ಆ್ಯಪ್ನಗರ

ಸಿಎಂ ಮುಖವಾಡ ಕಳಚಿಟ್ಟು ವಿರೋಧ ಪಕ್ಷಗಳ ಬಗ್ಗೆ ಮಾತನಾಡ್ತೇನೆ- ಬಿಜೆಪಿಗೆ ಉದ್ಧವ್‌ ಠಾಕ್ರೆ ಎಚ್ಚರಿಕೆ

'ನೀವುಗಳು ಆಡುತ್ತಿರುವ ರಾಜಕೀಯ ಆಟ ಮತ್ತು ಮಹಾರಾಷ್ಟ್ರದ ಹೆಸರು ಕೆಡಿಸಲು ನಡೆಸುತ್ತಿರುವ ಸಂಚಿನ ಬಗ್ಗೆ ಮಾತನಾಡುತ್ತೇನೆ,' ಎಂದು ಎಂದು ಬಿಜೆಪಿ ಹೆಸರು ಹೇಳದೇ ಉದ್ಧವ್‌ ಠಾಕ್ರೆ ಎಚ್ಚರಿಕೆ ನೀಡಿದ್ದಾರೆ.

TIMESOFINDIA.COM 14 Sep 2020, 5:20 pm
ಮುಂಬಯಿ: ಬಿಜೆಪಿಯ ಹೆಸರು ಉಲ್ಲೇಖಿಸದೆ ವಿರೋಧ ಪಕ್ಷಗಳಿಗೆ ಎಚ್ಚರಿಕೆ ನೀಡಿರುವ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ, ಒಂದು ದಿನ ಸಿಎಂ ಮುಖವಾಡ ಕಳಚಿಟ್ಟು ಬರುತ್ತೇನೆ. ಅವತ್ತು ನೀವುಗಳು ಆಡುತ್ತಿರುವ ರಾಜಕೀಯ ಆಟ ಮತ್ತು ಮಹಾರಾಷ್ಟ್ರದ ಹೆಸರು ಕೆಡಿಸಲು ನಡೆಸುತ್ತಿರುವ ಸಂಚಿನ ಬಗ್ಗೆ ಮಾತನಾಡುತ್ತೇನೆ ಎಂದು ಗುಡುಗಿದ್ದಾರೆ.
Vijaya Karnataka Web Uddhav Thackeray
ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ


ಸುಶಾಂತ್‌ ಸಿಂಗ್‌ ರಜಪೂತ್‌ ಸಾವಿನ ಬಗ್ಗೆ ಮುಂಬಯಿ ಪೊಲೀಸರು ನಡೆಸುತ್ತಿರುವ ತನಿಖೆ ಹಾಗೂ ಕಂಗಾನಾ ರಣಾವತ್‌ಗೆ ಸೇರಿದ ಬಾಂದ್ರಾ ಬಂಗ್ಲೆಯ ಅಕ್ರಮ ಭಾಗವನ್ನು ಕೆಡವಿದ ಸಂಬಂಧ ಕೇಳಿಬರುತ್ತಿರುವ ರಾಜಕೀಯ ಆರೋಪಕ್ಕೆ ಸಂಬಂಧಿಸಿದಂತೆ ಅವರು ಈ ಪ್ರತಿಕ್ರಿಯೆ ನೀಡಿದ್ದಾರೆ.

“ಈ ವಿಚಾರದ ಬಗ್ಗೆ ನಾನು ಮಾತನಾಡುತ್ತಿಲ್ಲ ಎಂದರೆ ಅದರರ್ಥ ನನ್ನ ಬಳಿ ಉತ್ತರವಿಲ್ಲ ಎಂದಲ್ಲ. ಆದರೆ ಮುಖ್ಯಮಂತ್ರಿಯಾಗಿ ನಾನು ಈ ಕುರ್ಚಿಗೆ ಗೌರವ ನೀಡಬೇಕಾಗಿದೆ,” ಎಂದು ಠಾಕ್ರೆ ಹೇಳಿದ್ದಾರೆ.

ಇದೇ ವೇಳೆ ಠಾಕ್ರೆ ಕೊರೊನಾ ವೈರಸ್‌ ಹಾಗೂ ರಾಜಕೀಯ ಬಿಕ್ಕಟ್ಟಿನ ವಿರುದ್ಧ ಹೋರಾಡುವುದಾಗಿ ಭರವಸೆ ನೀಡಿದ್ದಾರೆ. ತಮ್ಮ ಸರಕಾರ ಸಾಂಕ್ರಾಮಿಕ ರೋಗವನ್ನು ತಡೆಗಟ್ಟಲು ಸಾಕಷ್ಟ್ರು ಶ್ರಮಿಸಿದೆ ಎಂದಿರುವ ಅವರು, “ಕೆಲವರು ಕೋವಿಡ್‌-19 ಮುಗಿಯಿತು ಇನ್ನು ನಮ್ಮ ರಾಜಕೀಯ ಮುಂದುವರಿಸಬಹುದು ಎಂದುಕೊಂಡಿದ್ದಾರೆ. ಅವರು ಮತ್ತೆ ಇದನ್ನು ಆರಂಭಿಸಿದ್ದಾರೆ. ಇದು ದೊಡ್ಡ ವಿಷಯವಲ್ಲ. ಆದರೆ ಸದ್ಯಕ್ಕೆ ನಾನು ರಾಜಕೀಯದ ಬಗ್ಗೆ ಮಾತನಾಡುವುದಿಲ್ಲ,” ಎಂದಿದ್ದಾರೆ.

ಇದೇ ವೇಳೆ ಶಿವಸೇನಾ ಸಂಸದ ಸಂಜಯ್‌ ರಾವತ್‌, ಮುಂಬಯಿ ನಗರವನ್ನು ಪಾಕ್‌ ಆಕ್ರಮತಿ ಕಾಶ್ಮೀರ ಹಾಗೂ ಬೃಹನ್‌ಮುಂಬಯಿ ಮಹಾನಗರ ಪಾಲಿಕೆಯನ್ನು ಬಾಬರ್‌ ಎಂದು ಕರೆದಿದ್ದ ಕಂಗನಾ ರಣಾವತ್‌ರನ್ನು ಬಿಜೆಪಿ ಬೆಂಬಲಿಸಿದ್ದು ದುರದೃಷ್ಟಕರ ಎಂದು ಹೇಳಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ