ಗೆಳತಿಯಿಂದಲೇ ಹನಿಟ್ರ್ಯಾಪ್ ಮಾಡಿಸಿ ಆರೋಪಿ ಬಂಧನ..! ಪೊಲೀಸರ ಕ್ರಿಮಿನಲ್ ಮೈಂಡ್ಗೆ ದಶಕದ ಕಳ್ಳ ಬಲೆಗೆ
ಆರೋಪಿಗಳನ್ನು ಬಲೆಗೆ ಬೀಳಿಸಲು ಪೊಲೀಸರು ಕೂಡ ಒಂದೊಂದ್ ಸಲ ಹನಿಟ್ರ್ಯಾಪ್ನಂತಹ ಕ್ರಿಮಿನಲ್ ದಾರಿಗಳನ್ನು ಬಳಸಿಕೊಳ್ಳುತ್ತಾರೆ ಎಂಬುದನ್ನು ಮುಂಬಯಿ ಪೊಲೀಸರು ಸಾಬೀತುಪಡಿಸಿದ್ದಾರೆ. ದರೋಡೆಯ ಆರೋಪಿಯನ್ನು ಆತನ ಗೆಳತಿಯಿಂದಲೇ ಹನಿಟ್ರ್ಯಾಪ್ ಮಾಡುವ ಮೂಲಕ ಬಂಧಿಸಿದ್ದಾರೆ.
TNN 14 Sep 2020, 6:05 pm
ಮುಂಬಯಿ: ಪೊಲೀಸರು ಕೂಡ ಒಂದೊಂದ್ ಸಲ ಆರೋಪಿಗಳನ್ನು ಬಲೆಗೆ ಬೀಳಿಸಲು ಹನಿಟ್ರ್ಯಾಪ್ನಂತಹ ಕ್ರಿಮಿನಲ್ ದಾರಿಗಳನ್ನು ಬಳಸಿಕೊಳ್ಳುತ್ತಾರೆ ಎಂಬುದು ಮತ್ತೊಂದು ಬಾರಿ ಸಾಬೀತಾಗಿದೆ. ಹೌದು, ಮುಂಬೈ ಪೊಲೀಸರು ಕಳೆದೊಂದು ದಶಕದಲ್ಲಿ ಕನಿಷ್ಠ 22 ಮನೆಗಳನ್ನು ದರೋಡೆ ಮಾಡಿರುವ ಪ್ರಕರಣಕ್ಕೆ ಬೇಕಾಗಿದ್ದ ಆರೋಪಿಯನ್ನು ಆತನ ಗೆಳತಿಯಿಂದಲೇ ಹನಿಟ್ರ್ಯಾಪ್ ಮಾಡುವ ಮೂಲಕ ಬಂಧಿಸಿದ್ದಾರೆ.
ಮುಂಬೈನ ವಡಾಲಾದ ಆಂಟೋಪ್ ಹಿಲ್ನಲ್ಲಿ ವಾಸಿಸುತ್ತಿರುವ ಆರೋಪಿ ಮಲಿಕ್ ಅಲಿಯಾಸ್ ಅಜೀಜ್ ಸಯ್ಯದ್ (32) ಎಂಬಾತನನ್ನು ಹನಿಟ್ರ್ಯಾಪ್ ಮೂಲಕ ಪೊಲೀಸರು ಬಂಧಿಸಿದ್ದಾರೆ. ಮನೆಯೊಂದರ ಬಳಿ ದೊರೆತ ವಿಡಿಯೋ ತುಣುಕಿನ ಆಧಾರದ ಮೇಲೆ ಆರೋಪಿಯನ್ನು ಪೊಲೀಸರು ಗುರುತಿಸಿದ್ದರು.
ಪೊಲೀಸರಿಗೆ ಆರೋಪಿಯ ಮೊಬೈಲ್ ಸಂಖ್ಯೆ ಸಿಕ್ಕರೂ ಅದನ್ನು ಸ್ವಿಚ್ ಆಫ್ ಮಾಡಲಾಗಿದೆ. ಪೊಲೀಸ್ ಇನ್ಫರ್ಮರ್ ಮೂಲಕ ನಲಸೋಪರಾದಲ್ಲಿ ಉಳಿದುಕೊಂಡಿರುವ ಅವರ ಗೆಳತಿಯ ಮೊಬೈಲ್ ಸಂಖ್ಯೆಯನ್ನು ನಾವು ಪಡೆದುಕೊಂಡೇವು ಎಂದು ಧಾರಾವಿ ಪೊಲೀಸ್ ಠಾಣೆಯ ಸಬ್ಇನ್ಸ್ಪೆಕ್ಟರ್ ಅಂಜಲಿ ವಾಣಿ ಹೇಳಿದ್ದಾರೆ.
ಸಿಎಂ ಮುಖವಾಡ ಕಳಚಿಟ್ಟು ವಿರೋಧ ಪಕ್ಷಗಳ ಬಗ್ಗೆ ಮಾತನಾಡ್ತೇನೆ- ಬಿಜೆಪಿಗೆ ಉದ್ಧವ್ ಠಾಕ್ರೆ ಎಚ್ಚರಿಕೆ
ಹಿರಿಯ ಇನ್ಸ್ಪೆಕ್ಟರ್ ರಮೇಶ್ ನಂಗ್ರೆ ಆರೋಪಿಯ ಗೆಳತಿಯನ್ನು ಪೊಲೀಸ್ ಠಾಣೆಗೆ ಕರೆತರಲು ತಂಡವೊಂದನ್ನು ಕಳುಹಿಸಿದರು. ಪೊಲೀಸರು ಅವಳನ್ನು ಅವನೊಂದಿಗೆ ಮಾತನಾಡಲು ಮತ್ತು ದಾದರ್ನ ಪ್ಲಾಜಾ ಸಿನೆಮಾ ಬಳಿ ಭೇಟಿಯಾಗಲು ಹೇಳುವಂತೆ ಸೂಚಿಸಿದರು. ಆರೋಪಿಗಾಗಿ ಕಾಯುತ್ತಿದ್ದ ಪೊಲೀಸ್ ತಂಡ ಸಯ್ಯದ್ ಅಲ್ಲಿಗೆ ಬರುತ್ತಿದ್ದಂತೆ ಅವನನ್ನು ಬಂಧಿಸಿತು.
ಕಂಗನಾಗೆ ಬಿಜೆಪಿ ಬೆಂಬಲ ದುರದೃಷ್ಟಕರ: ಸಂಜಯ್ ರಾವತ್..! ಸಂಸದರ ಟೀಕೆಗೆ ನಟಿಯಿಂದ ಖಡಕ್ ಪ್ರತಿಕ್ರಿಯೆ
ಆರೋಪಿ ಮಲಿಕ್ನಿಂದ ಎರಡು ಚಿನ್ನದ ಚೈನ್ಗಳು ಮತ್ತು ಇತರ ಆಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮುಂಬೈನ ವಡಾಲಾದ ಆಂಟೋಪ್ ಹಿಲ್ನಲ್ಲಿ ವಾಸಿಸುತ್ತಿರುವ ಆರೋಪಿ ಮಲಿಕ್ ಅಲಿಯಾಸ್ ಅಜೀಜ್ ಸಯ್ಯದ್ (32) ಎಂಬಾತನನ್ನು ಹನಿಟ್ರ್ಯಾಪ್ ಮೂಲಕ ಪೊಲೀಸರು ಬಂಧಿಸಿದ್ದಾರೆ. ಮನೆಯೊಂದರ ಬಳಿ ದೊರೆತ ವಿಡಿಯೋ ತುಣುಕಿನ ಆಧಾರದ ಮೇಲೆ ಆರೋಪಿಯನ್ನು ಪೊಲೀಸರು ಗುರುತಿಸಿದ್ದರು.
ಪೊಲೀಸರಿಗೆ ಆರೋಪಿಯ ಮೊಬೈಲ್ ಸಂಖ್ಯೆ ಸಿಕ್ಕರೂ ಅದನ್ನು ಸ್ವಿಚ್ ಆಫ್ ಮಾಡಲಾಗಿದೆ. ಪೊಲೀಸ್ ಇನ್ಫರ್ಮರ್ ಮೂಲಕ ನಲಸೋಪರಾದಲ್ಲಿ ಉಳಿದುಕೊಂಡಿರುವ ಅವರ ಗೆಳತಿಯ ಮೊಬೈಲ್ ಸಂಖ್ಯೆಯನ್ನು ನಾವು ಪಡೆದುಕೊಂಡೇವು ಎಂದು ಧಾರಾವಿ ಪೊಲೀಸ್ ಠಾಣೆಯ ಸಬ್ಇನ್ಸ್ಪೆಕ್ಟರ್ ಅಂಜಲಿ ವಾಣಿ ಹೇಳಿದ್ದಾರೆ.
ಸಿಎಂ ಮುಖವಾಡ ಕಳಚಿಟ್ಟು ವಿರೋಧ ಪಕ್ಷಗಳ ಬಗ್ಗೆ ಮಾತನಾಡ್ತೇನೆ- ಬಿಜೆಪಿಗೆ ಉದ್ಧವ್ ಠಾಕ್ರೆ ಎಚ್ಚರಿಕೆ
ಹಿರಿಯ ಇನ್ಸ್ಪೆಕ್ಟರ್ ರಮೇಶ್ ನಂಗ್ರೆ ಆರೋಪಿಯ ಗೆಳತಿಯನ್ನು ಪೊಲೀಸ್ ಠಾಣೆಗೆ ಕರೆತರಲು ತಂಡವೊಂದನ್ನು ಕಳುಹಿಸಿದರು. ಪೊಲೀಸರು ಅವಳನ್ನು ಅವನೊಂದಿಗೆ ಮಾತನಾಡಲು ಮತ್ತು ದಾದರ್ನ ಪ್ಲಾಜಾ ಸಿನೆಮಾ ಬಳಿ ಭೇಟಿಯಾಗಲು ಹೇಳುವಂತೆ ಸೂಚಿಸಿದರು. ಆರೋಪಿಗಾಗಿ ಕಾಯುತ್ತಿದ್ದ ಪೊಲೀಸ್ ತಂಡ ಸಯ್ಯದ್ ಅಲ್ಲಿಗೆ ಬರುತ್ತಿದ್ದಂತೆ ಅವನನ್ನು ಬಂಧಿಸಿತು.
ಕಂಗನಾಗೆ ಬಿಜೆಪಿ ಬೆಂಬಲ ದುರದೃಷ್ಟಕರ: ಸಂಜಯ್ ರಾವತ್..! ಸಂಸದರ ಟೀಕೆಗೆ ನಟಿಯಿಂದ ಖಡಕ್ ಪ್ರತಿಕ್ರಿಯೆ
ಆರೋಪಿ ಮಲಿಕ್ನಿಂದ ಎರಡು ಚಿನ್ನದ ಚೈನ್ಗಳು ಮತ್ತು ಇತರ ಆಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.