ಆ್ಯಪ್ನಗರ

ಅಂಗನವಾಡಿ ಕಾರ್ಯಕರ್ತೆಯರ ಪ್ರತಿಭಟನೆ

ವಿವಿಧ ಬೇಡಿಕೆ ಈಡೇರಿಸಬೇಕೆಂದು ಒತ್ತಾಯಿಸಿ ಅಂಗನವಾಡಿ ಕಾರ್ಯಕತೆಯರು ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದರು.

ವಿಕ ಸುದ್ದಿಲೋಕ 11 Mar 2016, 4:28 am
ತಿ.ನರಸೀಪುರ: ವಿವಿಧ ಬೇಡಿಕೆ ಈಡೇರಿಸಬೇಕೆಂದು ಒತ್ತಾಯಿಸಿ ಅಂಗನವಾಡಿ ಕಾರ್ಯಕತೆಯರು ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದರು.
Vijaya Karnataka Web
ಅಂಗನವಾಡಿ ಕಾರ್ಯಕರ್ತೆಯರ ಪ್ರತಿಭಟನೆ


ಪಟ್ಟಣದ ಸಿಡಿಪಿಒ ಕಚೇರಿ ಬಳಿ ಜಮಾಹಿಸಿದ ಡಿವೈಎಫ್‌ಐ ಮತ್ತು ಅಂಗನವಾಡಿ ಕಾರ್ಯಕತೆಯರು ಹಾಗೂ ಸಹ ಕಾರ್ಯಕತೆರು ಜೊತೆಗೂಡಿ ಲಿಂಕ್ ರಸ್ತೆ ಮೂಲಕ ಚಲಿಸಿ ಖಾಸಗಿ ಬಸ್ ನಿಲ್ದಾಣ ಬಳಿ ಮಾನವ ಸರಪಣಿ ನಿರ್ಮಿಸಿ ಕೇಂದ್ರ ಸರಕಾರದ ವಿರೋಧ ಘೋಷಣೆ ಕೂಗಿದರು.

ನಂತರ ಮಾತನಾಡಿದ ಕಾರ್ಯಕರ್ತರು ಏಳನೇ ಕೇಂದ್ರ ವೇತನ ಆೋಗದ ಶಿಫಾರಸಿನಂತೆ ಕನಿಷ್ಠ ಕೂಲಿ ವೇತನ 18 ಸಾವಿರ ರೂ. ಸಮಾನ ವೇತನ, ಭವಿಷ್ಯ ನಿಧಿ ನೀಡಬೇಕು, ಕಾರ್ಮಿಕರ ಕಾ್ದೆುಯನ್ನು ಕಟ್ಟುನಿಟ್ಟಾಗಿ ಸರಕಾರ ಹಾಗೂ ಇಲಾಖೆ ಪಾಲಿಸುವಂತಾಗಬೇಕು ಎಂದು ಒತ್ತಾಯಿಸಿದರು.

ಕಾರ್ಖಾನೆಗಳು ಕಾರ್ಮಿಕರ ಬಳಿ ಟ್ರೈನಿ ಎಂದು ಅವ್ಯಾಹತವಾಗಿ ದುಡಿಸಿಕೊಳ್ಳಲಾಗುತ್ತಿದೆ. ಇಂತಹ ಕಾರ್ಮಿಕರ ಸೇವೆಯನ್ನು ಕಾಯಂ ಮಾಡಲು ಶಾಸನ ಬದ್ಧ ಕ್ರಮ ಕೈಗೊಳ್ಳಬೇಕು ಮತ್ತು ಗುತ್ತಿಗೆ-ಹೊರಗುತ್ತಿಗೆ ಪದ್ಧತಿಯನ್ನು ರದ್ಧುಗೊಳಿಸಬೇಕು ಎಂದರು.

ಬಿಸಿಯೂಟ ನೌಕರರು ಮಾಸಿಕ ವೇತನ 1600 ರೂ. ಗಳಿಗೆ ದುಡಿಯುತ್ತಿದ್ದು, ಇವರ ಬದುಕು ಗಂಭೀರ ಸ್ಥಿತಿಯಲ್ಲಿದೆ, ಕೂಡಲೇ ಕೇಂದ್ರ ಮತ್ತು ರಾಜ್ಯ ಸರಕಾರಗಳು ಅಂಗನವಾಡಿ ಕಾರ್ಯಕರ್ತರ ಬೇಡಿಕೆಗಳು ಶ್ರೀದಲ್ಲೇ ಈಡೇರಿಸಬೇಕೆಂದು ಒತ್ತಾಯಿಸಿದರು.

ಸ್ಥಳಕ್ಕೆ ಆಗಮಿಸಿದ ತಹಸೀಲ್ದಾರ್ ಆರ್.ಶೂಲದಯ್ಯ ಮನವಿ ಸ್ವೀಕರಿಸಿದರು.

ತಾಲೂಕು ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಷನ್ ಅಧ್ಯಕ್ಷ ಸಿ.ಪುಟ್ಟಮಲ್ಲಯ್ಯ, ಕಾರ್ಯದರ್ಶಿ ಎಂ.ಮಹದೇವಸ್ವಾಮಿ, ಸದಸ್ಯರಾದ ಲಿಂಗರಾಜು, ಎ.ಐ. ಟಿ.ಯು. ಸಿ ಯ ಮಹಿಳೆ ಅಧ್ಯಕ್ಷೆ ಎಂ.ಮಹದೇವಮ್ಮ, ಉಪಾಧ್ಯಕ್ಷೆ ಎಸ್. ಮಹದೇವಮ್ಮ, ಕಾರ್ಯದರ್ಶಿ ಸರೋಜಮ್ಮ, ಸುನಂದ, ಬಿ.ಮಹದೇವಮ್ಮ, ಶಿವಮ್ಮ, ದಿವ್ಯ, ಲಕ್ಷಮ್ಮ ಇತರೇ ಕಾರ್ಯಕರ್ತರು ಭಾಗವಹಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ