ಆ್ಯಪ್ನಗರ

'ಟೇಕನ್' ಸಿನಿಮಾ ಮಾದರಿ ಘಟನೆ: ಅಪಹೃತ ಮಗಳನ್ನು ರಕ್ಷಿಸಿದ ದಿನಗೂಲಿ ಕಾರ್ಮಿಕ

Mumbai Kidnap: ಮುಂಬಯಿಯ ತನ್ನ ಮನೆಯಿಂದ ಅಪಹರಣಗೊಂಡಿದ್ದ ತನ್ನ 12 ವರ್ಷದ ಮಗಳನ್ನು ದಿನಗೂಲಿ ಕಾರ್ಮಿಕರೊಬ್ಬರು ಪೊಲೀಸರ ಸಹಾಯದಿಂದ ಉತ್ತರ ಪ್ರದೇಶದಲ್ಲಿ ರಕ್ಷಿಸಿದ ಸಿನಿಮೀಯ ಮಾದರಿ ಘಟನೆ ನಡೆದಿದೆ.

Edited byಅಮಿತ್ ಎಂ.ಎಸ್ | Vijaya Karnataka Web 10 Sep 2022, 8:05 pm

ಹೈಲೈಟ್ಸ್‌:

  • ಮುಂಬಯಿಯ ಬಾಂದ್ರಾದಿಂದ ಅಪಹರಣಗೊಂಡಿದ್ದ ಬಾಲಕಿ
  • ಶಾಪಿಂಗ್ ನೆಪದಲ್ಲಿ ಬಾಲಕಿಯನ್ನು ಕರೆದೊಯ್ದಿದ್ದ ಆರೋಪಿ
  • ಉತ್ತರ ಪ್ರದೇಶದಲ್ಲಿದ್ದ ಆರೋಪಿಯನ್ನು ಪತ್ತೆ ಮಾಡಿದ ತಂದೆ

ಹೈಲೈಟ್ಸ್‌ ಮಾತ್ರವೇ ಓದಲು ಆ್ಯಪ್‌ ಡೌನ್‌ಲೋಡ್‌ ಮಾಡಿ
Vijaya Karnataka Web kidnap fb
ಮುಂಬಯಿ: ಮಹಾರಾಷ್ಟ್ರದಲ್ಲಿ ಅಪಹರಣಗೊಂಡಿದ್ದ 12 ವರ್ಷದ ಬಾಲಕಿಯ ಪ್ರಕರಣ ಸಿನಿಮೀಯ ರೀತಿಯಲ್ಲಿ ಸುಖಾಂತ್ಯ ಕಂಡಿದೆ. ದಿನಗೂಲಿ ಕಾರ್ಮಿಕನೊಬ್ಬ ತನ್ನ ಮಗಳನ್ನು ಕಾಪಾಡಿದ ಈ ಘಟನೆ ಪೊಲೀಸರನ್ನೂ ಚಕಿತಗೊಳಿಸಿದೆ.
ಮುಂಬಯಿಯ ಬಾಂದ್ರಾ ಉಪನಗರದ ತನ್ನ ಮನೆಯಿಂದ ಅಪಹರಿಸಿ ಉತ್ತರ ಪ್ರದೇಶಕ್ಕೆ ಸಾಗಿಸಲಾಗಿದ್ದ ತನ್ನ 12 ವರ್ಷದ ಮಗಳನ್ನು ದಿನಗೂಲಿ ಕಾರ್ಮಿಕ ರಕ್ಷಿಸಿದ್ದಾರೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ.
ನಾಪತ್ತೆಯಾಗಿದ್ದ ಬಾಲಕಿ 9 ವರ್ಷದ ಬಳಿಕ ತಾಯಿಯ ಮಡಿಲಿಗೆ: ಮನಮಿಡಿಯುವ ಕಥೆ

ಬಾಂದ್ರಾದ ಜವಳಿ ಉತ್ಪಾದನಾ ಘಟಕದಲ್ಲಿ ನೌಕರನಾಗಿದ್ದ 24 ವರ್ಷದ ಆರೋಪಿ ಶಾಹಿದ್ ಖಾನ್ ಮತ್ತು ಸಂತ್ರಸ್ತ ಬಾಲಕಿಯ ಕುಟುಂಬ ಬಾಂದ್ರಾದ ಒಂದೇ ಸ್ಥಳದಲ್ಲಿ ವಾಸವಾಗಿದ್ದರು ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಸೆಪ್ಟೆಂಬರ್ 4ರಂದು ತನ್ನ ಜತೆ ಶಾಪಿಂಗ್ ಬರುವಂತೆ ಬಾಲಕಿಗೆ ಆರೋಪಿ ಕೇಳಿದ್ದ ಎನ್ನಲಾಗಿದೆ. ಆದರೆ ಆತ ಶಾಪಿಂಗ್ ಬದಲಾಗಿ ಆಕೆಯನ್ನು ಕುರ್ಲಾಗೆ ಕರೆದೊಯ್ದಿದ್ದ. ಅಲ್ಲಿಂದ ಸೂರತ್‌ ಬಸ್ ಹತ್ತಿದ್ದ. ನಂತರ ದಿಲ್ಲಿಗೆ ರೈಲಿನಲ್ಲಿ ಕರೆದೊಯ್ದಿದ್ದ ಎಂದು ತಿಳಿಸಿದ್ದಾರೆ.

ಮನೆಯೊಂದ ಹೊರಗೆ ಹೋಗುವ ಮುನ್ನ ಬಾಲಕಿಯು ತನ್ನ ತಾಯಿಗೆ ಬೇರೇನೋ ನೆಪ ಹೇಳಿದ್ದಳು. ಆಕೆ ವಾಪಸ್ ಬಾರದೆ ಇದ್ದಾಗ, ಪೋಷಕರು ಪೊಲೀಸರಿಗೆ ದೂರು ನೀಡಿದ್ದರು. ಪೊಲೀಸರು ಅಪಹರಣ ಪ್ರಕರಣ ದಾಖಲಿಸಿಕೊಂಡಿದ್ದರು.
Bhatkal Kidnapping Case: ಅಜ್ಜನಿಂದಲೇ ಮೊಮ್ಮಗನ ಕಿಡ್ನ್ಯಾಪ್..! ಭಟ್ಕಳವನ್ನೇ ಬೆಚ್ಚಿಬೀಳಿಸಿದ್ದ ಪ್ರಕರಣ ಸುಖಾಂತ್ಯ

ದಿನಗೂಲಿ ಕಾರ್ಮಿಕನಾಗಿರುವ ಬಾಲಕಿಯ ತಂದೆ, ಅಕ್ಕಪಕ್ಕದವರು ಮತ್ತು ಸ್ಥಳೀಯರಲ್ಲಿ ವಿಚಾರಿಸಿದ ಬಳಿಕ ಪೊಲೀಸರ ಸಹಾಯದೊಂದಿಗೆ ಆರೋಪಿಯನ್ನು ಪತ್ತೆ ಮಾಡಿದ್ದಾರೆ. ಈ ಘಟನೆ ಲಿಯಾಮ್ ನೀಸನ್ ಅವರ 'ಟೇಕನ್' ಸಿನಿಮಾದ ಕಥೆಯಂತೆಯೇ ಇದೆ.

ಆರೋಪಿಯು ಅಲಿಗಡ ಸಮೀಪದ ಐಟ್ರೋಲಿ ಗ್ರಾಮದಿಂದ ಬಂದವನು ಎನ್ನುವುದನ್ನು ತಿಳಿದುಕೊಂಡ ಬಾಲಕಿಯ ತಂದೆ, ಆರೋಪಿಯ ಕುಟುಂಬದವರನ್ನು ಸಂಪರ್ಕಿಸಿ, ಸ್ಥಳೀಯ ಪೊಲೀಸರು ಮತ್ತು ಗ್ರಾಮಸ್ಥರ ಸಹಾಯದಿಂದ ಆಕೆಯನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಹುಬ್ಬಳ್ಳಿಯಲ್ಲಿ ಆನ್ ಲೈನ್ ಗೇಮ್ ನಲ್ಲಿ 11 ಕೋಟಿ ಗೆದ್ದ ವಿದ್ಯಾರ್ಥಿಯ ಅಪಹರಣ; ಪ್ರಕರಣ ಸುಖಾಂತ್ಯ!

"ಸೂರತ್‌ಗೆ ತೆರಳಿದ ಬಸ್‌ನಲ್ಲಿ ಮತ್ತಿನಲ್ಲಿದ್ದ ಆರೋಪಿ ತನ್ನ ಮೇಲೆ ಅತ್ಯಾಚಾರ ಎಸಗಿದ್ದಾಗಿ ನನ್ನ ಮಗಳು ತಿಳಿಸಿದ್ದಾಳೆ" ಎಂದು ತಂದೆ ಹೇಳಿದ್ದಾರೆ. ಪೋಕ್ಸೋ ಕಾಯ್ದೆಯ ವಿವಿಧ ಸೆಕ್ಷನ್‌ಗಳ ಅಡಿ ಎಫ್‌ಐಆರ್ ದಾಖಲಿಸಲು ಅವರು ಒತ್ತಾಯಿಸಿದ್ದಾರೆ.

ಐಪಿಸಿ ಸೆಕ್ಷನ್ 363ರ (ಅಪಹರಣ) ಅಡಿ ಎಫ್‌ಐಆರ್ ದಾಖಲಿಸಲಾಗಿದೆ. ಬಾಲಕಿಯ ಹೇಳಿಕೆ ದಾಖಲು ಮಾಡಿದ ಬಳಿಕ ಮತ್ತಷ್ಟು ಸೆಕ್ಷನ್‌ಗಳನ್ನು ಅಳವಡಿಸಲಾಗುತ್ತದೆ ಎಂದು ನಿರ್ಮಲ್ ನಗರ ಪೊಲೀಸ್ ಠಾಣೆಯ ಅಧಿಕಾರಿಗಳು ತಿಳಿಸಿದ್ದಾರೆ.
ಲೇಖಕರ ಬಗ್ಗೆ
ಅಮಿತ್ ಎಂ.ಎಸ್
ವಿಜಯ ಕರ್ನಾಟಕದ ಡಿಜಿಟಲ್ ವಿಭಾಗದಲ್ಲಿ ಪತ್ರಕರ್ತ. 2009ರಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯವಾಗಿದ್ದಾರೆ. ದಿನಪತ್ರಿಕೆಗಳು ಮತ್ತು ವೆಬ್‌ ಪೋರ್ಟಲ್‌ಗಳಲ್ಲಿ ವರದಿಗಾರಿಕೆ, ಸಿನಿಮಾ ವರದಿಗಾರಿಕೆ, ಡೆಸ್ಕ್ ಹಾಗೂ ಜಿಲ್ಲಾ ಕರೆಸ್ಪಾಂಡೆಂಟ್ ಆಗಿ ಕೆಲಸ ಮಾಡಿದ ಅನುಭವ ಇವರಿಗಿದೆ. ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಸುದ್ದಿಗಳು ಪ್ರಮುಖ ಆಸಕ್ತಿಯ ವಿಭಾಗಗಳು. ಮಾನವಾಸಕ್ತಿಯ ಹಾಗೂ ಸ್ಫೂರ್ತಿದಾಯಕ ಕಥನಗಳನ್ನು ನಿರೂಪಿಸುವುದು ವೃತ್ತಿಯಲ್ಲಿನ ನೆಚ್ಚಿನ ಸಂಗತಿ. ಪ್ರವಾಸ, ಕ್ರಿಕೆಟ್, ಓದು, ಕೃಷಿ ಇತರೆ ಇವರ ಆಸಕ್ತಿ ಮತ್ತು ಹವ್ಯಾಸಗಳು.... ಇನ್ನಷ್ಟು ಓದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ