ಆ್ಯಪ್ನಗರ

ಪೌರತ್ವಕ್ಕೆ ವೋಟರ್‌ ಐಡಿ ಪುರಾವೆಯೇ ಹೊರತು ಆಧಾರ್‌ ಅಲ್ಲವೆಂದ ಕೋರ್ಟ್‌

ಪೌರತ್ವ ಖಾತ್ರಿಗೆ ಆಧಾರ್‌, ಪಡಿತರ ಚೀಟಿ, ಪ್ಯಾನ್‌ ಕಾರ್ಡ್‌, ವಾಹನ ಚಾಲನಾ ಪರವಾನಗಿ ಸೂಕ್ತ ದಾಖಲೆಯಾಗಲಾರದು ಎಂದು ಸ್ಪಷ್ಟಪಡಿಸಿರುವ ಕೋರ್ಟ್‌, ಬಾಂಗ್ಲಾದೇಶದ ಅಕ್ರಮ ವಲಸಿಗರೆಂಬ ಆರೋಪದಲ್ಲಿ ಬಂಧನಕ್ಕೊಳಗಾಗಿದ್ದ ದಂಪತಿಯನ್ನು ಪ್ರಕರಣದಿಂದ ಖುಲಾಸೆಗೊಳಿಸಿದೆ.

Vijaya Karnataka Web 16 Feb 2020, 6:59 am
ಮುಂಬಯಿ: ಮತದಾರರ ಚೀಟಿಯು ಪೌರತ್ವಕ್ಕೆ ಮಹತ್ವದ ಪುರಾವೆಯಾಗಿದೆ ಎಂದು ಹೇಳುವ ಮೂಲಕ ಮುಂಬಯಿ ಸ್ಥಳೀಯ ನ್ಯಾಯಾಲಯ, ಬಾಂಗ್ಲಾದೇಶದ ಅಕ್ರಮ ವಲಸಿಗರೆಂಬ ಆರೋಪದಲ್ಲಿ ಬಂಧನಕ್ಕೊಳಗಾಗಿದ್ದ ದಂಪತಿಯನ್ನು ಪ್ರಕರಣದಿಂದ ಖುಲಾಸೆಗೊಳಿಸಿದೆ. ಪೌರತ್ವ ತಿದ್ದುಪಡಿ ಕಾಯಿದೆಯ ಸದ್ದಿನ ನಡುವೆ ಕೋರ್ಟ್‌ ಈ ತೀರ್ಪು ನೀಡಿದ್ದು, ಪೌರತ್ವ ಖಾತ್ರಿಗೆ ಆಧಾರ್‌, ಪಡಿತರ ಚೀಟಿ, ಪ್ಯಾನ್‌ ಕಾರ್ಡ್‌, ವಾಹನ ಚಾಲನಾ ಪರವಾನಗಿ ಸೂಕ್ತ ದಾಖಲೆಯಾಗಲಾರದು ಎಂದು ಸ್ಪಷ್ಟಪಡಿಸಿದೆ.
Vijaya Karnataka Web Voter ID


''ಜನನ ಪ್ರಮಾಣ ಪತ್ರ, ನಿವಾಸ ಪ್ರಮಾಣ ಪತ್ರ, ಪಾಸ್‌ಪೋರ್ಟ್‌ ಹೀಗೆ ಹಲವು ದಾಖಲೆಗಳನ್ನು ಯಾವುದೇ ವ್ಯಕ್ತಿಯ ಮೂಲವನ್ನು ಖಾತರಿಪಡಿಸಲು ನಂಬಬಹುದಾಗಿದೆ. ಅದರಲ್ಲೂ ಮತದಾರ ಚೀಟಿಯನ್ನೂ ಪೌರತ್ವದ ಖಾತರಿಯಾಗಿ ದಾಖಲಿಸಬಹುದು. ಮತದಾರ ಚೀಟಿಗೆ ಅರ್ಜಿ ಸಲ್ಲಿಸುವ ವೇಳೆ ವ್ಯಕ್ತಿಯು ಜನಪ್ರತಿನಿಧಿ ಕಾಯಿದೆಯ ನಮೂನೆ 6ರ ಅನುಸಾರ ತಾನು ಭಾರತದ ಪ್ರಜೆ ಎಂದು ಸಂಬಂಧಿತ ಪ್ರಾಧಿಕಾರದ ಮುಂದೆ ಘೋಷಿಸಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ವೋಟರ್‌ ಐಡಿಯನ್ನೂ ಪೌರತ್ವದ ದಾಖಲೆಯಾಗಿ ಪರಿಗಣಿಸಬಹುದಾಗಿದೆ,'' ಎಂದು ಕೋರ್ಟ್‌ ಹೇಳಿದೆ.

2017ರಲ್ಲಿ ಯಾವುದೇ ದಾಖಲೆಗಳಿಲ್ಲದೇ ಬಾಂಗ್ಲಾದೇಶದಿಂದ ಅಕ್ರಮವಾಗಿ ಬಂದು ಮುಂಬಯಿನಲ್ಲಿ ವಾಸವಿದ್ದಾರೆಂದು ಆರೋಪಿಸಿ ಅಬ್ಬಾಸ್‌ ಶೇಖ್‌ (45), ರಬಿಯಾ ಖತುನ್‌ ಶೇಖ್‌ (40) ಅವರನ್ನು ಬಂಧಿಸಲಾಗಿತ್ತು. ಈ ದಂಪತಿ ಕೋರ್ಟ್‌ ಮುಂದೆ ತಾವು ಭಾರತೀಯ ಪ್ರಜೆಗಳು ಎಂದು ಸಾರುವ ಮೂಲ ದಾಖಲೆಗಳನ್ನು ಸಲ್ಲಿಸಿದ್ದರು. ಆದರೆ ನ್ಯಾಯಾಲಯದಲ್ಲಿ ಹಾಜರುಪಡಿಸಿದ ಈ ದಾಖಲೆಗಳು ಅಸಲಿಯಲ್ಲ ಎಂದು ಪ್ರಾಸಿಕ್ಯೂಷನ್‌ ವಾದಿಸಿತ್ತಾದರೂ ಅದನ್ನು ಸಾಬೀತುಪಡಿಸುವಂತಹ ಯಾವುದೇ ಪೂರಕ ದಾಖಲೆಗಳನ್ನು ಸಲ್ಲಿಸುವಲ್ಲಿ ವಿಫಲವಾಗಿದ್ದರಿಂದ ಕೋರ್ಟ್‌ ಆರೋಪಿಗಳನ್ನು ಖುಲಾಸೆಗೊಳಿಸಿತು.

ಸಿಎಎ ವಿರೋಧಿ ಬಾಡಿಗೆದಾರನನ್ನು ಪೊಲೀಸರಿಗೆ ಒಪ್ಪಿಸಿದ್ದ ಕ್ಯಾಬ್‌ ಚಾಲಕನಿಗೆ ಬಿಜೆಪಿ ಸನ್ಮಾನ!

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ