ಆ್ಯಪ್ನಗರ

ಚುನಾವಣಾ ಪ್ರಣಾಳಿಕೆಯ ಭರವಸೆ ಈಡೇರಿಸಿದ ಶಿವಸೇನೆ, 10 ರೂ. ಊಟದ 'ಶಿವ ಭೋಜನ' ಯೋಜನೆಗೆ ಚಾಲನೆ

ಶಿವಸೇನೆಯು ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿದ್ದ ಭರವಸೆಯಂತೆ 10 ರೂ.ಗೆ ಊಟ ನೀಡುವ 'ಶಿವ ಭೋಜನ' ಯೋಜನೆಗೆ ಗಣರಾಜ್ಯೋತ್ಸವ ದಿನದಂದು ಚಾಲನೆ ನೀಡಲಾಗಿದೆ. ಮುಂಬಯಿ ಸೇರಿದಂತೆ ರಾಜ್ಯದ ಪ್ರತಿ ಜಿಲ್ಲೆಯಲ್ಲಿಯೂ ಜಿಲ್ಲಾಉಸ್ತುವಾರಿ ಸಚಿವರು ಯೋಜನೆಗೆ ಚಾಲನೆ ನೀಡಿದರು.

Vijaya Karnataka Web 27 Jan 2020, 2:18 pm
ಮುಂಬಯಿ: ಶಿವಸೇನೆಯು ಚುನಾವಣಾ ಪ್ರಣಾಳಿಕೆಯಲ್ಲಿನೀಡಿದ್ದ ಭರವಸೆಯಂತೆ 10 ರೂ.ಗೆ ಊಟ ನೀಡುವ 'ಶಿವ ಭೋಜನ' ಯೋಜನೆಗೆ ಗಣರಾಜ್ಯೋತ್ಸವ ದಿನದಂದು ಚಾಲನೆ ನೀಡಲಾಗಿದೆ.
Vijaya Karnataka Web shiv sena


ಮುಂಬಯಿ ಸೇರಿದಂತೆ ರಾಜ್ಯದ ಪ್ರತಿ ಜಿಲ್ಲೆಯಲ್ಲಿಯೂ ಜಿಲ್ಲಾಉಸ್ತುವಾರಿ ಸಚಿವರು ಯೋಜನೆಗೆ ಚಾಲನೆ ನೀಡಿದರು. ಆರಂಭದಲ್ಲಿ 50 ಕ್ಯಾಂಟೀನ್‌ಗಳ ಮೂಲಕ ಪ್ರಾಯೋಗಿಕಕವಾಗಿ ಯೋಜನೆಯನ್ನು ಅನುಷ್ಠಾನಗೊಳಿಸಿ, ನಂತರ ರಾಜ್ಯಾದ್ಯಂತ ವಿಸ್ತರಿಸಲಾಗುತ್ತದೆ.

ಈ ಯೋಜನೆಯಂತೆ ಪ್ರತಿ ಜಿಲ್ಲಾಕೇಂದ್ರದಲ್ಲಿಯೂ ಕ್ಯಾಂಟೀನ್‌ ತೆರೆದು ಕೇವಲ ಹತ್ತು ರೂಪಾಯಿಗೆ ಊಟ ನೀಡಲಾಗುತ್ತದೆ. ಊಟವು ಎರಡು ಚಪಾತಿ, ಅನ್ನ, ಪಲ್ಯ, ದಾಲ್‌ ಒಳಗೊಂಡಿರುತ್ತದೆ. ಮಧ್ಯಾಹ್ನ 12ರಿಂದ 2 ಗಂಟೆವರೆಗೆ 'ಶಿವ ಭೋಜನ' ಲಭ್ಯ. ಪ್ರತಿ ಕ್ಯಾಂಟೀನ್‌ನಲ್ಲಿನಿತ್ಯ ಕನಿಷ್ಠ 500 ಊಟ ನೀಡುವ ಗುರಿ ಹೊಂದಲಾಗಿದೆ.

ಶಿರಡಿ ಸಾಯಿಬಾಬಾ ಜನ್ಮಸ್ಥಳ ವಿವಾದ ಸುಖಾಂತ್ಯ: ಗ್ರಾಮಸ್ಥರ ಮನವೊಲಿಸಿದ ಮಹಾ ಸಿಎಂ ಠಾಕ್ರೆ

ಮುಂದಿನ ಮೂರು ತಿಂಗಳಲ್ಲಿ ಯೋಜನೆಗಾಗಿ 6.4 ಕೋಟಿ ರೂ.ಗಳನ್ನು ಸರಕಾರ ಮೀಸಲಿರಿಸಿದೆ. ''ನಗರ ಪ್ರದೇಶದಲ್ಲಿಒಂದು ಊಟಕ್ಕೆ 50 ರೂ. ಮತ್ತು ಗ್ರಾಮೀಣ ಪ್ರದೇಶದಲ್ಲಿ 35 ರೂ. ವೆಚ್ಚವಾಗಲಿದೆ. ಸಹಾಯಧನದ ರೂಪದಲ್ಲಿ ರಾಜ್ಯ ಸರಕಾರವೇ ಉಳಿದ ಮೊತ್ತ ಭರಿಸಲಿದೆ,'' ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ