ಮುಂಬಯಿ: ನಗರ ಪೊಲೀಸ್ ಪಡೆಯಲ್ಲಿ ಅಸಮಾಧಾನ ಸೃಷ್ಟಿಸುವ ಯತ್ನದ ಆರೋಪದ ಮೇಲೆ ರಿಪಬ್ಲಿಟ್ ಟಿವಿ ಸಂಪಾದಕೀಯ ತಂಡದ ವಿರುದ್ಧ ಮುಂಬಯಿ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ.
ವಿನಾಕಾರಣ ಮುಂಬಯಿ ಪೊಲೀಸರನ್ನು ಗುರಿಯಾಗಿಸಿಕೊಂಡು ರಿಪಬ್ಲಿಕ್ ಸುದ್ದಿವಾಹಿನಿ ತಂಡ ವರದಿ ಮಾಡುತ್ತಿದೆ. ಈ ಮೂಲಕ ಪೊಲೀಸ್ ತಂಡದಲ್ಲಿ ಅಸಮಾಧಾನ ಹುಟ್ಟುಹಾಕಲಾಗುತ್ತಿದೆ. ಮುಂಬಯಿ ಪೊಲೀಸರ ಘನತೆಗೆ ಧಕ್ಕೆ ತರುವ ಯತ್ನವನ್ನೂ ಮಾಡಲಾಗಿದೆ ಎಂದು ವಿಶೇಷ ತಂಡದ ಸಬ್ ಇನ್ಸ್ಪೆಕ್ಟರ್ ಶಶಿಕಾಂತ್ ಪವಾರ್ ನೀಡಿರುವ ದೂರಿನಲ್ಲಿ ತಿಳಿಸಲಾಗಿದೆ.
ಟಿಆರ್ಪಿ ಹಗರಣ: ನಾಲ್ವರು ಆರೋಪಿಗಳು ಪೊಲೀಸ್ ಕಸ್ಟಡಿಗೆ, ರಿಪಬ್ಲಿಕ್ ಟಿವಿ ಸಿಎಫ್ಒಗೆ ಸಮನ್ಸ್
ಸುದ್ದಿವಾಹಿನಿಯ ಕಾರ್ಯನಿರ್ವಾಹಕ ಸಂಪಾದಕ ನಿರಂಜನ್ ನಾರಾಯಣಸ್ವಾಮಿ, ಡೆಪ್ಯುಟಿ ಎಡಿಟರ್ ಶಾವನ್ ಸೆನ್, ನಿರೂಪಕಿ ಶಿವಾನಿ ಗುಪ್ತಾ, ಡೆಪ್ಯುಟಿ ನ್ಯೂಸ್ ಎಡಿಟರ್ ಸಾಗರಿಕಾ ಮಿತ್ರಾ ಸೇರಿದಂತೆ ಹಲವರ ವಿರುದ್ಧ ಐಪಿಸಿಯ ವಿವಿಧ ಸೆಕ್ಷನ್ಗಳಡಿ ಪ್ರಕರಣ ದಾಖಲಿಸಲಾಗಿದೆ.
ರಿಪಬ್ಲಿಕ್ ಟಿವಿ ನಮಗೆ ನೇರವಾಗಿ ಹಣ ನೀಡಿದೆ - ನ್ಯಾಯಾಧೀಶರ ಮುಂದೆ ವೀಕ್ಷಕರ ಹೇಳಿಕೆ
ನಕಲಿ ಟಿಆರ್ಪಿ ಹಗರಣದಲ್ಲಿ ಸಿಕ್ಕಿಬಿದ್ದಿರುವ ರಿಪಬ್ಲಿಕ್ ಟಿವಿ ತಂಡ, ಪೊಲೀಸ್ ವಿಚಾರಣೆ ಎದುರಿಸುತ್ತಿದೆ. ಇದೇ ಸಂದರ್ಭದಲ್ಲಿಯೇ ಪೊಲೀಸರನ್ನು ಗುರಿಯಾಗಿಸಿಕೊಂಡು ವರದಿ ಮಾಡಲಾಗುತ್ತಿದೆ ಎಂದು ದೂರಲಾಗಿದೆ. ‘‘ಮುಂಬಯಿ ಪೊಲೀಸ್ ತಂಡದಲ್ಲಿ ಈಗ ಎಲ್ಲವೂ ಸರಿಯಿಲ್ಲ. ಹಿರಿಯ ಪೊಲೀಸ್ ಅಧಿಕಾರಿಗಳ ವಿರುದ್ಧ ಬಂಡಾಯದ ಬಿರುಗಾಳಿ ಎದ್ದಿದೆ. ನಗರ ಪೊಲೀಸರ ವಿಶ್ವಾಸಾರ್ಹತೆಯೇ ಇಕ್ಕಟ್ಟಿಗೆ ಸಿಲುಕಿದೆ,’’ ಎಂದು ರಿಪಬ್ಲಿಕ್ ಟಿವಿ ವರದಿ ಮಾಡಿದ್ದನ್ನು ದೂರಿನಲ್ಲಿ ಪ್ರಸ್ತಾಪಿಸಲಾಗಿದೆ.
ವಿನಾಕಾರಣ ಮುಂಬಯಿ ಪೊಲೀಸರನ್ನು ಗುರಿಯಾಗಿಸಿಕೊಂಡು ರಿಪಬ್ಲಿಕ್ ಸುದ್ದಿವಾಹಿನಿ ತಂಡ ವರದಿ ಮಾಡುತ್ತಿದೆ. ಈ ಮೂಲಕ ಪೊಲೀಸ್ ತಂಡದಲ್ಲಿ ಅಸಮಾಧಾನ ಹುಟ್ಟುಹಾಕಲಾಗುತ್ತಿದೆ. ಮುಂಬಯಿ ಪೊಲೀಸರ ಘನತೆಗೆ ಧಕ್ಕೆ ತರುವ ಯತ್ನವನ್ನೂ ಮಾಡಲಾಗಿದೆ ಎಂದು ವಿಶೇಷ ತಂಡದ ಸಬ್ ಇನ್ಸ್ಪೆಕ್ಟರ್ ಶಶಿಕಾಂತ್ ಪವಾರ್ ನೀಡಿರುವ ದೂರಿನಲ್ಲಿ ತಿಳಿಸಲಾಗಿದೆ.
ಟಿಆರ್ಪಿ ಹಗರಣ: ನಾಲ್ವರು ಆರೋಪಿಗಳು ಪೊಲೀಸ್ ಕಸ್ಟಡಿಗೆ, ರಿಪಬ್ಲಿಕ್ ಟಿವಿ ಸಿಎಫ್ಒಗೆ ಸಮನ್ಸ್
ಸುದ್ದಿವಾಹಿನಿಯ ಕಾರ್ಯನಿರ್ವಾಹಕ ಸಂಪಾದಕ ನಿರಂಜನ್ ನಾರಾಯಣಸ್ವಾಮಿ, ಡೆಪ್ಯುಟಿ ಎಡಿಟರ್ ಶಾವನ್ ಸೆನ್, ನಿರೂಪಕಿ ಶಿವಾನಿ ಗುಪ್ತಾ, ಡೆಪ್ಯುಟಿ ನ್ಯೂಸ್ ಎಡಿಟರ್ ಸಾಗರಿಕಾ ಮಿತ್ರಾ ಸೇರಿದಂತೆ ಹಲವರ ವಿರುದ್ಧ ಐಪಿಸಿಯ ವಿವಿಧ ಸೆಕ್ಷನ್ಗಳಡಿ ಪ್ರಕರಣ ದಾಖಲಿಸಲಾಗಿದೆ.
ರಿಪಬ್ಲಿಕ್ ಟಿವಿ ನಮಗೆ ನೇರವಾಗಿ ಹಣ ನೀಡಿದೆ - ನ್ಯಾಯಾಧೀಶರ ಮುಂದೆ ವೀಕ್ಷಕರ ಹೇಳಿಕೆ
ನಕಲಿ ಟಿಆರ್ಪಿ ಹಗರಣದಲ್ಲಿ ಸಿಕ್ಕಿಬಿದ್ದಿರುವ ರಿಪಬ್ಲಿಕ್ ಟಿವಿ ತಂಡ, ಪೊಲೀಸ್ ವಿಚಾರಣೆ ಎದುರಿಸುತ್ತಿದೆ. ಇದೇ ಸಂದರ್ಭದಲ್ಲಿಯೇ ಪೊಲೀಸರನ್ನು ಗುರಿಯಾಗಿಸಿಕೊಂಡು ವರದಿ ಮಾಡಲಾಗುತ್ತಿದೆ ಎಂದು ದೂರಲಾಗಿದೆ. ‘‘ಮುಂಬಯಿ ಪೊಲೀಸ್ ತಂಡದಲ್ಲಿ ಈಗ ಎಲ್ಲವೂ ಸರಿಯಿಲ್ಲ. ಹಿರಿಯ ಪೊಲೀಸ್ ಅಧಿಕಾರಿಗಳ ವಿರುದ್ಧ ಬಂಡಾಯದ ಬಿರುಗಾಳಿ ಎದ್ದಿದೆ. ನಗರ ಪೊಲೀಸರ ವಿಶ್ವಾಸಾರ್ಹತೆಯೇ ಇಕ್ಕಟ್ಟಿಗೆ ಸಿಲುಕಿದೆ,’’ ಎಂದು ರಿಪಬ್ಲಿಕ್ ಟಿವಿ ವರದಿ ಮಾಡಿದ್ದನ್ನು ದೂರಿನಲ್ಲಿ ಪ್ರಸ್ತಾಪಿಸಲಾಗಿದೆ.