕಾರಣವಾಗಿತ್ತು.
ಫಡ್ನವಿಸ್ ಸಂಪುಟದಲ್ಲಿ ಖಡ್ಸೆ ಖೇಲ್ ಖತಂ
ಖಡ್ಸೆ ವಿರುದ್ಧ ಅಕ್ರಮ ಭೂಮಿ ಖರೀದಿ ಹಾಗೂ ಭೂಗತ ಪಾತಕಿ ದಾವೂದ್ ಇಬ್ರಾಹಿಂ ಜೊತೆ ನಂಟು ಹೊಂದಿರುವ ಗಂಭೀರ ಆರೋಪ ಕೇಳಿ ಬಂದಿತ್ತು. ಪರಿಣಾಮವಾಗಿ ದೇವೇಂದ್ರ ಫಡ್ನವೀಸ್ ಖಡ್ಸೆ ಅವರನ್ನು ಸಂಪುಟದಿಂದ ಉಚ್ಛಾಟಿಸಿದ್ದರು.
ಇದೀಗ ಬಿಜೆಪಿ ತೊರೆದಿರುವ ಏಕನಾಥ್ ಖಡ್ಸೆ, ದೇವೇಂದ್ರ ಫಡ್ನವೀಸ್ ಅವರ ಕಾರಣದಿಂದಾಗಿ ನನ್ನ ರಾಜಕೀಯ ಜೀವನ ಹಾಳಾಯಿತು ಎಂದು ಕಿಡಿಕಾರಿದ್ದಾರೆ. ಕಳೆದ ನಾಲ್ಕು ವರ್ಷಗಳಿಂದ ನಾನು ಮಾನಸಿಕವಾಗಿ ಬಹಳ ಕುಗ್ಗಿದ್ದು, ಇದಕ್ಕೆ ಫಡ್ನವೀಸ್ ಸಾಧಿಸಿದ ದ್ವೇಷದ ರಾಜಕಾರಣವೇ ಕಾರಣ ಎಂದು ಖಡ್ಸೆ ಆರೋಪಿಸಿದ್ದಾರೆ.
ಇಷ್ಟೇ ಅಲ್ಲದೇ ನನ್ನ ವಿರುದ್ಧ ಸುಳ್ಳು ಅತ್ಯಾಚಾರ ಆರೋಪ ಹೊರಿಸಲು ಪಕ್ಷದ ಕೆಲವು ನಾಯಕರು ಪ್ರಯತ್ನಿಸಿದ್ದು, ಈ ಎಲ್ಲಾ ಬೆಳವಣಿಗೆಗಳಿಂದ ನೊಂದು ಬಿಜೆಪಿ ತೊರೆಯುತ್ತಿರುವುದಾಗಿ ಏಕನಾಥ್ ಖಡ್ಸೆ ಹೇಳಿದ್ದಾರೆ. ಸದ್ಯ ಬಿಜೆಪಿ ತೊರೆದಿರುವ ಏಕನಾಥ್ ಖಡ್ಸೆ, ಇದೇ ಶುಕ್ರವಾರ(ಅ.23) ಶರದ್ ಪವಾರ್ ನೇತೃತ್ವದ ಎನ್ಸಿಪಿ ಪಕ್ಷಕ್ಕೆ ಸೇರ್ಪಡೆಯಾಗಲಿದ್ದಾರೆ.
ದಾವೂದ್ಗೆ ಫೋನ್ ಕಾಲ್: ಆರೋಪ ಅಲ್ಲಗಳೆದ ಮಹಾರಾಷ್ಟ್ರ ಸಚಿವ ಏಕನಾಥ್ ಖಡ್ಸೆ
ಬಿಜೆಪಿ ಪ್ರತಿಕ್ರಿಯೆ:
ಇನ್ನು ಏಕನಾಥ್ ಖಡ್ಸೆ ಪಕ್ಷ ತೊರೆಯುತ್ತಿರುವ ನಿರ್ಧಾರದ ಕುರಿತು ಪ್ರತಿಕ್ರಿಯೆ ನೀಡಿರುವ ಮಹಾರಾಷ್ಟ್ರ ಬಿಜೆಪಿ ಘಟಕ, ಎನ್ಸಿಪಿ ಸೇರುತ್ತಿರುವ ಖಡ್ಸೆ ಅವರಿಗೆ ಒಳ್ಳೆಯದಾಗಲಿ ಎಂದು ಹಾರೈಸುವುದಾಗಿ ಹೇಳಿದೆ.
ಈ ಕುರಿತು ಮಾತನಾಡಿರುವ ಮಹಾರಾಷ್ಟ್ರ ಬಿಜೆಪಿ ಮುಖ್ಯಸ್ಥ ಚಂದ್ರಕಾಂತ್ ಪಾಟೀಲ್, ಖಡ್ಸೆ ರಾಜೀನಾಮೆಯನ್ನು ಅಂಗೀಕರಿಸಿರುವುದಾಗಿ ಸ್ಪಷ್ಟಪಡಿಸಿದರು. ಖಡ್ಸೆ ಎನ್ಸಿಪಿ ಸೇರುತ್ತಾರೆ ಎಂದು ಹೇಳಲಾಗುತ್ತಿದೆ. ಅದು ನಿಜವಾಗಿದ್ದರೆ ಅವರಿಗೆ ಪಕ್ಷದ ವತಿಯಿಂದ ಶುಭ ಹಾರೈಸುವುದಾಗಿ ಚಂದ್ರಕಾಂತ್ ಪಾಟೀಲ್ ಹೇಳಿದರು.