ಆ್ಯಪ್ನಗರ

ಮುಂಬಯಿ ಪೊಲೀಸರಲ್ಲಿ ಅಸಮಾಧಾನ ಸೃಷ್ಟಿಗೆ ಯತ್ನ, ರಿಪಬ್ಲಿಟ್‌ ಟಿವಿ ವಿರುದ್ಧ ಎಫ್‌ಐಆರ್‌

ವಿನಾಕಾರಣ ಮುಂಬಯಿ ಪೊಲೀಸರನ್ನು ಗುರಿಯಾಗಿಸಿಕೊಂಡು ರಿಪಬ್ಲಿಕ್‌ ಟಿವಿ ತಂಡ ವರದಿ ಮಾಡುತ್ತಿದೆ. ಈ ಮೂಲಕ ಪೊಲೀಸ್‌ ತಂಡದಲ್ಲಿ ಅಸಮಾಧಾನ ಹುಟ್ಟುಹಾಕಲಾಗುತ್ತಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

Agencies 24 Oct 2020, 7:18 pm
ಮುಂಬಯಿ: ನಗರ ಪೊಲೀಸ್‌ ಪಡೆಯಲ್ಲಿ ಅಸಮಾಧಾನ ಸೃಷ್ಟಿಸುವ ಯತ್ನದ ಆರೋಪದ ಮೇಲೆ ರಿಪಬ್ಲಿಟ್‌ ಟಿವಿ ಸಂಪಾದಕೀಯ ತಂಡದ ವಿರುದ್ಧ ಮುಂಬಯಿ ಪೊಲೀಸರು ಎಫ್‌ಐಆರ್‌ ದಾಖಲಿಸಿದ್ದಾರೆ.
Vijaya Karnataka Web Arnab Goswami.


ವಿನಾಕಾರಣ ಮುಂಬಯಿ ಪೊಲೀಸರನ್ನು ಗುರಿಯಾಗಿಸಿಕೊಂಡು ರಿಪಬ್ಲಿಕ್‌ ಸುದ್ದಿವಾಹಿನಿ ತಂಡ ವರದಿ ಮಾಡುತ್ತಿದೆ. ಈ ಮೂಲಕ ಪೊಲೀಸ್‌ ತಂಡದಲ್ಲಿ ಅಸಮಾಧಾನ ಹುಟ್ಟುಹಾಕಲಾಗುತ್ತಿದೆ. ಮುಂಬಯಿ ಪೊಲೀಸರ ಘನತೆಗೆ ಧಕ್ಕೆ ತರುವ ಯತ್ನವನ್ನೂ ಮಾಡಲಾಗಿದೆ ಎಂದು ವಿಶೇಷ ತಂಡದ ಸಬ್‌ ಇನ್ಸ್‌ಪೆಕ್ಟರ್‌ ಶಶಿಕಾಂತ್‌ ಪವಾರ್‌ ನೀಡಿರುವ ದೂರಿನಲ್ಲಿ ತಿಳಿಸಲಾಗಿದೆ.

ಟಿಆರ್‌ಪಿ ಹಗರಣ: ನಾಲ್ವರು ಆರೋಪಿಗಳು ಪೊಲೀಸ್‌ ಕಸ್ಟಡಿಗೆ, ರಿಪಬ್ಲಿಕ್‌ ಟಿವಿ ಸಿಎಫ್‌ಒಗೆ ಸಮನ್ಸ್‌
ಸುದ್ದಿವಾಹಿನಿಯ ಕಾರ್ಯನಿರ್ವಾಹಕ ಸಂಪಾದಕ ನಿರಂಜನ್‌ ನಾರಾಯಣಸ್ವಾಮಿ, ಡೆಪ್ಯುಟಿ ಎಡಿಟರ್‌ ಶಾವನ್‌ ಸೆನ್‌, ನಿರೂಪಕಿ ಶಿವಾನಿ ಗುಪ್ತಾ, ಡೆಪ್ಯುಟಿ ನ್ಯೂಸ್‌ ಎಡಿಟರ್‌ ಸಾಗರಿಕಾ ಮಿತ್ರಾ ಸೇರಿದಂತೆ ಹಲವರ ವಿರುದ್ಧ ಐಪಿಸಿಯ ವಿವಿಧ ಸೆಕ್ಷನ್‌ಗಳಡಿ ಪ್ರಕರಣ ದಾಖಲಿಸಲಾಗಿದೆ.

ರಿಪಬ್ಲಿಕ್‌ ಟಿವಿ ನಮಗೆ ನೇರವಾಗಿ ಹಣ ನೀಡಿದೆ - ನ್ಯಾಯಾಧೀಶರ ಮುಂದೆ ವೀಕ್ಷಕರ ಹೇಳಿಕೆ
ನಕಲಿ ಟಿಆರ್‌ಪಿ ಹಗರಣದಲ್ಲಿ ಸಿಕ್ಕಿಬಿದ್ದಿರುವ ರಿಪಬ್ಲಿಕ್‌ ಟಿವಿ ತಂಡ, ಪೊಲೀಸ್‌ ವಿಚಾರಣೆ ಎದುರಿಸುತ್ತಿದೆ. ಇದೇ ಸಂದರ್ಭದಲ್ಲಿಯೇ ಪೊಲೀಸರನ್ನು ಗುರಿಯಾಗಿಸಿಕೊಂಡು ವರದಿ ಮಾಡಲಾಗುತ್ತಿದೆ ಎಂದು ದೂರಲಾಗಿದೆ. ‘‘ಮುಂಬಯಿ ಪೊಲೀಸ್‌ ತಂಡದಲ್ಲಿ ಈಗ ಎಲ್ಲವೂ ಸರಿಯಿಲ್ಲ. ಹಿರಿಯ ಪೊಲೀಸ್‌ ಅಧಿಕಾರಿಗಳ ವಿರುದ್ಧ ಬಂಡಾಯದ ಬಿರುಗಾಳಿ ಎದ್ದಿದೆ. ನಗರ ಪೊಲೀಸರ ವಿಶ್ವಾಸಾರ್ಹತೆಯೇ ಇಕ್ಕಟ್ಟಿಗೆ ಸಿಲುಕಿದೆ,’’ ಎಂದು ರಿಪಬ್ಲಿಕ್‌ ಟಿವಿ ವರದಿ ಮಾಡಿದ್ದನ್ನು ದೂರಿನಲ್ಲಿ ಪ್ರಸ್ತಾಪಿಸಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ