ಆ್ಯಪ್ನಗರ

ಒಂದೇ ಗಂಟೆಯಲ್ಲಿ ಯು-ಟರ್ನ್: 25 ವಿಮಾನ ಹಾರಾಟಕ್ಕೆ ಸೈ ಎಂದ ಉದ್ಧವ್!

ಮೇ. 31ರವರೆಗೆ ದೇಶೀಯ ವಿಮಾನ ಸಂಚಾರ ಬೇಡ ಎಂದಿದ್ದ ಮಹಾರಾಷ್ಟ್ರ ಕೇವಲ ಒಂದೇ ಗಂಟೆಯಲ್ಲಿ ಯು-ಟರ್ನ್ ಹೊಡೆದಿದೆ. ಇದೀಗ ರಾಜಧಾನಿ ಮುಂಬೈಗೆ ದಿನಕ್ಕೆ 25 ವಿಮಾನಗಳ ಸಂಚಾರಕ್ಕೆ ಅನುಮತಿ ನೀಡಿದೆ.

Vijaya Karnataka Web 24 May 2020, 7:26 pm
ಮುಂಬೈ: ಮಹಾರಾಷ್ಟ್ರದಲ್ಲಿ ಕೊರೊನಾ ವೈರಸ್ ಹಾವಳಿ ಹೆಚ್ಚಾಗಿರುವ ಕಾರಣ ಮೇ. 31ರವರೆಗೆ ದೇಶೀಯ ವಿಮಾನ ಸಂಚಾರ ಬೇಡ ಎಂದಿದ್ದ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ನೇತೃತ್ವದ ಸಮ್ಮಿಶ್ರ ಸರ್ಕಾರ, ಕೇವಲ ಒಂದೇ ಗಂಟೆಯಲ್ಲಿ ಯು-ಟರ್ನ್ ಹೊಡೆದಿದೆ.
Vijaya Karnataka Web Domestic Flights
ಸಂಗ್ರಹ ಚಿತ್ರ


ಮೇ. 31ರವೆರೆಗೆ ವಿಮಾನ ಹಾರಾಟಕ್ಕೆ ಅನುಮತಿ ನೀಡುವುದು ಕಷ್ಟ ಎಂದಿದ್ದ ಮಹಾರಾಷ್ಟ್ರ ಸರ್ಕಾರ, ಇದೀಗ ರಾಜಧಾನಿ ಮುಂಬೈಗೆ ದಿನಕ್ಕೆ 25 ವಿಮಾನಗಳ ಸಂಚಾರಕ್ಕೆ ಅನುಮತಿ ನೀಡಿದೆ.

ದಿನಕ್ಕೆ ರಾಜ್ಯದ ರಾಜಧಾನಿ ಮುಂಬೈಗೆ 25 ವಿಮಾನಗಳ ಆಗಮನ ಹಾಗೂ ಮುಂಬೈನಿಂದ 25 ವಿಮಾನಗಳ ನಿರ್ಗಮನಕ್ಕೆ ಉದ್ಧವ್ ಠಾಕ್ರೆ ಸರ್ಕಾರ ಅನುಮತಿ ನೀಡಿದೆ.


ಕೇಂದ್ರ ವಿಮಾನಯಾನ ಸಚಿವ ಹರ್ದೀಪ್ ಸಿಂಗ್ ಪುರಿ ಅವರೊಂದಿಗೆ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ದೂರವಾಣಿಯಲ್ಲಿ ಮಾತನಾಡಿದ ಬಳಿಕ ಈ ನಿರ್ಧಾರಕ್ಕೆ ಬರಲಾಗಿದೆ ಎಂದು ಸಚಿವ ನವಾಬ್ ಮಲಿಕ್ ಸ್ಪಷ್ಟಪಡಿಸಿದ್ದಾರೆ.

ದೇಶೀಯ ವಿಮಾನ ಸಂಚಾರಕ್ಕೆ 'ನೋ' ಎಂದ ಮಹಾರಾಷ್ಟ್ರ, ಪ.ಬಂಗಾಳ: ಕಾರಣ?

ಮಹಾರಾಷ್ಟ್ರದಲ್ಲಿ ಕೊರೊನಾ ವೈರಸ್ ಹಾವಳಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮೇ. 31ರ ಬಳಿಕವೂ ಲಾಕ್‌ಡೌನ್ ವಿಸ್ತರಿಸುವ ಕುರಿತು ಮಾತನಾಡಿದ್ದ ಉದ್ಧವ್ ಠಾಕ್ರೆ, ದೇಶೀಯ ವಿಮಾನ ಸಂಚಾರ ಬೇಡ ಎಂದು ಈ ಹಿಂದೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ